ಕುಂಕುಮ ವಿವಾದದ ಬಳಿಕ ತಾಳಿ ವಿಚಾರಕ್ಕೆ ಗೀತಾ ಶಿವರಾಜಕುಮಾರ್‌ ದಿಟ್ಟ ಉತ್ತರ | ದೊಡ್ಡಮಾತು

Geetha Sivarajkumar's bold answer to the tali issue after the saffron controversy big talk Shivraj Kumar, Shimoga Lok Sabha Election, Shimoga News

ಕುಂಕುಮ ವಿವಾದದ ಬಳಿಕ  ತಾಳಿ ವಿಚಾರಕ್ಕೆ ಗೀತಾ ಶಿವರಾಜಕುಮಾರ್‌ ದಿಟ್ಟ ಉತ್ತರ |  ದೊಡ್ಡಮಾತು
Geetha Sivarajkumar

SHIVAMOGGA | MALENADUTODAY NEWS | Apr 26, 2024     

ಶಿವಮೊಗ್ಗ ಲೋಕಸಭಾ ಕಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಗೀತಾ ಶಿವರಾಜಕುಮಾರ್‌ ಇದೀಗ ತಮ್ಮ ಎದುರಾಳಿಗಳಿಗೆ ಖಡಕ್‌ ರಿಪ್ಲೆ ನೀಡುತ್ತಿದ್ದಾರೆ. ಮೊನ್ನೆ ಮೊನ್ನೆ ಕುಂಕುಮದ ವಿಚಾರದಲ್ಲಿ ತಮ್ಮ ವಿರುದ್ಧದ ಟೀಕೆಗೆ ಉತ್ತರಿಸಿದ್ದ ಅವರು, ಇದೀಗ ನಿನ್ನೆ ತಾಳಿ ಕಳೆದುಕೊಳ್ಳಬೇಕಾಗುತ್ತದೆ ಎಂಬ ಹೇಳಿಕೆಗೆ ಆಕ್ರೋಶ ಹೊರಹಾಕಿದ್ದಾರೆ.  

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರು ತಾಳಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಪಕ್ಷದ ಉನ್ನತ ಸ್ಥಾನದಲ್ಲಿರುವ ನಾಯಕರೊಬ್ಬರು ಹೇಳಿಕೆ ನೀಡಿದ್ದು, ಇದು ಸರಿಯಲ್ಲ ಎಂದಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಮತಯಾಚನೆ ಸಭೆಯಲ್ಲಿ  ಮಾತನಾಡಿದ ಅವರು, ತಾಳಿಯ ಮಹತ್ವ ಅರಿತು ಟೀಕೆಗಳಿಗೆ ಇಳಿಯಬೇಕು. ಭಾರತೀಯ ಸಂಸ್ಕ್ರತಿಯಲ್ಲಿ ತಾಳಿ, ಕಾಲುಂಗುರ, ಹಣೆಗೆ ಕುಂಕುಮ ಹೆಣ್ಣಿಗೆ ಸೂಕ್ಷ್ಮ ವಿಚಾರಗಳು. ಅದಕ್ಕೆ ಧಕ್ಕೆ ಉಂಟಾದರೆ, ಸಹಿಸಲಾಗದು. ಈ ರೀತಿಯ ಬೇಜವ್ದಾರಿಯುತ ಹೇಳಿಕೆ ನೀಡುವ ಮೊದಲು ಎಚ್ಚರ ವಹಿಸಬೇಕು ಎಂದರು.

ಇನ್ನೂ ನಿನ್ನೆ ದಿನ ಗೀತಾ ಶಿವರಾಜಕುಮಾರ್‌ ದಂಪತಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಉಂಬ್ಳೆಬೈಲು ಗ್ರಾಮ, ಕೋಣಂದೂರು ಅಗ್ರಹಾರದ ಮೇಲಿನಕುರುವಳ್ಳಿ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೊಂಬುಜ ಜೈನ ಮಠ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಗರ್ತಿಕೆರೆಯ ಈಡಿಗ ಮಠ ಸೇರಿದಂತೆ ಈ ಭಾಗದಲ್ಲಿ ಪ್ರಚಾರ ನಡೆಸಿದರು.