ಶಿವಮೊಗ್ಗ ವಾಟರ್ ಸಪ್ಲೈ ಅಪ್ಡೇಟ್: ಎರಡು ದಿನ ಕುಡಿಯುವ ನೀರು ಬರುವುದಿಲ್ಲ! ಕಾರಣವಿದೆ

Shimoga Water Supply Disruption on Feb 7 and 8 Due to Maintenance

Shivamogga | ಶಿವಮೊಗ್ಗ ನಾಗರಿಕರ ಗಮನಕ್ಕೆ! ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆಯಲ್ಲಿ ವತ್ಯಯವಾಗುವ ವಿಷಯದ ಬಗ್ಗೆ ಇಲ್ಲೊಂದು ಸುದ್ದಿ ಬಂದಿದೆ. ನಗರದ ವಿದ್ಯಾನಗರ ಮಧ್ಯಂತರ ಉನ್ನತ ಮಟ್ಟದ ಜಲಾಗಾರಕ್ಕೆ ನೀರು ಸರಬರಾಜು ಮಾಡುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಶಿವಮೊಗ್ಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು … Read more

ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ

Shimoga APMC License Renewal Deadline set for February 28 ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ

Shivamogga : ಲೈಸೆನ್ಸ್​ ಪಡೆದಿರುವ ವರ್ತಕರಿಗೆ ಇಲ್ಲೊಂದು ನೋಟಿಸ್​ ಇದೆ. ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿರುವ ವರ್ತಕರು ತಮ್ಮ ವ್ಯಾಪಾರ ಪರವಾನಗಿಯನ್ನು ನವೀಕರಿಸಿಕೊಳ್ಳುವಂತೆ ಎಪಿಎಂಸಿ ಆಡಳಿತ ಮಂಡಳಿ ಸೂಚನೆ ನೀಡಿದೆ.  2016 ರಿಂದ 2026 ನೇ ಸಾಲಿನ ಅವಧಿಗೆ ಲೈಸೆನ್ಸ್ ಪಡೆದಿರುವ ವರ್ತಕರ ಪರವಾನಗಿಯ ಅವಧಿಯು ಇದೇ ಬರುವ 2026 ರ ಮಾರ್ಚ್ 31 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ತಮ್ಮ ಪರವಾನಗಿಯನ್ನು ನವೀಕರಿಸಲು ಇಚ್ಛಿಸುವ ಪೇಟೆ … Read more

ಒಂದು ಫೋನ್​ ಕಾಲ್​ ಎಲ್ಲದಕ್ಕೂ ಕಾರಣವಾಯ್ತಾ!? ಕರುಣಾಕರ ಕಥೆ

Siddapura Case and karunakara bhat story Daughter Reveals Shocking Details About Mother Suchitra

Shivamogga : ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಸುಚಿತ್ರಾರ ಪುತ್ರಿ ಮಾಧ್ಯಮಗಳ ಜೊತೆಗೆ ಇನ್ನೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.  ಜ್ಯೋತಿಷ್ಯ ಹೇಳುವ ಮೂಲಕ ಸಾಕಷ್ಟು ಸಂಪಾದನೆ ಮಾಡಿದ್ದ ಕಮಲಾಕರ ಆ ದುಡ್ಡಿನಿಂದಲೇ ಸುಚಿತ್ರಾರಿಗೆ ಬೇಕಿದ್ದ ಎಲ್ಲವನ್ನು ಕೊಡಿಸುತ್ತಿದ್ದರಂತೆ. ಶಿವಮೊಗ್ಗದ ಪಂಪಾನಗರದಲ್ಲಿ ವಾಸವಿದ್ದ ಕಮಲಾಕರ  ಕನಸು ಎಂಟರ್ಪ್ರೈಸಸ್ ಹೆಸರಿನಲ್ಲಿ ಬಿಪಿಓ ಮತ್ತು ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದರು. ಅಲ್ಲಿಗೆ ಒಂಬತ್ತು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದವರು … Read more

3 ತಿಂಗಳು ಡ್ರೈವಿಂಗ್ ಲೈಸನ್ಸ್​ ಅಮಾನತು.! ಐಸಿಸಿಗೆ ಬಿಸಿಸಿಐ ನೇ ದೊಡ್ಡಣ್ಣ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

Malenadu Today ePaper

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್​ಗೆ ನೇರವಾಗಿ ಒದಗಿಸುವ ಉದ್ದೇಶದಲ್ಲಿ ಈ ಪಯುಣ ನಿರಂತರವಾಗಿ ಯಶಸ್ವಿಯಾಗಿ ಸಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ಸಹ ನಡೆದಿವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಾ ಮಲೆನಾಡು ಟುಡೆ ಪತ್ರಿಕೆಯ ಇವತ್ತಿನ ಸಂಚಿಕೆಯ ಈ ಪೇಪರ್ ಕಾಪಿಯನ್ನು ಇಲ್ಲಿ ನೀಡಿದ್ದೇವೆ.. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ … Read more

