ಆಗುಂಬೆ ಘಾಟಿ | ತಿರುವಿನಲ್ಲಿ ಅರ್ಧ ಕೆಳಕ್ಕೆ ಇಳಿದ ಸ್ಕೂಲ್​ ಮಕ್ಕಳಿದ್ದ ಬಸ್​ | ಬೆಂಗಳೂರಿನಿಂದ ಬಂದಿದ್ದವರು ಬಚಾವ್!

Here is the details of the incident that took place at Agumbe Ghati ಆಗುಂಬೆಯ ಘಾಟಿಯಲ್ಲಿ ನಡೆದ ಘಟನೆ ವಿವರ ಇಲ್ಲಿದೆ

ಆಗುಂಬೆ ಘಾಟಿ | ತಿರುವಿನಲ್ಲಿ ಅರ್ಧ ಕೆಳಕ್ಕೆ ಇಳಿದ  ಸ್ಕೂಲ್​ ಮಕ್ಕಳಿದ್ದ ಬಸ್​ | ಬೆಂಗಳೂರಿನಿಂದ ಬಂದಿದ್ದವರು ಬಚಾವ್!

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS

 

THIRTHAHALLI | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯಲ್ಲಿ ಸಂಭವಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಶಾಲೆ ಮಕ್ಕಳು ಸೇರಿದಂತೆ 30 ಮಂದಿಯಿದ್ದ ಸ್ಕೂಲ್​ ಬಸ್​ವೊಂದು ಆಗುಂಬೆಯ ಘಾಟಿ ತಿರುವಿಗೆ ಡಿಕ್ಕಿ ಹೊಡೆದು ಅರ್ಧ ಮುಂದಕ್ಕೆ ಹೋಗಿದೆ. ಅಲ್ಲಿಯೇ ಬಸ್ ನಿಂತಿದ್ದರಿಂದ ಯಾರಿಗೂ ಅಪಾಯವಾಗಲಿಲ್ಲ. ಹಾಗೊಂದು ವೇಳೆ ಬಸ್ ಕೆಳಕ್ಕೆ ಬಿದ್ದಿದ್ದರೇ ಪರಿಣಾಮ ಹೇಳತೀರದಂತಾಗುತ್ತಿತ್ತು. 

 

READ : ಇಸ್ರೇಲ್​ನಿಂದ ಮಧು ಬಂಗಾರಪ್ಪರಿಗೆ ವಿಡಿಯೋ ಕಾಲ್ | ಶಿವಮೊಗ್ಗದ ವ್ಯಕ್ತಿಗೆ ಸಚಿವರ ಸಹಾಯ!

 

ಬೆಂಗಳೂರಿಂದ ಪ್ರವಾಸ ಬಂದಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರಿಗೆ ಹೋಗುತ್ತಿತ್ತು. ಈ ಮಾರ್ಗದಲ್ಲಿ ಆಗುಂಬೆ ಘಾಟಿಯ ಮೊದಲ ಕ್ರಾಸಿನಲ್ಲಿ ಅಪಘಾತವಾಗಿದೆ.  ಆಗುಂಬೆ ಘಾಟಿಯ ಸೂರ್ಯಾಸ್ತಮಾನ ಜಾಗಕ್ಕೂ ಮೊದಲು ಸಿಗುವ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಸ್ಕೂಲ್ ಬಸ್​, ಆಗುಂಬೆ ಗೇಟ್ ದಾಟಿಕೊಂಡು ಮುಂದಕ್ಕೆ ಸಾಗಿದೆ. ಅಲ್ಲಿಂದ ತಿರುವಿನಲ್ಲಿ ವೇಗವಾಗಿದ್ದರಿಂದ ಬಸ್​ ಕಂಟ್ರೋಲ್​ಗೆ ಸಿಗದೇ ತಿರುವಿನಂಚಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಸ್​ನ ಅರ್ಧ ಭಾಗ ಮುಂದಕ್ಕೆ ಹೋಗಿ ನಿಂತಿದೆ.

 

ಇನ್ನೂ ಘಟನೆ ಬೆನ್ನಲ್ಲೆ ಅಲ್ಲಿದ್ದವರೆಲ್ಲಾ ಬಸ್​ನಲ್ಲಿರುವವರನ್ನ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ. ಅಲ್ಲದೆ ನಡೆದ ಘಟನೆಯನ್ನು ನೆನೆದು ಸಣ್ಣದರಲ್ಲಿ ಆಯ್ತು ದೇವರು ದೊಡ್ಡವನು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.  

 


 

ಇನ್ನಷ್ಟು ಸುದ್ದಿಗಳು 

 

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

 

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!