ಕೆರೆಗಳಲ್ಲಿ ಸತ್ತ ಮೀನು ತಂದು ಆಹಾರ ತಯಾರಿಸಿ ತಿನ್ನಬೇಡಿ | ಜೀವಂತ ಮೀನುಗಳನ್ನೆ ಬಳಸಿ |
Do not eat food made from dead fish Use live fish Fish food, Arakalagudu, Hassan
SHIVAMOGGA | MALENADUTODAY NEWS | May 6, 2024
ಅರಕಲಗೂಡು ತಾಲ್ಲೂಕು ಬಸವನಹಳ್ಳಿ ಕೆರೆಯಲ್ಲಿದ್ದ ಮೀನುಗಳನ್ನ ತಿಂದವರು ಅಸ್ವಸ್ಥಗೊಂಡ ಪ್ರಕರಣದ ಬೆನ್ನಲ್ಲೆ ಸರ್ಕಾರಿ ಆರೋಗ್ಯ ಇಲಾಖೆ ಅಧಿಕಾರಿಗಳು ಸತ್ತ ಮೀನು ತಂದು ತಯಾರಿಸಿದ ಆಹಾರ ತಿನ್ನಬೇಡಿ ಎಂದು ಎಚ್ಚರಿಸುತ್ತಿದ್ದಾರೆ.
20 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಬೆನ್ನಲ್ಲೆ ಪ್ರಕರಣದಲ್ಲಿ ಯಾವ ಕಾರಣಕ್ಕಾಗಿ ಅಷ್ಟು ಮಂದಿ ಅಸ್ವಸ್ಥರಾದರು ಎಂದು ಕಾರಣ ಹುಡುಕಲಾಗುತ್ತಿದೆ. ಇದರ ಜೊತೆಯಲ್ಲಿಯೇ ನೀರಿಲ್ಲದ ಕೆರೆಗಳಲ್ಲಿ ಸತ್ತ ಮೀನುಗಳನ್ನ ತಿಂದರೆ ಆರೋಗ್ಯಕ್ಕೆ ತೊಂದರೆಯಾಗುವ ಅಪಾಯವಿರುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಇನ್ನೂ ಈ ಬಗ್ಗೆ ರಾಜ್ಯಮಟ್ಟದ ಪತ್ರಿಕೆಯೊಂದು ವರದಿ ಮಾಡಿದ್ದು, ಜೀವಂತವಾಗಿ ಹಿಡಿದ ಮೀನುಗಳಿಂದ ಆಹಾರ ತಯಾರಿಸಿ ಸೇವಿಸುವುದು ಒಳ್ಳೆಯದು ಎಂದು ಸಲಹೆ ನೀಡಿದೆ.