ಶಿವಮೊಗ್ಗ ತ್ರಿಬ್ಬಲ್ ಮರ್ಡರ್ ಕೇಸ್..ಪ್ರಕರಣದ ಪ್ರಮುಖ ಆರೋಪಿ ಆದಿಲ್ ಬಂಧನ

ಶಿವಮೊಗ್ಗ ತ್ರಿಬ್ಬಲ್ ಮರ್ಡರ್ ಕೇಸ್..ಪ್ರಕರಣದ ಪ್ರಮುಖ ಆರೋಪಿ ಆದಿಲ್ ಬಂಧನ

ಶಿವಮೊಗ್ಗ ತ್ರಿಬ್ಬಲ್ ಮರ್ಡರ್ ಕೇಸ್..ಪ್ರಕರಣದ ಪ್ರಮುಖ ಆರೋಪಿ ಆದಿಲ್ ಬಂಧನ
ಶಿವಮೊಗ್ಗ ತ್ರಿಬ್ಬಲ್ ಮರ್ಡರ್ ಕೇಸ್..ಪ್ರಕರಣದ ಪ್ರಮುಖ ಆರೋಪಿ ಆದಿಲ್ ಬಂಧನ

ಶಿವಮೊಗ್ಗ ತ್ರಿಬ್ಬಲ್ ಮರ್ಡರ್ ಕೇಸ್..ಪ್ರಕರಣದ ಪ್ರಮುಖ ಆರೋಪಿ ಆದಿಲ್ ಬಂಧನ

ಶಿವಮೊಗ್ಗದಲ್ಲಿ 08-05-24 ರಂ ಸಂಜೆ ಐದು ಗಂಟೆಗೆ ಲಷ್ಕರ್ ಮೊಹಲ್ಲದ ಮೀನು ಮಾರುಕಟ್ಟೆಯ ಬಳಿ ಆದಿಲ್ ಮತ್ತು ಯಾಸಿನ್ ಖುರೇಷಿ ನಡುವಿನ ಗ್ಯಾಂಗ್ ವಾರ್ ಇಡೀ ಶಿವಮೊಗ್ಗ ನಗರವನ್ನು ಬೆಚ್ಚಿ ಬೀಳಿಸಿತ್ತು. ಹಾಡಹಗಲೇ ನಡೆದ ಈ ದಾಳಿಯಲ್ಲಿ  ಆದಿಲ್ ಟೀಂ ಯಾಸಿನ್ ಗೆ ಚಾಕುವಿನಿಂದ ತಿವಿದ ಪರಿಣಾಮ ಯಾಸಿನ್ ಕುಸಿದು ಬಿದ್ದ. ನಂತರದಲ್ಲಿ ಯಾಸಿನ್ ಕಡೆಯ ಹುಡುಗರು ಆದಿಲ್ ಅಕ್ಕನ ಮಗನಾದ ಸನ್ನು ಅಲಿಯಾಸ್ ಸೇಬು ಹಾಗು ಗೌಸ್ ನ ಮೇಲೆ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಘಟನೆಯಲ್ಲಿ ಆದಿಲ್ ಕೈಬೆರಳಿಗೆ ಗಾಯವಾಗಿತ್ತು. ನಂತರ ಗಾಯಾಳು ಯಾಸಿನ್ ನನ್ನು ಎನ್ ಹೆಚ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆತ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ. ಶಿವಮೊಗ್ಗದ ಎರಡು ರೌಡಿ ಗ್ಯಾಂಗ್ ಗಳ ನಡುವಿನ ಕಾಳಗದಲ್ಲಿ ಮೂವರು ಕೊಲೆಯಾದಂತಾಗಿದೆ.

ಘಟನೆ ನಂತರ ತಪ್ಪಿಸಿಕೊಂಡ ಆದೀಲ್ ಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಸುತ್ತುವರೆದು ಚಿಕಿತ್ಸೆ ಕೊಡಿಸಿ ನಂತರ  ಪೊಲೀಸ್ ಠಾಣೆಗೆ ಕರೆತಂದು ಕೇಸ್ ದಾಖಲಿಸಿದ್ದರು. ಪ್ರಕರಣದಲ್ಲಿ ಆದೀಲ್ ಸೇರಿದಂತೆ ಮತ್ತೋರ್ವನನ್ನು ಬಂಧಿಸಿ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ ಮಾಡಲಾಗಿದೆ.