ಮಗನಿಂದಲೇ ತಂದೆಯ ಹತ್ಯೆ | ನಡೆದಿದ್ದೇನು | ಮೆಂಟಲ್ ಸೂರಿ ಕೊಲೆಗೆ ಕಾರಣವೇನು?
What is the background of the incident in Shimoga's Bapuji Nagar?
SHIVAMOGGA | MALENADUTODAY NEWS | Apr 23, 2024 | Bapuji Nagar
ಕಳೆದ ಶನಿವಾರ ಅಂದರೆ 20 ನೇ ತಾರೀಖು ಶಿವಮೊಗ್ಗ ನಗರದ ಬಾಪೂಜಿ ನಗರದ ಗಂಗಮ್ಮ ದೇವಸ್ಥಾನದ ಪಕ್ಕದಲ್ಲಿ ವ್ಯಕ್ತಿಯೊಬ್ಬನನ್ನ ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಎಲೆಕ್ಷನ್ ಟೈಂ ಆದ್ದರಿಂದ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಪ್ರಕರಣದ ತಿರುಳನ್ನ ಪೊಲೀಸರು ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಮೂವರನ್ನ ಅರೆಸ್ಟ್ ಮಾಡಲಾಗಿದೆ.
ಅಂದು ಏನಾಗಿತ್ತು ಓದಿ : ಶಿವಮೊಗ್ಗ ಬಾಪೂಜಿ ನಗರದಲ್ಲಿ ಯುವಕನಿಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಲೆ
ಸೂರಿ ಅಲಿಯಾಸ್ ಕಳ್ಳ ಸೂರಿ, ಆರ್ಎಕ್ಸ್ ಸೂರಿ ಹೀಗೆ ಹಲವು ಹೆಸರಗಳಿಂದ ಕರೆಸಿಕೊಳ್ತಿದ್ದವ ಸುರೇಶ್. ಪೊಲೀಸ್ ಡೈರಿಯಲ್ಲಿ ಈತ ಹೆಬಿಚ್ಯುವಲ್ ಅಫೆಂಡರ್ (Habitual Offender) ಅಂದರೆ ಪೊಲೀಸ್ ಅತಿಥಿ. 20 ದಿನಗಳ ಹಿಂದಷ್ಟೆ ಕಳ್ಳತನ ಕೇಸ್ನಿಂದ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ತನ್ನ ಅಡ್ಡಹೆಸರಿಗೆ ತಕ್ಕಹಾಗೆ ಈತ ಮೆಂಟ್ಲು ಥರನೇ ವರ್ತಿಸುತ್ತಿದ್ದನಂತೆ ಸಿಕ್ಕವರಿಗೆಲ್ಲಾ ಕ್ವಾಟ್ಲೆ ಕೊಡ್ತಿದ್ದ ಸೂರಿ ತನ್ನ ಮನೆಯವರನ್ನ ಸಹ ಬಿಡುತ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ಈತನ ಮಗನೇ ಈತನನ್ನ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣ ಸಂಬಂಧ ಅಪ್ರಾಪ್ತ ವಯಸ್ಸಿನ ಪುತ್ರ ಸೇರಿ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದಿತರ ಹೆಸರು ಹಾಗೂ ವೈಯಕ್ತಿಕ ವಿಚಾರಗಳನ್ನ ಗೌಪ್ಯವಾಗಿ ಇಡಲಾಗಿದೆ. ಉಳಿದಂತೆ ಪೊಲೀಸ್ ಮಾಹಿತಿ ಪ್ರಕಾರ, ಸೂರಿ ನಿತ್ಯವೂ ಮದ್ಯ ಸೇವಿಸಿ ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದಂತೆ. ಇದರಿಂದ ಬೇಸತ್ತ ಮಗ ಇನ್ನಿಬ್ಬರ ಜೊತೆಗೆ ಸೇರಿಕೊಂಡು ತಂದೆಗೆ ಬುದ್ದಿ ಕಲಿಸಲು ಮುಂದಾಗಿದ್ದಾರೆ. ಆದರೆ ಇವರ ಹಲ್ಲೆಯಿಂದಾಗಿ ಸೂರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಏನೋ ಮಾಡಲು ಹೋಗಿ ಏನೋ ಆಗಿ ಹೋಗಿತ್ತು. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಪ್ರಕರಣದ ಇನ್ನಷ್ಟು ವಿವರಗಳನ್ನು ಕಲೆಹಾಕುತ್ತಿದ್ದಾರೆ