ಬಿ.ವೈ.ರಾಘವೇಂದ್ರರವರು ಏನೋ ಮಂತ್ರ ಮಾಡಿದ್ದಾರೆ! ಬಿ.ಎಸ್​. ಯಡಿಯೂರಪ್ಪರವರು ಹೀಗೆ ಹೇಳಿದ್ದೇಕೆ ನೋಡಿ

B.Y. Raghavendra has done something magical! See why B.S.Yediyurappa said this.

ಬಿ.ವೈ.ರಾಘವೇಂದ್ರರವರು ಏನೋ ಮಂತ್ರ ಮಾಡಿದ್ದಾರೆ! ಬಿ.ಎಸ್​. ಯಡಿಯೂರಪ್ಪರವರು ಹೀಗೆ ಹೇಳಿದ್ದೇಕೆ ನೋಡಿ
B.Y. Raghavendra has done something magical! See why B.S.Yediyurappa said this.

SHIVAMOGGA  |  Jan 27, 2024  |   ಶಿವಮೊಗ್ಗದಲ್ಲೀಗ ಬಿ.ವೈ.ರಾಘವೇಂದ್ರ ರವರನ್ನ ಮತ್ತೆ ಗೆಲ್ಲಿಸಿ ಎಂದು ಶಾಮನೂರು ಶಿವಶಂಕರಪ್ಪರವರು ಹೇಳಿದ ಮಾತು ಇದೀಗ ಸಖತ್ ಚರ್ಚೆಯಾಗುತ್ತಿದೆ. ಇದರ ನಡುವೆ ಹಿರಿಯ ಮುಖಂಡರ ಶಾಮನೂರು ಶಿವಶಂಕರಪ್ಪರವರ ಮಾತಿಗೆ ಅಭಿನಂದನೆ ತಿಳಿಸುತ್ತಾ ತಮ್ಮ ನಿವಾಸದ ಬಳಿ ಮಾತನಾಡಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ , ತಮ್ಮ ಮಗನ ಸಾಧನೆ ಬಗ್ಗೆ ತಮಾಷೆಯನ್ನು ಸಹ ಮಾಡಿದ್ದಾರೆ. 

ಒಂದರ ಹಿಂದೆ ಒಂದು ಪ್ರಶ್ನೆ ಕೇಳುತ್ತಿದ್ದ ವರದಿಗಾರರ ನಡುವೆ, ಪತ್ರಕರ್ತರೊಬ್ಬರು ಶಾಮನೂರು ಶಿವಶಂಕರಪ್ಪರವರ ವಿಚಾರವನ್ನು ಪ್ರಶ್ನಿಸಿದ್ದಾರೆ. ವರದಿಗಾರರ ಮಾತಿಗೆ ಮರುಕ್ಷಣವೇ ಪ್ರತಿಕ್ರಿಯಿಸಿದ ಬಿಎಸ್​ವೈ ರಾಘವೇಂದ್ರರವರು ಏನೋ ಮಂತ್ರ ಮಾಡಿದ್ದಾರೆ ಎಂದರು. ಇದಕ್ಕೆ ವರದಿಗಾರರು ಸೇರಿದಂತೆ ಎಲ್ಲರೂ ನಕ್ಕರು. 

ಆ ಬಳಿಕ ಪಕ್ಷಭೇದ ಮರೆತು ಶಾಮನೂರು ಶಿವಶಂಕರಪ್ಪರವರು ಹೇಳಿಕೆ ನೀಡಿದ್ದು, ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ ಎಂದರು. ಅಲ್ಲದೆ ಇದಕ್ಕೂ ಮೊದಲು ಮಂಡ್ಯಕ್ಕೆ ಹೋಗುತ್ತೇನೆ ಅಲ್ಲಿ ಎಸ್.​ಎಂ. ಕೃಷ್ಣ ರವರು ಹಾಗೂ ನನಗೂ ಸನ್ಮಾನ ಮಾಡುತ್ತಿದ್ದಾರೆ. ಅಲ್ಲಿಯವರು ಎಂಬ ಕಾರಣಕ್ಕೆ ಸನ್ಮಾನ ಮಾಡುತ್ತಿದ್ದಾರೆ. ಅದಕ್ಕಾಗಿ ಅಲ್ಲಿಗೆ ಹೋಗುತ್ತಿದ್ದೇನ ಎಂದರು