ಹಣಗೆರೆ ಕಟ್ಟೆ ಕೊಲೆ ಕೇಸ್‌ಗೆ ಶಿವಮೊಗ್ಗ ಲಿಂಕ್ | ಮರ್ಡರ್‌ ಆದ ಯುವತಿ ಯಾರು ಗೊತ್ತಾ? | BIG Exclusive updates

Shimoga link to Hanagere Katte murder case Do you know who the murdered young woman is? | BIG Exclusive updates

ಹಣಗೆರೆ ಕಟ್ಟೆ ಕೊಲೆ ಕೇಸ್‌ಗೆ ಶಿವಮೊಗ್ಗ ಲಿಂಕ್ | ಮರ್ಡರ್‌ ಆದ ಯುವತಿ ಯಾರು ಗೊತ್ತಾ? | BIG Exclusive updates
Hangere Katte murder case

Shivamogga  Apr 8, 2024   Hangere Katte murder case ಶಿವಮೊಗ್ಗ ಜಿಲ್ಲೆಯ ಪವಿತ್ರ ಕ್ಷೇತ್ರ ಹಣಗೆರೆ ಕಟ್ಟೆಯ ಬಳಿ  ಲಾಡ್ಜ್‌ ರೂಮ್‌ನಲ್ಲಿ ಯುವತಿಯ ಬರ್ಬರ ಹತ್ಯೆ! ಯಾಗಿದ್ದರ ವರದಿಯನ್ನು ಮಲೆನಾಡು ಟುಡೆಯಲ್ಲಿ ಓದಿರುತ್ತೀರಿ. ಇದೀಗ ಆ ಘಟನೆಯ ವಿಚಾರದಲ್ಲಿ ಬಿಗ್‌ ಅಪ್‌ಡೇಟ್ಸ್‌ ಒಂದು ಮಲೆನಾಡು ಟುಡೆ ಇನ್ವೆಸ್ಟಿಗೇಷನ್‌ ವರದಿಗಾರರ ತಂಡಕ್ಕೆ ಲಭ್ಯವಾಗಿದೆ. 

ಇಲ್ಲಿದೆ ವರದಿಯ ಲಿಂಕ್‌  SHIVAMOGGA | ಲಾಡ್ಜ್‌ ರೂಮ್‌ನಲ್ಲಿ ಯುವತಿಯ ಬರ್ಬರ ಹತ್ಯೆ! ನಡೆದಿದ್ದೇನು? ಪೊಲೀಸ್‌ ಅಲರ್ಟ್!‌ 

ಹಣಗೆರೆ ಕಟ್ಟೆಯಲ್ಲಿ ಕೊಲೆಯಾದವರು ಯಾರು?

 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹಣಗೆರೆ ಕಟ್ಟೆ  ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯದ ಸಮೀಪ ಯುವತಿಯೊಬ್ಬಳ ಹತ್ಯೆಯಾಗಿತ್ತು. ಲಾಡ್ಜ್‌ನ ಕೋಣೆಯೊಳಗೆ ನಡೆದಿದ್ದ ಭೀಕರ ಹತ್ಯೆ ವಿಚಾರ ಹೊರಕ್ಕೆ ಬರುವುದಕ್ಕೆ ಮೂರು ದಿನ ಹಿಡಿದಿತ್ತು. ವಿಕಾರವಾಗಿದ್ದ ಮೃತದೇಹ ಗುರುತು ಪತ್ತೆಗಾಗಿ ಪೊಲೀಸ್‌ ಇಲಾಖೆ ಕೂಡ ಪ್ರಕಟಣೆ ನೀಡಿತ್ತು. ಅಲ್ಲದೆ ಲಾಡ್ಜ್‌ ಮಾಲೀಕರು ಯಾವುದೇ ದಾಖಲೆ ಪಡೆಯದೇ ಕೋಣೆ ಕೊಟ್ಟಿದ್ದರಿಂದ, ಕೇಸ್‌ನಲ್ಲಿ ಯಾವೊಂದು ಸುಳಿವು ಸಹ ಸಿಕ್ಕಿರಲಿಲ್ಲ.

ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯನ್ನ ಕರೆಸಿದ್ದ ಪೊಲೀಸ್‌ ಇಲಾಖೆ ಮರ್ಡರ್‌ ಕೇಸ್‌ನ್ನ ಭೇದಿಸಲು ಹೊರಟಿತ್ತು. ಎಂತದ್ದೇ ಕೇಸ್‌ ಆಗಿರಲಿ, ಅಲ್ಲಿ ಸಿಗುವ ಕೂದಲಿನ ಎಳೆ ಕೂಡ ಸಾಕ್ಷ್ಯವಾಗುತ್ತದಷ್ಟೆ ಅಲ್ಲದೆ ನೇರ ಕೊಲೆಗಾರನ ಮೂಲ ತಿಳಿಸುತ್ತದೆ. ಮೇಲಾಗಿ ಕೊಲೆಯಾದ ರೀತಿ ಹಾಗೂ ಸ್ಥಳ ಮತ್ತು ಅಲ್ಲಿನ ಸನ್ನಿವೇಶಗಳು ಪ್ರೇಮಾಫೇಸಿ ಎನ್ವಕ್ವೈರಿಯಲ್ಲಿ ಇಡೀ ಘಟನೆಯ ಉದ್ದೇಶ ಇದೆ ಇರಬಹುದು ಎಂದು ಅಂದಾಜಿಸುತ್ತದೆ. ಹೀಗೆ ಸಿಕ್ಕ ಅಂದಾಜಿನ ಆಧಾರದ ಮೇಲೆ ಪೊಲೀಸ್‌ ಇಲಾಖೆ ತಂಡವಾಗಿ ತನಿಖೆಗೆ ಇಳಿಯುತ್ತದೆ. ಇವತ್ತಿನ ತಾಂತ್ರಿಕ ಸಪೋರ್ಟ್‌ ಹಾಗೂ ಸ್ಟೇಷನ್‌ ಡೇಟಾಗಳಿಗಿಂತಲೂ ಖಾಕಿದಾರಿ ಸಿಬ್ಬಂದಿಗಳ ಸಂಶಯಗಳು ಅಪರಾಧಿಯ ಸುಳಿವು ಒದಗಿಸುತ್ತವೆ.. 

ಹಣಗೆರೆ ಕಟ್ಟೆ ಕೊಲೆ ಕೇಸ್‌ನ ವಿಚಾರಕ್ಕೆ ನೋಡುವುದಾದರೆ, ಅಂದು ನಡೆದಿದ್ದ ಬ್ರೂಟಲ್‌ ಮರ್ಡರ್‌ನಲ್ಲಿ ಕೊಲೆಯಾದ ಯುವತಿ ಯಾರು ಎಂದು ತಿಳಿದುಕೊಳ್ಳುವುದು ಪೊಲೀಸ್‌ ಇಲಾಖೆಗೆ ಮೊದಲ ಸವಾಲ್‌ ಆಗಿತ್ತು. ಆಕೆ ಯಾರೆಂದು ಗೊತ್ತಾದರೇ, ಕೇಸ್‌ನ ತನಿಖೆ ಐವತ್ತು ಪರ್ಸೆಂಟ್‌ ಮುಗಿದಂತೆ ಎಂಬುದು ಪೊಲೀಸರಿಗೆ ಗೊತ್ತಿತ್ತು. ಆ ನಿಟ್ಟಿನಲ್ಲಿ ಶಿವಮೊಗ್ಗ ಆರಕ್ಷಕ ಪಡೆ ಯಶಸ್ವಿಯಾಗಿದೆ.. 

ಅವತ್ತು ಏಪ್ರಿಲ್‌ ಮೂರರಂದು ಹೊರಜಗತ್ತಿಗೆ ಗೊತ್ತಾದ ಮರ್ಡರ್‌ ಕೇಸ್‌ನಲ್ಲಿ ಅನಾಥವಾಗಿ ಬಿದ್ದಿದ್ದ ಯುವತಿಯ ಗುರುತು ಇದೀಗ ಗೊತ್ತಾಗಿದೆ. ಸ್ಟೈಟ್‌ ಅವೇ, ಪ್ರಕರಣ ಶಿವಮೊಗ್ಗ ಸಿಟಿಗೆ ಬಂದು ನಿಂತಿದೆ. ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ಕೊಲೆಯಾದ ಯುವತಿ ಶಿವಮೊಗ್ಗದವಳು. 18 ಪ್ಲಸ್‌ ವಯಸ್ಸಿನ ಯುವತಿಯು ಬಾಪೂಜಿ ನಗರದವಳು, ಆಕೆಯ ಹೆಸರು ಉಮಾ ಎಂದು ತಿಳಿದುಬಂದಿದೆ. ಕೇಸ್‌ನಲ್ಲಿ ಈ ಮಾಹಿತಿ ಮೂಲಕ ಬಿಗ್‌ ಬ್ರೇಕ್‌ ‍‍ಥ್ರೂ ಪಡೆದಿರುವ ಪೊಲೀಸ್‌ ಇಲಾಖೆಗೆ ಇನ್ನೇನು ಆರೋಪಿಯಷ್ಟೆ ಸಿಗಬೇಕಿದೆ.   

ಅನೈತಿಕ ಸಂಬಂಧದ ಆ್ಯಂಗಲ್​ನಲ್ಲಿ ಸಸ್ಪೆಕ್ಟ್ ಆಗಿದ್ದ ಕೇಸ್‌ನ ತನಿಖೆ  ಸಂಶಯದ ಹಾದಿಯಲ್ಲಿಯೇ ಸಾಗುತ್ತಿದೆ. ಪೊಲೀಸ್‌ ಇಲಾಖೆ ಇವನೇ ಆರೋಪಿ ಇರಬಹುದು ಎಂಬ ಕ್ಲೂ ಸಹ ಸಿಕ್ಕಿದ್ದು ಆರೋಪಿ ಅಂದರ್‌ ಆಗೋದಷ್ಟೆ ಬಾಕಿ ಇದೆ. ಆತ ಸಿಕ್ಕಮೇಲಷ್ಟೆ ಕೊಲೆಯ ಮೋಟಿವ್‌ ಏನಿತ್ತು ಎಂಬುದು ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ಮಾಹಿತಿ ಪೂರ್ಣ ಪಡೆದಿರುವ ಪೊಲೀಸ್‌ ಇನ್‌ವೆಸ್ಟಿಗೇಷನ್‌ ಟೀಂ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಬರೆಯುವ ಸಿದ್ಧತೆಯಲ್ಲಿದೆ