ದಾರಿ ಮಧ್ಯೆ ಅಡ್ಡಬಂದು ಡಿಕ್ಕಿಯಾದ ಜೆಸಿಬಿ | ಬೈಕ್‌ ಸವಾರ ಸಾವು | ಇನ್ನೊಬ್ಬನ ಸ್ಥಿತಿ ಗಂಬೀರ

JCB collided with a bike in the middle of the road.. Shimoga District, Sagar Taluk News, Anandpur Police Station, Anandpur,

ದಾರಿ ಮಧ್ಯೆ ಅಡ್ಡಬಂದು ಡಿಕ್ಕಿಯಾದ ಜೆಸಿಬಿ | ಬೈಕ್‌ ಸವಾರ ಸಾವು | ಇನ್ನೊಬ್ಬನ ಸ್ಥಿತಿ ಗಂಬೀರ
Shimoga District, Sagar Taluk News, Anandpur Police Station, Anandpur,JCB

SHIVAMOGGA | MALENADUTODAY NEWS | Apr 28, 2024    ‌

ಇದಕ್ಕಿದ್ದ ಹಾಗೆ ಜೆಸಿಬಿ ರಸ್ತೆಗೆ ಬಂದು ಬೈಕ್‌ವೊಂದು ಡಿಕ್ಕಿಯಾದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ ಸಂಭವಿಸಿದೆ. ನಿನ್ನೆ ನಡೆದ ಘಟನೆಯಲ್ಲಿ, ಓರ್ವ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ಇನ್ನೊಬ್ಬನಿಗೆ ಗಂಭೀರ ಗಾಯವಾಗಿದೆ. 

ತಾಲೂಕಿನ ಆನಂದಪುರದಲ್ಲಿ ಕೆರೆ ಏರಿ ಬಳಿ ಬೈಕ್‌ ಸವಾರರು ಬೈಕ್‌ ಓಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಕ್ರಾಸ್‌ನಿಂದ ರಸ್ತೆಗೆ ವೇಗವಾಗಿ ಬಂದ ಜೆಸಿಬಿ ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಜೆಸಿಬಿ ಬಕೆಟ್‌ ಬೈಕ್‌ ಸವಾರರಿಗೆ ಚುಚ್ಚಿಕೊಂಡಿದೆ. ಹೀಗಾಗಿ ಇಬ್ಬರು ಬೈಕ್‌ ಸವಾರರಿಗೂ ಗಂಭೀರ ಗಾಯವಾಗಿ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನ ಆನಂದಪುರ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಯ್ತು. ಅಲ್ಲಿಂದ ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಮೃತನನ್ನ ಸೈಯದ್ ಹುಸೇನ್ ಎಂದು ಗುರುತಿಸಲಾಗಿದೆ . ಇನ್ನೊಬ್ಬ ಬೈಕ್‌ ಸವಾರ ಮುಬಾಕರ್‌ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆನಂದಪುರ ಪೊಲೀಸ್‌ ಠಾಣೆ ಪೊಲೀಸರು ಕೇಸ್‌ ಮಾಡಿದ್ದಾರೆ.