ಸಾಗರದ ಮಾರಿಕಾಂಬಾ ಜಾತ್ರೆ, ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು, ವಿಡಿಯೋ ನೋಡಿ 

Sagara Marikamba Jatre 2026 Full Details

ಶಿವಮೊಗ್ಗ    : ಒಂಬತ್ತು ದಿನಗಳ ಕಾಲ ನಡೆಯಲಿರುವ ಸಾಗರದ ಮಾರಿಕಾಂಬಾ ದೇವಿಯ ಜಾತ್ರೆ ರಂಗೇರಿದ್ದು, ಜನರು ಭಕ್ತಿಯ ಸಾಗರದಲ್ಲಿ ಮಿಂದೆದ್ದಿದ್ದಾರೆ. ಜನಪದ ಹಾಗೂ ಶಾಸ್ತ್ರೀಯ ವಿಧಿವಿಧಾನದಂತೆ ಹಬ್ಬಕ್ಕೆ ಚಾಲನೆ ದೊರೆತಿದೆ. ಬ್ರಾಹ್ಮಿ ಮುಹೂರ್ತದಲ್ಲಿ ತವರು ಮನೆ ದೇವಸ್ಥಾನದಲ್ಲಿ ಮಾರಿಕಾಂಬಾ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಆರಂಭಿಸಲಾಯಿತು. ಭಕ್ತರು ಜಾತಿಮತ ಭೇದಭಾವವಿಲ್ಲದೆ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. Sagara Marikamba Jatre 2026 ನಾಡಿನಲ್ಲಿಯೇ ಪ್ರಸಿದ್ಧವಾಗಿರುವ ಸಾಗರದ ಮಾರಿಕಾಂಬಾ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಮೊದಲ … Read more

ಮಹಿಳಾ ಅಧಿಕಾರಿ ಬಳಿ  50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ 3 ಯೂಟ್ಯೂಬರ್​ಗಳು ಪೊಲೀಸರ ವಶಕ್ಕೆ, ವಿಷ್ಯ ಏನು ಗೊತ್ತಾ.

Belgaum 3 YouTubers Arrested for Blackmailing Officer

ಬೆಳಗಾವಿ :ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರ  ಮನೆಯಲ್ಲಿ ಕ್ಯಾಮರಾ ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಯೂಟ್ಯೂಬರ್‌ಗಳನ್ನುಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ, ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬರೋಬ್ಬರಿ ₹50 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಈ ತಂಡ ಈಗ ಜೈಲು ಪಾಲಾಗಿದೆ. ಶಿವಮೊಗ್ಗ: ಸೂಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆಗೆ ಜೆಡಿಎಸ್ ಒತ್ತಾಯ, 10 ಕೋಟಿ ಭ್ರಷ್ಟಾಚಾರದ ಆರೋಪ ಬಂಧಿತರನ್ನು ಗೋಕಾಕ ಮೂಲದ ಅಬ್ದುಲ್ ರಷೀದ್ (51), ಸಮೀರ್ ಶೇಖ್ (32) … Read more

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಡಾಗ್ ಸ್ಕ್ವಾಡ್‌ನಿಂದ ತಪಾಸಣೆ : ಕಾರಣವೇನು

Security Check at Shimoga Railway Station

ಶಿವಮೊಗ್ಗ :  ಸಾರ್ವಜನಿಕರ ಸುರಕ್ಷತೆ ಹಾಗೂ ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬುಧವಾರ ತಪಾಸಣೆ ನಡೆಸಲಾಯಿತು. ಮೇಲಾಧಿಕಾರಿಗಳ ಆದೇಶದ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ರೈಲು ನಿಲ್ದಾಣದ ಪ್ರತಿಯೊಂದು ಭಾಗವನ್ನು ಪರಿಶೀಲಿಸಲಾಯಿತು. ಶಿವಮೊಗ್ಗ ಜಿಲ್ಲಾ ಶ್ವಾನ ದಳ (Dog Squad) ಮತ್ತು ಎಎಸ್‌ಸಿ (ASC) ಆ್ಯಂಟಿ ಸ್ಕ್ವಾಡ್​ ಕರಪ್ಷನ್​​ ತಂಡದ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದರು. ನಿಲ್ದಾಣದ ಎಲ್ಲಾ ಪ್ಲಾಟ್‌ಫಾರ್ಮ್‌ಗಳು, ಟಿಕೆಟ್ ಬುಕಿಂಗ್ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಗೃಹ ಹಾಗೂ ಪಾರ್ಸಲ್ … Read more

ನಾಳೆಯಿಂದ ಲವ್ ವೀಕ್ ಶುರು, ಯಾವ ದಿನ ಯಾವ ‘ಡೇ’? ಸಿಂಗಲ್ಸ್ ಮತ್ತು ಜೋಡಿಗಳಿಗಾಗಿ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

