ಹಾವೇರಿ ದುರಂತ | ದುಃಖ, ನೋವು, ಯಾತನೆ ನಡುವೆ ಎಮ್ಮೆಹಟ್ಟಿಯಲ್ಲಿ ಸಾಮಾಹಿಕ ಅಂತ್ಯಕ್ರಿಯೆ ನಡೆಸಿದ ಊರ ಮಂದಿ

Haveri Tragedy | people of the village performed a mass funeral at Emmehatti

ಹಾವೇರಿ ದುರಂತ | ದುಃಖ, ನೋವು, ಯಾತನೆ ನಡುವೆ ಎಮ್ಮೆಹಟ್ಟಿಯಲ್ಲಿ ಸಾಮಾಹಿಕ ಅಂತ್ಯಕ್ರಿಯೆ ನಡೆಸಿದ ಊರ ಮಂದಿ
Haveri Tragedy

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ 

ಹಾವೇರಿಯಲ್ಲಿ ನಡೆದ ಟಿಟಿ ದುರಂತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನಿನ್ನೆ ಭದ್ರಾವತಿಯ ಎಮ್ಮೆಹಟ್ಟಿಯಲ್ಲಿ ನಡೆಯಿತು.  ಘಟನೆಯಲ್ಲಿ ಮೃತಪಟ್ಟ 9 ಜನರ ಸಾಮೂಹಿಕ ಅಂತ್ಯಸಂಸ್ಕಾರ ನಿನ್ನೆ ರಾತ್ರಿ ನಡೆಸಲಾಗಿದೆ. ಈ ವೇಳೆ ಇಡೀ ಊರು ಅಲ್ಲಿ ಜಮಾಯಿಸಿತ್ತಷ್ಟೆ ಅಲ್ಲದೆ ಮೃತರ ಅಂತಿಮದರ್ಶನ ಪಡೆದು ಕಣ್ಣೀರು ಹಾಕಿತ್ತು. 

ಗ್ರಾಮದ ಹಿಂದೂ ರುದ್ರ ಭೂಮಿಗೆ ಮೃತರ ದೇಹಗಳನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಬಂದ ಸಂಬಂಧಿಕರು ಆ ಬಳಿಕ ಸಾಮೂಹಿಕವಾಗಿ ಅಂತಿಮ ವಿಧಿವಿಧಾನಗಳನ್ನ ಕೈಗೊಂಡರು. ಬಳಿಕ ಎಲ್ಲರೂ ಒಟ್ಟಾಗಿ ಮೃತರಿಗೆ ಅಗ್ನಿಸ್ಪರ್ಶ ಮಾಡಿದರು.  

ಇನ್ನೂ ಈ ವೇಳೇ  ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಸ್ಥಳದಲ್ಲಿದ್ದು ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.  

Nine people were killed in a TT accident in Haveri. A mass funeral was held for them last night in Bhadravati's Emmehatti.