ಫೈನಾನ್ಸ್ ಮತ್ತು ಮೀಟರ್ ಬಡ್ಡಿದಾರರ ಕಿರುಕುಳ ಸಾವಿಗೆ ಕಾರಣವಾಯ್ತಾ? ಆತ್ಮಹತ್ಯೆ ಕೇಸ್ನಲ್ಲಿ ನಾಲ್ವರ ವಿರುದ್ಧ ಎಫ್ಐಆರ್
Did the harassment of finance and meter moneylenders lead to the death? FIR lodged against four in suicide case
![ಫೈನಾನ್ಸ್ ಮತ್ತು ಮೀಟರ್ ಬಡ್ಡಿದಾರರ ಕಿರುಕುಳ ಸಾವಿಗೆ ಕಾರಣವಾಯ್ತಾ? ಆತ್ಮಹತ್ಯೆ ಕೇಸ್ನಲ್ಲಿ ನಾಲ್ವರ ವಿರುದ್ಧ ಎಫ್ಐಆರ್](https://malenadutoday.com/uploads/images/202211/image_750x_6387424e40ebd.jpg)
ಡೆತ್ ನೋಟ್ ಬರೆದಿಟ್ಟು ಯುವಕ ಸಾವಿಗೀಡಾದ (suicide) ಪ್ರಕರಣ ಸಂಬಂಧ ಎಫ್ಐಆರ್ (FIR) ದಾಖಲಾಗಿದೆ. ಫೈನಾನ್ಸ್ವೊಂದರ ಮೂವರು ಅಧಿಕಾರಿಗಳ ವಿರುದ್ಧ ಹಾಗೂ ಮೀಟರ್ ದಂಧೆ ನಡೆಸುವ ಆರೋ ಹೊತ್ತಿರುವ ವ್ಯಕ್ತಿಯೊಬ್ಬನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
BREAKING : ಈಗ ಕನ್ಫರ್ಮ್ ! 2 ತಿಂಗಳ ಕಾಲ ಹುಲಿಕಲ್ ಘಾಟಿ ಬಂದ್! ವಾಹನ ಸವಾರರಿಗೆ ಇಲ್ಲಿದೆ ಅಗತ್ಯ ಮಾಹಿತಿ
ನವುಲೆಯ ವಿನಾಯಕ ನಗರದ ನಿವಾಸಿ ಯಶವಂತ್ ಡೆತ್ ನೋಟು ಬರೆದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.ಈತ ಫೈನಾನ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿತ್ತು. ಅಲ್ಲದೆ ಫೈನಾನ್ಸ್ನ ಅಧಿಕಾರಿಗಳು ಹಾಗೂ ಮೀಟರ್ ಬಡ್ಡಿಯ ಆರೋಪದದಲ್ಲಿರುವ ವ್ಯಕ್ತಿಯು ಯಶವಂತ್ಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಮನೆಗೆ ಬಂದು ಆಗಾಗ್ಗೆ ಹಣದ ವಿಚಾರದಲ್ಲಿ ಗಲಾಟೆ ಮಾಡಿರುವುದಾಗಿ ಮೃತ ಯಶವಂತ್ ನ ಪತ್ನಿ ಆರೋಪಿಸಿದ್ದರು. ಇನ್ನೂ ಇದೇ ವಿಚಾರದಲ್ಲಿ ದೂರು ದಾಖಲಾಗುತ್ತಿದ್ದಂತೆ ಮೂವರು ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಯಾವುದೋ ಕೆಲಸಕ್ಕಾಗಿ ಪತ್ನಿ ಮಾರ್ನಮಿಬೈಲಿಗೆ ತೆರಳಿದ್ದ ವೇಳೆ ಮನೆಯಲ್ಲೇ ಇದ್ದ ಯಶವಂತ್ ಮಾನಸಿಕ ಹಿಂಸೆಯಿಂದ ಸೀರೆಗೆ ಉರುಳುಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಡೆತ್ನೋಟ್ನಲ್ಲಿ ನಾನು ಮಾಡದ ತಪ್ಪಿಗೆ ಹಣದುರುಪಯೋಗದ ಆರೋಪ ಮಾಡಿ ಆತ್ಮಹತ್ಯೆಗೆ ಕಾರಣವಾಗಿದ್ದಾರೆ ಎಂದು ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ಆಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್ಪಿ ಹೇಳಿದ್ದೇನು!?
*Shivamogga news : ಕಾಲೇಜು ಕ್ಯಾಂಪಸ್ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್*
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com