ಪೊಲೀಸ್‌ ಚೆಕ್ಕಿಂಗ್‌ ವೇಳೆ ಎಸ್ಕೇಪ್‌ಗೆ ಯತ್ನ, ಭದ್ರಾವತಿಯ ಇಬ್ಬರು ವಿಜಯನಗರದಲ್ಲಿ ಲಾಕ್!‌‌ ಕಳ್ಳ ಮಾಲು ಸೀಜ್‌!

Attempt to escape during police checking, Bhadravati's two locked in Vijayanagar! What is the case?

ಪೊಲೀಸ್‌ ಚೆಕ್ಕಿಂಗ್‌ ವೇಳೆ ಎಸ್ಕೇಪ್‌ಗೆ ಯತ್ನ,  ಭದ್ರಾವತಿಯ ಇಬ್ಬರು ವಿಜಯನಗರದಲ್ಲಿ ಲಾಕ್!‌‌ ಕಳ್ಳ ಮಾಲು ಸೀಜ್‌!
Bhadravati, Vijayanagar,

Shivamogga  Apr 6, 2024  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಿವಾಸಿಗಳಾದ ಇಬ್ಬರನ್ನು ವಿಜಯನಗರ (ಹೊಸಪೇಟೆ) ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಕಾರಣ ಮೊಬೈಲ್‌ ಕಳವು ಪ್ರಕರಣ. ಆರೋಪಿಗಳನ್ನ ಬಂಧಿಸಿರುವ ಪೊಲೀಸರು 90 ಸಾವಿರ ರೂಪಾಯಿ ಮೌಲ್ಯದ 14 ಮೊಬೈಲ್‌ ಸೀಜ್‌ ಮಾಡಿ ಅದರ ಮಾಲೀಕರಿಗೆ ಹಿಂತಿರುಗಿಸಿದ್ದಾರೆ. 

ಪ್ರಕರಣವೇನು? :  

ಇಲ್ಲಿನ ನೃಪತುಂಗ ಬಸ್‌ ನಿಲ್ದಾಣದ ಬಳಿ ಪೊಲೀಸರು ತಪಾಸಣೆ ನಡೆಸ್ತಿದ್ದರು. ಈ ವೇಳೆ ಅಲ್ಲಿಗೆ ಕಾರೊಂದು ಬಂದಿದೆ. ಕಾರನ್ನ ತಪಾಸಣೆ ನಡೆಸಲು ಪೊಲೀಸರು ಮುಂದಾಗುತ್ತಲೇ ಕಾರಿನಲ್ಲಿದ್ದವರು ಅಲ್ಲಿಂದ ಎಸ್ಕೇಪ್‌ ಆಗಲು ಯತ್ನಿಸಿದ್ದರು. ಹೀಗಾಗಿ ಅನುಮಾನಗೊಂಡು ಅವರನ್ನ ಬೆನ್ನಟ್ಟಿದ ಪೊಲೀಸರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನವೀನ್‌ ಹಾಗೂ ರಂಜಿತ್‌ ಎಂಬವರನ್ನ ಅರೆಸ್ಟ್‌ ಮಾಡಿದ್ದಾರೆ. ಉಳಿದವರು ಓಡಿ ಹೋಗಿದ್ದಾರೆ. 

ಇವರನ್ನ ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಕಳ್ಳತನದ ಕೃತ್ಯ ಬಯಲಾಗಿದೆ. ಆರೋಪಿಗಳು ತೋರಣಗಲ್ಲು, ಸಂಡೂರು, ಕೊಟ್ಟೂರು, ಹುಲಿಗಿ ಸುತ್ತಮುತ್ತ ಮೊಬೈಲ್‌ ಕಳ್ಳತನ ಮಾಡಿ ಅದನ್ನು ಮಾರಾಟ ಮಾಡಲು ತೆರಳುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.