ಶಿವಮೊಗ್ಗದಲ್ಲಿ ರೆಡ್‌ ಪಲ್ಸರ್‌ ಹಾವಳಿ! ಒಂದು ಗಂಟೆಯಲ್ಲಿ ಮೂರು ಕಡೆ ಕೃತ್ಯ! ವಾಕಿಂಗ್‌ ಹೋಗುವ ಮಹಿಳೆಯರೇ ಟಾರ್ಗೆಟ್!‌

In Shivamogga, three cases of chain snatching have been registered by miscreants who came in a red Pulsar

ಶಿವಮೊಗ್ಗದಲ್ಲಿ ರೆಡ್‌ ಪಲ್ಸರ್‌ ಹಾವಳಿ!  ಒಂದು ಗಂಟೆಯಲ್ಲಿ ಮೂರು ಕಡೆ ಕೃತ್ಯ! ವಾಕಿಂಗ್‌ ಹೋಗುವ ಮಹಿಳೆಯರೇ ಟಾರ್ಗೆಟ್!‌
chain snatching ,red Pulsar

Shivamogga  Apr 6, 2024 chain snatching ,red Pulsar  |  ಶಿವಮೊಗ್ಗದ ಗುಂಡಪ್ಪಶೆಡ್‌ನಲ್ಲಿರುವ ಕೆಎಸ್‌ ಈಶ್ವರಪ್ಪನವರ ಮನೆ ಹತ್ತಿರ ಸರಗಳ್ಳತನ ನಡೆದಿದ್ದು, ಆ ಘಟನೆಯ ದೃಶ್ಯ ಈಶ್ವರಪ್ಪನವರ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಈ ಬಗ್ಗೆ ಮಲೆನಾಡು ಟುಡೆ ಎಕ್ಸ್‌ಕ್ಲ್ಯೂಸಿವ್‌ ವರದಿ ಮಾಡಿತ್ತು. ಅಲ್ಲದೆ ಸಿಸಿ ಕ್ಯಾಮರಾ ದೃಶ್ಯಗಳು ಪೊಲೀಸರಿಗೆ ದೊಡ್ಡ ಲೀಡ್‌ ನೀಡುವ ಸಾಧ್ಯತೆ ಇದೆ.. 

BREAKING NEWS | ಕೆಎಸ್‌ ಈಶ್ವರಪ್ಪರವರ ಮನೆ ಬಳಿ ಶಾಕಿಂಗ್‌ ಘಟನೆ | ಬೈಕ್‌ ಸವಾರರ ಕೃತ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆ!

ಆತಂಕಕಾರಿ ಸಂಗತಿ ಅಂದರೆ, ಅದೇ ದಿನ ಇನ್ನೆರಡು ಕಡೆಗಳಲ್ಲಿ ಸರಗ‍ಳ್ಳತನವಾಗಿದೆ. ಗುಂಡಪ್ಪ ಶೆಡ್‌ ನಲ್ಲಿ 5.20 ರ ಸುಮಾರಿಗೆ, ಗೋಪಾಳದಲ್ಲಿ 5.50 ರ ಸುಮಾರಿಗೆ ಇನ್ನೂ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನ ಶರಾವತಿ ನಗರದಲ್ಲಿ ಬೆಳಗ್ಗೆ 6.00 ಗಂಟೆ ಸುಮಾರಿಗೆ ಸರಗಳ್ಳತನ ನಡೆದಿದೆ. ರೆಡ್‌ ಪಲ್ಸರ್‌ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಈ ದುಷ್ಕೃತ್ಯವೆಸಗಿದ್ದಾರೆ ಎಂದು ಮೂರು ಕಂಪ್ಲೆಂಟ್‌ ನೀಡಲಾಗಿದ್ದು ತುಂಗಾನಗರ ಪೊಲೀಸ್‌ ಸ್ಟೇಷನ್‌, ಕೋಟೆ ಪೊಲೀಸ್‌ ಸ್ಟೇಷನ್‌ ಹಾಗೂ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ. 

ಪ್ರಕರಣ ಒಂದು | ಬೆಳಗ್ಗೆ 5.20 ರ ಸುಮಾರಿಗೆ ಶಿವಮೊಗ್ಗ ನಗರದ ಗುಂಡಪ್ಪ ಶೆಡ್‌ ನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರ ಇರುವ ತಮ್ಮ ಮನೆಯ ಮುಂದೆ ಇದ್ದ ಹೂವಿನ ಗಿಡದಲ್ಲಿ.. ದೇವರ ಪೂಜೆಗೆಂದು ಹೂವನ್ನು ಕಿತ್ತುಕೊಳ್ಳುತ್ತಿದ್ದಾಗ ಮಹಿಳೆಯೊಬ್ಬರನ್ನ ಅಡ್ರೆಸ್‌ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಬಂದಿದ್ದಾರೆ.  

