ಬೆಂಗಳೂರಿನಿಂದ ಬರುತ್ತಿದ್ದಾಗ ದುರಂತ | ಮರಕ್ಕೆ ಡಿಕ್ಕಿಯಾದ ಕಾರಲ್ಲಿ ಉದ್ಯಮಿ ಸಾವು

The incident occurred when the car collided with a tree while coming from Bangalore. Shankaraghatta, Bharathi Colony, Businessman

ಬೆಂಗಳೂರಿನಿಂದ ಬರುತ್ತಿದ್ದಾಗ ದುರಂತ | ಮರಕ್ಕೆ ಡಿಕ್ಕಿಯಾದ ಕಾರಲ್ಲಿ ಉದ್ಯಮಿ ಸಾವು
Bangalore, Shankaraghatta, Bharathi Colony, Businessman

SHIVAMOGGA | MALENADUTODAY NEWS | Apr 30, 2024    ‌ 

ಶಿವಮೊಗ್ಗದ ಶಂಕರಘಟ್ಟದಲ್ಲಿ ಕಾರೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಓರ್ವರು ಸಾವನ್ನಪ್ಪಿದ್ದಾರೆ. ನಿನ್ನೆ ಸೋಮವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬಾರತೀ ಕಾಲೋನಿ ನಿವಾಸಿ ಮೃತರು. 

ಏನಿದು ಘಟನೆ 

ಶಂಕರಘಟ್ಟದ ರಂಗನಾಥಪುರ ಸಮೀಪ ಮರಕ್ಕೆ ಕಾರು ಡಿಕ್ಕಿ ಹೊಡೆದು ನಗರದ ಭಾರತಿ ಕಾಲೊನಿ ನಿವಾಸಿ, ಉದ್ಯಮಿ ಶಂಕರ್ (55) ಸೋಮವಾರ ಬೆಳಗ್ಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.