ಪ್ರಚಾರದಲ್ಲಿಯು ರೆಬೆಲ್ ಈಶ್ವರಪ್ಪ । ಫ್ಯಾಕ್ಟರಿ, ಶೋರೂಮ್, ಬಸ್ ಸ್ಟ್ಯಾಂಡ್ನಲ್ಲಿ ಕ್ಯಾಂಪೇನ್ । ಒಂದು ದಿನ ರಜೆ
Eshwarappa is a rebel in the campaign. Campaign in factory, showroom, bus stand. A day off
SHIVAMOGGA | MALENADUTODAY NEWS | Apr 24, 2024
ಒಂದು ಗೀತಾ ಶಿವರಾಜಕುಮಾರ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ತಮ್ಮ ಪರ ಮತಪ್ರಚಾರ ಮಾಡುತ್ತಿದ್ದರೇ ಇನ್ನೊಂದು ಕಡೆ ರೆಬೆಲ್ ಈಶ್ವರಪ್ಪ ಕೂಡ ತಾವೇನು ಕಮ್ಮಿಯಿಲ್ಲ ಅಂತಾ ಅಬ್ಬರದ ಕ್ಯಾಂಪೇನ್ ಕೈಗೊಂಡರು.
ಶಿವಮೊಗ್ಗ ನಗರದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಪರ್ಫೆಕ್ಟ್ ಅಲಾಯ್ ಕಾರ್ಖಾನೆಗೆ ಭೇಟಿಕೊಟ್ಟ ಅವರು ಅಲ್ಲಿನ ಕಾರ್ಮಿಕರಿಗೆ ತಮಗೆ ಮತನೀಡಬೇಕು ಎಂದು ಮನವಿ ಮಾಡಿದ್ರು. ನನಗೆ ಜೋಡಿ ಕಬ್ಬಿನ ಜಲ್ಲೆ ಜೊತೆ ಇರುವ ರೈತನ ಚಿಹ್ನೆ ದೊರಕಿದೆ ಇಲ್ಲಿಯವರೆಗೂ ಈಶ್ವರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಈಶ್ವರಪ್ಪ ಎಂಬ ಭಾವನೆ ಇದೆ ನೀವುಗಳು ಗೊಂದಲ ಮಾಡಕೊಳ್ಳದೆ ರೈತನ ಚಿಹ್ನೆಗೆ ಮತ ಹಾಕಿ ಎಂದು ಮನವಿ ಮಾಡಿದರು.
ಒಂದು ದಿನ ರಜೆ ಘೋಷಣೆ
ಇನ್ನೂ ಇದೇ ವೇಳೆ ಇಂದು ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ನಗರದ ಅನೇಕ ವಾಹನಗಳ ಶೋರೂಮ್ ಗೆ ತೆರಳಿ ಮತ ಯಾಚನೆ ಮಾಡಿದರು ಎಲ್ಲಾ ಶೋರೂಮ್ ಗಳ ಮಾಲೀಕರ ಬಳಿ ತೆರಳಿ ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿಗಳಿಗೆ ಭಾನುವಾರ ಹೊರತು ಪಡಿಸಿ ಒಂದು ದಿನದ ರಜೆ ನೀಡಬೇಕೆಂದು ಮನವಿ ಮಾಡಿದರು. ಈಶ್ವರಪ್ಪನವರ ಮನವಿಗೆ ಕೆಲವು ಶೋರೂಮ್ಗಳ ಮಾಲೀಕರು ಸಮ್ಮತಿ ಸೂಚಿಸಿದರು.
ಇಷ್ಟೆ ಅಲ್ಲದೆ ಖಾಸಗಿ ಬಸ್ ನಿಲ್ದಾಣದಕ್ಕೆ ತೆರಳಿದ ಕೆಎಸ್ ಈಶ್ವರಪ್ಪ ಅಲ್ಲಿನ ವ್ಯಾಪಾರಸ್ಥರ ಬಳಿ ತಮ್ಮ ಚಿಹ್ನೆಯನ್ನ ತೋರಿಸಿ ಮತಯಾಚನೆ ಮಾಡಿದ್ದರು.
ಇದಕ್ಕೂ ಮೊದಲು ನಗರದ ಮಹಂತಾ ಶೋರೂಮ್ ಹಾಗು ದ್ಚಿಚಕ್ರ ವಾಹನಗಳ ಶೋರೂಮ್ ಕಾರ್ತಿಕ್, ಆರ್ಯ ಟಿವಿಎಸ್ ಪ್ರಭು ಮೋಟಾರ್ಸ್ ಶೋರೂಮ್, ಮಾರುತಿ ಶೋರೂಮ್, ರಾಹುಲ್ ಹುಂಡೈ ಶೋರೂಮ್ ಗಳಿಗೆ ತೆರಳಿ ಸಿಬ್ಬಂದಿಗಳ ಬಳಿ ಮತ ಯಾಚನೆ ಮಾಡಿದರು.