ತೀರ್ಥಹಳ್ಳಿ | ಅಜ್ಜಿಯ ಅಂತಿಮದರ್ಶನಕ್ಕೆ ಬೆಂಗಳೂರಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಯುವಕರು ಸಾವು!

Thirthahalli | Two youths who were coming from Bengaluru on a bike to pay their last respects to their grandmother died

ತೀರ್ಥಹಳ್ಳಿ | ಅಜ್ಜಿಯ ಅಂತಿಮದರ್ಶನಕ್ಕೆ ಬೆಂಗಳೂರಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಯುವಕರು ಸಾವು!
Thirthahalli

Shivamogga Apr 19, 2024  ಶಿವಮೊಗ್ಗದ ಹೊಳೆಹೊನ್ನೂರು ಸಮೀಪ ನಿನ್ನೆ ನಡೆದ ಬೈಕ್‌ ಅಪಘಾತದಲ್ಲಿ ಸಾವನ್ನಪ್ಪಿದವರು ತೀರ್ಥಹಳ್ಳಿ ಮೂಲದವರು ಎಂದು ತಿಳಿದುಬಮದಿದೆ. ತಮ್ಮ ಅಜ್ಜಿಯ ಅಂತಿಮ ದರ್ಶನಕ್ಕೆ ಬೆಂಗಳೂರಿನಿಂದ ವಯಾ ಚಿತ್ರದುರ್ಗದ ಮೂಲಕ  ಶಿವಮೊಗ್ಗಕ್ಕೆ ಬರುತ್ತಿದ್ದಾಗ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಯುವಕರು, ಎದುರಿಗೆ ಹೋಗುತ್ತಿದ್ದ ಇನ್ನೊಂದು ಬೈಕ್‌ಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಕರೆಂಟ್‌ ಕಂಬಕ್ಕೆ ಬೈಕ್‌ನ್ನ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದರೇ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

ಮೃತರು ತೀರ್ಥಹಳ್ಳಿ ತಾಲೂಕು ಹೊಸೂರು ಗುಡ್ಡೆಕೇರಿಯ ಲಕ್ಷ್ಮಿ ದೇವಿ ಪುತ್ರ ಪವನ್(28) ಮತ್ತು ಧನುಷ್ ಆಚಾರಿ (24) ಎಂದು ತಿಳಿದುಬಂದಿದೆ. ಅಜ್ಜಿಯ ಸಾವಿನ ಅಂತಿಮ ದರ್ಶನಕ್ಕೆ ಬರುತ್ತಿದ್ದ ಮೊಮ್ಮಗನೇ ಸಾವನ್ನಪ್ಪಿರುವ ಘಟನೆ ಬಗ್ಗೆ ತಿಳಿದು ತೀರ್ಥಹಳ್ಳಿಯ ಜನರು ಮರುಕ ವ್ಯಕ್ತಪಡಿಸ್ತಿದ್ದಾರೆ.