ಬೈಕಿನಲ್ಲಿ ಬಂದ ಆರೋಪಿಗಳು ಪ್ರಿಂಟಿಂಗ್‌ ಪ್ರೆಸ್‌  ಎಲ್ಲಿದೆ ಅಂತ ಅರ್ಧ ಕನ್ನಡ ಅರ್ಧ ಹಿಂದಿಯ ಭಾಷೆಯಲ್ಲಿ ವಿಚಾರಿಸಿದ್ದಾರೆ. ತಮಗೆ ಗೊತ್ತಿಲ್ಲ ಎಂದು ಮಹಿಳೆ ಇನ್ನೊಬ್ಬರ ಜೊತೆ ತಮ್ಮ ಮನೆಗೆ ಹೊರಟಿದ್ದಾರೆ. ಅಷ್ಟರಲ್ಲಿ ಬೈಕ್‌ ಇಳಿದು ಬಂದ ಒಬ್ಬಾತ  ಮಹಿಳೆಯ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 35 ಗ್ರಾಂ ತೂಕದ ಅಂದಾಜು 2.10.000/- ರೂ ಬೆಲೆ ಬಾಳುವ ಬಂಗಾರದ ಸರ ಕಿತ್ತುಕೊಂಡು ಎಸ್ಕೇಪ್‌ ಆಗಿದ್ದಾನೆ.  

ಪ್ರಕರಣ ಎರಡು|  ಬೆಳಗ್ಗೆ 5.50 ರ ಸುಮಾರಿಗೆ ವಾಕಿಂಗ್‌ ಮಾಡಲು ಗೋಪಾಳಗೌಡ ಬಡಾವಣೆ, ಎ ಬ್ಯಾಕ್ ನಲ್ಲಿರುವ ಶ್ರೀ ಕೃಷ್ಣ ಮಠ ಎದುರು ಭಾಗದಲ್ಲಿ ಪಾರ್ಕ ಹತ್ತಿರ ಹೋಗುತ್ತಿದ್ದಾಗ ಪಲ್ಸರ್‌ ಬೈಕ್‌  ಒಂದು ಬಂದಿದೆ. ಅದರಲ್ಲಿದ್ದ ಇಬ್ಬರು ಅಡ್ರೆಸ್‌ ಕೇಳಿದ್ದಾರೆ. ಗೊತ್ತಿಲ್ಲ ಎಂದ ಮಹಿಳೆ ಮುಂದಕ್ಕೆ ಹೋಗಿದ್ದಾರೆ. ಮೊದಲ ಘಟನೆಯ ರೀತಿಯಲ್ಲಿಯೇ ಬೈಕ್‌ನಲ್ಲಿದ್ದ ಒಬ್ಬಾತ ಮುಂದೆ ಹೋದ ಮಹಿಳೆಯ ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಸರ ಎಳೆದಿದ್ದಾನೆ. ಘಟನೆಯಲ್ಲಿ  25 ಗ್ರಾಂ ನ ಬಂಗಾರದ ಸರ ಕಳ್ಳತನವಾಗಿದೆ 

ಪ್ರಕರಣ ಮೂರು | ಇನ್ನು ಅದೇ ದಿನ ಬೆಳಗ್ಗೆ 6.00 ಗಂಟೆ ಸುಮಾರಿಗೆ  ಸರ್ಕ್ಯೂಟ್ ಹೌಸ್ ಗೆ ವಾಕಿಂಗ್ ಹೋಗಲು ಶರಾವತಿ ನಗರ ಆದಿ ಚುಂಚನಗಿರಿ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸರಗಳ್ಳತನಕ್ಕೆ ಯತ್ನಿಸಲಾಗಿದೆ.  ರೆಡ್ ಪಲ್ಸರ್ ಬೈಕ್ ನಿಲ್ಲಿಸಿಕೊಂಡಿದ್ದ ಇಬ್ಬರು ದುಷ್ಕರ್ಮಿಗಳ ಪೈಕಿ ಓರ್ವ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕದಿಯಲು ಮುಂದಾಗಿದ್ದಾನೆ. ಅಷ್ಟರಲ್ಲಿ ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಕಿರುಚಲು ಆರಂಭಿಸಿದ್ದಾರೆ. ಹೀಗಾಗಿ ಆರೋಪಿಗಳು ಜನ ಸೇರುತ್ತಾರೆ ಎಂದು ಬೈಕ್ ತಿರುಗಿಸಿಕೊಂಡು ಎಸ್ಕೇಪ್‌ ಆಗಿದ್ದಾರೆ. ಈ ಘಟನೆಯಲ್ಲಿ  8 ಗ್ರಾಂ ಚಿನ್ನ ಕಳ್ಳತನವಾಗಿದೆ