ವೇಲು ಎಳೆದು, ನದಿಗೆ ಹಾರಲು ಹೊರಟ ಮಹಿಳೆಯನ್ನ ತಡೆದ ನಾಯಿ | ಕುಡಿದ ಮತ್ತಲ್ಲಿ ವಿಷಯ ಕುಡಿದ ಹಿರಿಯ

in Uppinangady, a woman's life was saved by her dog as she attempted to jump into the Netravati River. 

ವೇಲು ಎಳೆದು, ನದಿಗೆ ಹಾರಲು ಹೊರಟ ಮಹಿಳೆಯನ್ನ ತಡೆದ ನಾಯಿ | ಕುಡಿದ ಮತ್ತಲ್ಲಿ ವಿಷಯ ಕುಡಿದ ಹಿರಿಯ
Netravati River

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ 

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸೊರಬದಲ್ಲಿ ವರದಿಯಾಗಿದೆ. ಇಲ್ಲಿನಗೆ ತಂಡಿಗೆ ಗ್ರಾಮದಲ್ಲಿನ ರಾಜಪ್ಪ ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಅವರು ಕುಡಿದ ಅಮಲಿನಲ್ಲಿ ವಿಷ ಸೇವಿಸಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಸೊರಬದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯವೊಂದರಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಅನಾರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಜೀವ ಉಳಿಸಿದ ನಾಯಿ

ವಿಶೇಷ ಅನಿಸುವ ಘಟನೆಯೊಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಇಲ್ಲಿನ ನೇತ್ರಾವತಿ ನದಿಯ ಬಳಿಯಲ್ಲಿ ಗುರುವಾರ ರಾತ್ರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ನೇತ್ರಾವತಿ ಸೇತುವೆ ಬಳಿಯಲ್ಲಿ ಅವರು ನದಿಗೆ ಹಾರಲು ಪ್ರಯತ್ನಿಸಿದ್ದ ಅವರ ವೇಲನ್ನ ಕಚ್ಚಿ ಹಿಡಿದು ನಾಯೊಂದು ಹಿಂದಕ್ಕೆ ಜಗ್ಗುತ್ತಿತ್ತು. ಇದನ್ನ ಗಮನಿಸಿದ ಬೈಕ್‌ ಸವಾರರೊಬ್ಬರು ಅಲ್ಲಿನ ಊರಿನವರಿಗೆ ಏಂತದೋ ನಡೆಯುತ್ತಿದೆ ಇಲ್ಲಿ, ಸಂಶಯ ಬರುತ್ತಿದೆ ಎಂದು ವಿಷಯ ತಿಳಿಸಿದ್ದಾರೆ. ತಕ್ಷಣ ಬಂದ ಸ್ಥಳಿಯರು ಮಹಿಳೆಯನ್ನ ವಿಚಾರಿಸಿದಾಗ ಆಕೆ ಆತ್ಮಹತ್ಯೆಗೆ ಯತ್ನಿಸಲು ಬಂದಿರುವುದು ಗೊತ್ತಾಗಿದೆ. ಆದರೆ ಅವರ ಮನೆಯ ನಾಯಿಯು ಮಹಿಳೆಯನ್ನ ಹಿಂಬಾಲಿಸಿ ಆಕೆ ಹೊಳೆಗೆ ಹಾರಲು ಬಿಡದೇ ಹಿಂದಕ್ಕೆ ಎಳೆದಾಡುತ್ತಿತ್ತು. ಇದರಿಂದ ಊರಿನವರಿಗೆ ವಿಷಯ ಗೊತ್ತಾಗಿ ಮಹಿಳೆ ಬಚಾವ್‌ ಆಗಿದ್ದಾಳೆ. ಆನಂತರ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಕೌಟುಂಬಿಕ ಕಲಹದಿಂದ ಮಹಿಳೆ ಈ ಕೃತ್ಯಕ್ಕೆ ಮುಂದಾಗಿದ್ದಳು ಎಂಬುದು ಗೊತ್ತಾಗಿದೆ.  

in Uppinangady, a woman's life was saved by her dog as she attempted to jump into the Netravati River.