bhadravati | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ | ಹೈ ಸೆಕ್ಯುರಿಟಿಯಲ್ಲಿ ಭದ್ರಾವತಿ | ಇಲ್ಲಿದೆ ಡಿಟೇಲ್ಸ್‌

13

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 15, 2024 shimoga news 

ಭದ್ರಾವತಿಯಲ್ಲಿಂದು ಅಲ್ಲಿನ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಬಿಗಿಬಂದೋಬಸ್ತ್‌ ಕೈಗೊಂಡಿದ್ದಾರೆ. ನಿನ್ನೆ ರಾತ್ರಿ ಸ್ವತಃ ಎಸ್‌ಪಿ ಮಿಥುನ್‌ ಕುಮಾರ್‌ ತಮ್ಮ ಪೊಲೀಸ್‌ ಪಡೆಗೆ ಭದ್ರತೆಯ ಬಗ್ಗೆ ಬ್ರಿಫಿಂಗ್‌ ಮಾಡಿದ್ದಾರೆ. 

Malenadu Today

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ- Bhadravathi Hindu Mahasabha Ganapati

ಗಣಪತಿಯ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 02 ಹೆಚ್ಚುವರಿ ಪೊಲೀಸ್  ಅಧೀಕ್ಷಕರು,  17 ಪೊಲೀಸ್  ಉಪಾಧೀಕ್ಷಕರು, 45 ಪೋಲಿಸ್ ನಿರೀಕ್ಷಕರು, 65 ಪೊಲೀಸ್ ಉಪನಿರೀಕ್ಷಕರು, 190 ಸಹಾಯಕ ಪೊಲೀಸ್ ನಿರೀಕ್ಷಕರು, 1450 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 450 ಗೃಹರಕ್ಷಕ ದಳ ಸಿಬ್ಬಂದಿಗಳು, 01 RAF ತುಕಡಿ, 05 ಡಿ.ಎ.ಆರ್ ತುಕಡಿ, 01 ಕ್ಯೂ.ಆರ್.ಟಿ ತುಕಡಿ ಮತ್ತು 08 ಕೆಎಸ್ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

Malenadu Today

ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಿಥುನ್ ಕುಮಾರ್ ಜಿ.ಕೆ  ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ನಿನ್ನೆ ಸಂಜೆ ಭದ್ರಾವತಿ ನಗರದ ಕನಕ ಮಂಟಪ ಮೈದಾನದಲ್ಲಿ ಬ್ರೀಫಿಂಗ್ ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು. 

Malenadu Today

ಪೊಲೀಸ್‌ ರೂಟ್‌ ಮಾರ್ಚ್‌ 

ಇನ್ನೂ ನಿನ್ನೆ ದಿನ ಪೊಲೀಸ್‌ ಇಲಾಖೆ ಭದ್ರಾವತಿಯಲ್ಲಿ ರೂಟ್‌ ಮಾರ್ಚ್‌ ಸಹ ನಡೆಸಿದೆ. ಭದ್ರಾವತಿ ನಗರದ ಕನಕ ಮಂಟಪದಿಂದ ಪ್ರಾರಂಭವಾದ ರೂಟ್‌ ಮಾರ್ಚ್‌ನ್ನ ಹಳದಮ್ಮ ಬೀದಿ, ಖಾಜಿ ಮೊಹಲ್ಲಾ, ಬಸವೇಶ್ವರ ವೃತ್ತ, ಪರಿಮಳ ಹೋಟೆಲ್  ಕ್ರಾಸ್,  ರಂಗಪ್ಪ ವೃತ್ತ, ಹೊಳೆಹೊನ್ನೂರು ವೃತ್ತ, ಸಂತೆ ಮೈಧಾನ ಹೊಸಮನೆ, ಹೊಸಮನೆ ಪೊಲೀಸ್ ಠಾಣಾ ಮುಂಭಾಗ, ಗಾಂಧಿ ವೃತ್ತ, ಮಾದವಚಾರ್ ವೃತ್ತದಿಂದ ಕನಕಮಂಟಪಕ್ಕೆ ಬಂದು ಮುಕ್ತಾಯ ಮಾಡಲಾಯಿತು. 

Malenadu Today

Shimoga court | ರೇಪ್‌ ಕೇಸ್‌ ಸಾಬೀತು | 31 ವರ್ಷದ ವ್ಯಕ್ತಿಗೆ 14 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ಮಹತ್ವದ ತೀರ್ಪು

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

Tunga nagara police station | ಊರುಗಡೂರು ಬಳಿ ವ್ಯಕ್ತಿಗೆ ಚಾಕು ಇರಿತ | ಬೈಕ್‌ನಲ್ಲಿ ಬಂದವರಿಂದ ದುಷ್ಕೃತ್ಯ? | ನಡೆದಿದ್ದೇನು?

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Thirthahalli court  | ಶೂಟ್‌ ಮಾಡ್ಬೇಕಾ ಎಂದು ಕುತ್ತಿಗೆಗೆ ಗುಂಡು ಹಾರಿಸಿದ ಕೇಸ್‌ ಎಂತಾಯ್ತು ಗೊತ್ತಾ? |ತೀರ್ಥಹಳ್ಳಿ ಕೋರ್ಟ್‌ ತೀರ್ಪು

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3‌

Share This Article