ಶಿವಮೊಗ್ಗ | ಇಂದು ನಗರಕ್ಕೆ ರಣದೀಪ್ ಸಿಂಗ್ ಸುರ್ಜೆವಾಲಾ | ಮಹತ್ವದ ಮೀಟಿಂಗ್ |‌ ಗ್ಯಾರಂಟಿ ಹಬ್ಬ

Shimoga | Randeep Singh Surjewala to the city today Important Meeting | Guaranteed Festival

ಶಿವಮೊಗ್ಗ | ಇಂದು ನಗರಕ್ಕೆ ರಣದೀಪ್ ಸಿಂಗ್ ಸುರ್ಜೆವಾಲಾ |  ಮಹತ್ವದ ಮೀಟಿಂಗ್ |‌ ಗ್ಯಾರಂಟಿ ಹಬ್ಬ
Randeep Singh Surjewala

SHIVAMOGGA | MALENADUTODAY NEWS |  Apr 19, 2024   

ಶಿವಮೊಗ್ಗ: ಇವತ್ತು ನಗರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala)  ಆಗಮಿಸಲಿದ್ದಾರೆ. ಇವತ್ತು ಮಧ್ಯಾಹ್ನ 12.30ಕ್ಕೆ ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಅವರು ಗ್ಯಾರಂಟಿ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. 

ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಗ್ಯಾರಂಟಿ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸುರ್ಜೆವಾಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಲಿದ್ದಾರೆ. 

ಇದನ್ನು ಓದಿ : ತೀರ್ಥಹಳ್ಳಿ | ಅಜ್ಜಿಯ ಅಂತಿಮದರ್ಶನಕ್ಕೆ ಬೆಂಗಳೂರಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಯುವಕರು ಸಾವು!

ಇನ್ನೂ ಇದೇ ವೇಳೇ ಚುನಾವಣಾ ಸಿದ್ಧತೆ ಹಾಗೂ ತಂತ್ರಗಾರಿಕೆ ಬಗ್ಗೆ ಸುರ್ಜೆವಾಲಾ ಕಾಂಗ್ರೆಸ್‌ ನಾಯಕರ ಜೊತೆಗೆ ಚರ್ಚಿಸಲಿದ್ದಾರೆ.  ಸಚಿವರು, ಶಾಸಕರು, ಮಾಜಿ ಶಾಸಕರ ಜೊತೆಗೆ ಸಭೆ ನಿಕ್ಕಿಯಾಗಿದ್ದು,  ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ.