ಶಿವಮೊಗ್ಗಕ್ಕೆ ಬರಲಿದ್ದಾರೆ ಮತ್ತೊಬ್ಬ ದೊಡ್ಡವರು | ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು?

Another big man is coming to Shimoga MP B.Y. What did Raghavendra say? . Shimoga Lok Sabha Constituency News, B.Y. Raghavendra, JP Nadda,

ಶಿವಮೊಗ್ಗಕ್ಕೆ ಬರಲಿದ್ದಾರೆ ಮತ್ತೊಬ್ಬ ದೊಡ್ಡವರು | ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು?
Shimoga Lok Sabha Constituency News, B.Y. Raghavendra, JP Nadda,

SHIVAMOGGA | MALENADUTODAY NEWS | Apr 28, 2024   Shimoga Lok Sabha Constituency News, B.Y. Raghavendra, JP Nadda,

ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಮತದಾರರನ್ನ ಸೆಳೆಯಲು ಅತಿರಥ ಮಹಾರಥ ನಾಯಕರೆಲ್ಲಾ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಹೈಪ್ರೊಫೈಲ್‌ ನಾಯಕರ ಪಟ್ಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಸೇರ್ಪಡೆಗೊಂಡಿದ್ದಾರೆ. 

ಲೋಕಸಭೆ ಚುನಾವಣೆಯ ಪ್ರಚಾರ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ   (jp nadda)ಇದೇ ಏಪ್ರಿಲ್ 30ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.‌ ಈ ಬಗ್ಗೆ ಸ್ವತಃ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ  ಮಾತನಾಡಿದ್ದಾರೆ. ನಿನ್ನೆ ಈ ವಿಚಾರ ತಿಳಿಸಿದ ಅವರು,  ಕಾಂಗ್ರೆಸ್ ಪರ ಸಿನಿಮಾ ನಟರು ಪ್ರಚಾರಕ್ಕೆ ಬರಲಿ. ನಮ್ಮ ಮತದಾರರಿಗೆ ಹತ್ತಿರದಿಂದ ನೋಡುವ ಅವಕಾಶ ಸಿಗುತ್ತದೆ. ಆದರೆ ಇದೆಲ್ಲಾ ಮತವಾಗಿ ಪರಿವರ್ತನೆ ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.