ಫೈನಾನ್ಸ್​ ಮತ್ತು ಮೀಟರ್ ಬಡ್ಡಿದಾರರ ಕಿರುಕುಳ ಸಾವಿಗೆ ಕಾರಣವಾಯ್ತಾ? ಆತ್ಮಹತ್ಯೆ ಕೇಸ್​ನಲ್ಲಿ ನಾಲ್ವರ ವಿರುದ್ಧ ಎಫ್​ಐಆರ್​

Did the harassment of finance and meter moneylenders lead to the death? FIR lodged against four in suicide case

ಫೈನಾನ್ಸ್​  ಮತ್ತು ಮೀಟರ್ ಬಡ್ಡಿದಾರರ ಕಿರುಕುಳ ಸಾವಿಗೆ ಕಾರಣವಾಯ್ತಾ? ಆತ್ಮಹತ್ಯೆ ಕೇಸ್​ನಲ್ಲಿ ನಾಲ್ವರ ವಿರುದ್ಧ ಎಫ್​ಐಆರ್​
ಫೈನಾನ್ಸ್​ ಮತ್ತು ಮೀಟರ್ ಬಡ್ಡಿದಾರರ ಕಿರುಕುಳ ಸಾವಿಗೆ ಕಾರಣವಾಯ್ತಾ? ಆತ್ಮಹತ್ಯೆ ಕೇಸ್​ನಲ್ಲಿ ನಾಲ್ವರ ವಿರುದ್ಧ ಎಫ್​ಐಆರ್​

ಡೆತ್ ನೋಟ್ ಬರೆದಿಟ್ಟು ಯುವಕ ಸಾವಿಗೀಡಾದ (suicide) ಪ್ರಕರಣ ಸಂಬಂಧ ಎಫ್​ಐಆರ್​ (FIR) ದಾಖಲಾಗಿದೆ.  ಫೈನಾನ್ಸ್‌ವೊಂದರ ಮೂವರು ಅಧಿಕಾರಿಗಳ ವಿರುದ್ಧ ಹಾಗೂ ಮೀಟರ್ ದಂಧೆ ನಡೆಸುವ ಆರೋ ಹೊತ್ತಿರುವ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ ಐಆರ್ ದಾಖಲಾಗಿದೆ.

BREAKING : ಈಗ ಕನ್​​ಫರ್ಮ್​ ! 2 ತಿಂಗಳ ಕಾಲ ಹುಲಿಕಲ್ ಘಾಟಿ ಬಂದ್​! ವಾಹನ ಸವಾರರಿಗೆ ಇಲ್ಲಿದೆ ಅಗತ್ಯ ಮಾಹಿತಿ

ನವುಲೆಯ ವಿನಾಯಕ ನಗರದ ನಿವಾಸಿ ಯಶವಂತ್ ಡೆತ್‌ ನೋಟು ಬರೆದು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದ.ಈತ ಫೈನಾನ್ಸ್​ವೊಂದರಲ್ಲಿ ಕೆಲಸ  ಮಾಡುತ್ತಿದ್ದ ಎಂದು ತಿಳಿದುಬಂದಿತ್ತು. ಅಲ್ಲದೆ ಫೈನಾನ್ಸ್​ನ ಅಧಿಕಾರಿಗಳು ಹಾಗೂ ಮೀಟರ್​ ಬಡ್ಡಿಯ ಆರೋಪದದಲ್ಲಿರುವ ವ್ಯಕ್ತಿಯು ಯಶವಂತ್‌ಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಮನೆಗೆ ಬಂದು ಆಗಾಗ್ಗೆ ಹಣದ ವಿಚಾರದಲ್ಲಿ ಗಲಾಟೆ ಮಾಡಿರುವುದಾಗಿ ಮೃತ ಯಶವಂತ್ ನ ಪತ್ನಿ ಆರೋಪಿಸಿದ್ದರು. ಇನ್ನೂ ಇದೇ ವಿಚಾರದಲ್ಲಿ ದೂರು ದಾಖಲಾಗುತ್ತಿದ್ದಂತೆ ಮೂವರು ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ.  

JDS: ಪ್ರಧಾನಿ ನರೇಂದ್ರ ಮೋದಿ ಆಗಮನದ ವೇಳೆ VISL ಗಾಗಿ ಉಗ್ರ ಹೋರಾಟ! ಜೆಡಿಎಸ್​ ವರಿಷ್ಟ ಹೆಚ್​​.ಡಿ. ಕುಮಾರ ಸ್ವಾಮಿ ಕೊಟ್ಟ ಕರೆಯೇನು!?

ಯಾವುದೋ ಕೆಲಸಕ್ಕಾಗಿ  ಪತ್ನಿ ಮಾರ್ನಮಿಬೈಲಿಗೆ ತೆರಳಿದ್ದ ವೇಳೆ ಮನೆಯಲ್ಲೇ ಇದ್ದ ಯಶವಂತ್‌ ಮಾನಸಿಕ ಹಿಂಸೆಯಿಂದ ಸೀರೆಗೆ ಉರುಳುಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಡೆತ್​ನೋಟ್​ನಲ್ಲಿ  ನಾನು ಮಾಡದ ತಪ್ಪಿಗೆ ಹಣದುರುಪಯೋಗದ ಆರೋಪ ಮಾಡಿ ಆತ್ಮಹತ್ಯೆಗೆ ಕಾರಣವಾಗಿದ್ದಾರೆ ಎಂದು  ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಎಫ್​ಐಆರ್ ಆಗಿದೆ. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?

*Shivamogga news : ಕಾಲೇಜು ಕ್ಯಾಂಪಸ್‌ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com