Valentine's Week 2026 Daily List & Weekend Guid

ಶಿವಮೊಗ್ಗ : ಫೆಬ್ರವರಿ ಎಂದರೆ ಪ್ರೇಮಿಗಳ ಪಾಲಿಗೆ ಅತ್ಯಂತ ಖುಷಿಯ ತಿಂಗಳು. ಪ್ರೀತಿ ಚಿಗುರಲು ಪೂರ್ವ ತಯಾರಿ, ಮೊದಲ ಪ್ರೀತಿಯ ನೆನಪು ಹೀಗೆ ಹಲವು ಮಧುರ ಕ್ಷಣಗಳನ್ನು ಈ ಮಾಸ ಹೊತ್ತು ತರುತ್ತದೆ. ನಾಳೆಯಿಂದ ಒಂದು ವಾರಗಳ ಕಾಲ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುವ ವ್ಯಾಲೆಂಟೈನ್ಸ್ ವೀಕ್ ಆರಂಭವಾಗುತ್ತಿದೆ. ಆದರೆ, ಲವರ್ ಇಲ್ಲದ ಸಿಂಗಲ್ಸ್‌ಗಳಿಗೆ ಈ 7 ದಿನಗಳ ವಿಶೇಷತೆ ಏನು ಎಂಬ ಮಾಹಿತಿ ಇರುವುದಿಲ್ಲ. ಹಾಗೆಯೇ ಪ್ರೇಮಿಗಳಿಗೆ ಈ ಬಾರಿ ರಜೆಗಳ ಅನುಕೂಲ ಹೇಗಿದೆ ಎಂಬ … Read more

ಸುಳ್ಳು ಸುದ್ದಿಗೆ ಎಐ ಬ್ರೇಕ್, ದ್ವೇಷಪೂರಿತ ಪೋಸ್ಟ್ ತಡೆಯಲು ರಾಜ್ಯ ಸರ್ಕಾರದ ಬಿಗ್ ಪ್ಲಾನ್

Karnataka Govt to Buy AI Software to Track Fake News

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಹಾಗೂ ಸಮಾಜದ ಶಾಂತಿ ಕದಡುವ ದ್ವೇಷಪೂರಿತ ಪೋಸ್ಟ್​​ಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಸರ್ಕಾರ ಈಗ ಹೈಟೆಕ್ ಮೊರೆ ಹೋಗಿದೆ. ಇದಕ್ಕಾಗಿ ಸುಮಾರು 67.26 ಕೋಟಿ ವೆಚ್ಚದಲ್ಲಿ ಸುಧಾರಿತ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ಖರೀದಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಅನುಮೋದನೆ ನೀಡಲಾಗಿದೆ. ಶಿವಮೊಗ್ಗದ ಈ ಭಾಗಗಳಲ್ಲಿ ಫೆಬ್ರವರಿ 7 ರಂದು ಕರೆಂಟ್ ಇರಲ್ಲ ಸರ್ಕಾರವು 50 ಕೋಟಿ ವೆಚ್ಚದಲ್ಲಿ ಸೋಷಿಯಲ್ ಮೀಡಿಯಾ ಅನಾಲಿಟಿಕಲ್ … Read more

ಶಿವಮೊಗ್ಗದ ಈ ಭಾಗಗಳಲ್ಲಿ ನಾಳೆ ಪವರ್ ಕಟ್

Shimoga Power Cut Update

ಶಿವಮೊಗ್ಗ: ಶಿವಮೊಗ್ಗ ನಗರದ ಹಲವು ಬಡಾವಣೆಗಳಲ್ಲಿ ನಾಳೆ (ಫೆಬ್ರವರಿ 07) ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಎಂ.ಆರ್.ಎಸ್ ಉಪಕೇಂದ್ರದಲ್ಲಿ ಹಮ್ಮಿಕೊಂಡಿರುವ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಾಗೂ ಎನ್.ಟಿ. ರಸ್ತೆ ವ್ಯಾಪ್ತಿಯಲ್ಲಿನ ತುರ್ತು ಕಾಮಗಾರಿಗಳ ಹಿನ್ನೆಲೆಯಲ್ಲಿ ಮೆಸ್ಕಾಂ ಈ ಕ್ರಮ ಕೈಗೊಂಡಿದೆ.  ನಗರದ ಎಂ.ಆರ್.ಎಸ್ ಉಪಕೇಂದ್ರದ ವ್ಯಾಪ್ತಿಗೆ ಬರುವ ಕೋಟೆ ರಸ್ತೆ, ಅಶೋಕ ರಸ್ತೆ, ಗಾಂಧಿಬಜಾರ್, ಓಬಿಎಲ್ ರಸ್ತೆ, ಲಷ್ಕರ್ ಮೊಹಲ್ಲಾ, ಸಾವರ್ಕರ್ ನಗರ, ಬಿ.ಹೆಚ್.ರಸ್ತೆ, ತಿರುಪಳಯ್ಯನ ಕೇರಿ, ಪೆನ್ಷನ್ ಮೊಹಲ್ಲಾ, ನಾಗಪ್ಪ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು