ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚಾನ ಎನ್ಕೌಂಟರ್ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?
Planning mastermind Bachchan's encounter drama? Is the video fake? Do you know why?
ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚಾನ ಎನ್ಕೌಂಟರ್ ಡ್ರಾಮಾ? ರೌಡಿಶೀಟರ್ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್ಪಿ ತನಿಖೆ ನಡೆಸಲೇಬೇಕು ?
ಇದು ಮಲೆನಾಡು ಟುಡೇ ಎಕ್ಸ್ಕ್ಲ್ಯೂಸಿವ್ ವರದಿ
ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್ ಮಾಡಿದ್ದು?
ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ?
ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ನಿಜವೇನಾ?
ಅಥವಾ ಪೊಲೀಸರನ್ನೇ ಹಣಿಯುವ ಮತ್ತೊಂದು ಕುತಂತ್ರನಾ?
ಪೊಲೀಸ್ ಅಧಿಕಾರಿಗಳು ಶಿವಮೊಗ್ಗ ಜೈಲಿನ ಸೆಲ್ನ ಒಳಕ್ಕೆ ಹೋಗಿ, ಕಾರಾಗೃಹ ಸುಪರ್ಧಿಯಲ್ಲಿರುವ ಆರೋಪಿಯನ್ನು ವರ್ಕ್ ಮಾಡಲು ಸಾಧ್ಯವೇ?
ಹಾಗೊಂದು ವೇಳೆ ಬಚ್ಚಾ & ಗ್ಯಾಂಗ್ನನ್ನ ವರ್ಕ್ ಮಾಡಿದ್ದೇ ಆದಲ್ಲಿ, ಅದರ ವಿಡಿಯೋ ಮಾಡಿಕೊಳ್ಳುವಷ್ಟು ದಡ್ಡರೇ ಪೊಲೀಸ್ ಅಧಿಕಾರಿಗಳು
ಕದ್ದು ಮುಚ್ಚಿ ಪೊಲೀಸ್ ವರ್ಕ್ನ್ನ ಮೊಬೈಲ್ನಲ್ಲಿ ಶೂಟಿಂಗ್ ಮಾಡಿದ್ದಾದರೂ ಯಾರು?
ಎಸ್ಪಿ ಲಕ್ಷ್ಮೀಪ್ರಸಾದ್ ಇದನ್ನ ತನಿಖೆ ನಡೆಸಲೇಬೇಕು?
ಹೌದು, ಯಾಕೆಂದರೆ, ಜೈಲಿನಲ್ಲಿ ಇರುವಾಗ ಆರೋಪಿಗಳ ಮೇಲೆ ಪೊಲೀಸ್ ಅಧಿಕಾರಿಗಳು ಲಾಠಿ ಬೀಸಿದ್ದೇ
ಆದರೆ, ಅದು ಅಕ್ಷಮ್ಯ ಅಪರಾಧ ಆಗುತ್ತದೆ.
ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ & ಆದರೆ,
ಶಿವಮೊಗ್ಗ ಜೈಲಿನಿಂದ ಹೊರಬಿದ್ದಿರುವ ವಿಡಿಯೋ ನಕಲಿ ವಿಡಿಯೋ! ಅದೊಂದು ದೃಶ್ಯ ಸಿನಿಮಾ ಸ್ಟೈಲ್ನಲ್ಲಿ ಸೃಷ್ಟಿಸಿರೋ ವಿಡಿಯೋ ಎಂದು ಶಿವಮೊಗ್ಗ ಜೈಲು ಅಧೀಕ್ಷಕ ಮಹೇಶ್ ಎ ಜಿಗಣಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇದು ಮೊದಲನೇ ವಿಷಯ. ಇನ್ನೂ ವಿಡಿಯೋ ವಿಚಾರದಲ್ಲಿ ಇರುವ ಪಿನ್ ಟು ಪಿನ್ ಪಾಯಿಂಟ್ಗಳನ್ನ ನಿಮ್ಮ ಮುಂದೆ ಇಡುತ್ತೇವೆ.
ಅಸಲಿಗೆ ವಿಡಿಯೋ ಯಾವತ್ತಿನದ್ದು ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ.
ನಿನ್ನೆ, ಮೊನ್ನೆ, ಆಚೆ ಮೊನ್ನೆಯ ವಿಡಿಯೋ ಇದಾಗಿದ್ದರೇ, ಖಂಡಿತ ಇಂತಹ ದೃಶ್ಯ ಸಿಗೋ ಚಾನ್ಸೇ ಇಲ್ಲ. ಯಾಕೆಂದರೆ ಬಚ್ಚಾ ಹಾಗೂ ಆತನ ಸಹಚರರು ಇನ್ನೂ ಮೆಗ್ಗಾನ್ ಆಸ್ಪತ್ರೆಯಲ್ಲಿದ್ದಾರೆ.
ಬಚ್ಚಾ ಹಾಗೂ ಆತನ ಸಹಚರರ ಮೇಲೆ ಜೈಲಿನ ಸೆಲ್ನಲ್ಲಿ ಪೊಲೀಸರು ಲಾಠಿ ಬೀಸೋದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ,
ಬಚ್ಚಾ ವಿಚಾರಣಾಧೀನ ಕೈದಿ ಆತನ ಜವಾಬ್ದಾರಿ ಕಾರಾಗೃಹ ಸಿಬ್ಬಂದಿಯದ್ದಾಗಿರುತ್ತದೆ. ಕಾರಾಗೃಹ ಸಿಬ್ಬಂದಿ, ಯಾವ ಕಾರಣಕ್ಕೂ ಪೊಲೀಸರ ಹಸ್ತಕ್ಷೇಪಕ್ಕೆ ಅವಕಾಶ ನೀಡಲಾರರು.
ಕೋರ್ಟ್ ಪರ್ಮಿಶನ್ ಇದ್ದಲ್ಲಿ ಮಾತ್ರ, ಆರೋಪಿಯನ್ನು ವಿಚಾರಣೆ ನಡೆಸಬಹುದು ಪೊಲೀಸರು. ಇದರ ಹೊರತಾಗಿ ಇನ್ಯಾವ ಕ್ರಮಕ್ಕೂ ಕಾರಾಗೃಹದಲ್ಲಿ ಅನುಮತಿ ಸಿಗೋದಿಲ್ಲ.
ವಿತ್ ಔಟ್ ಯೂನಿಫಾರಮ್ ಪೊಲೀಸರೇ ಆಗಲಿ ಕಾರಾಗೃಹ ಇಲಾಖೆ ಸಿಬ್ಬಂದಿಯೇ ಆಗಲಿ ಸೆಲ್ನ ಒಳಕ್ಕೆ ಹೋಗುವಂತಿಲ್ಲ.
ಹೊರಬಿದ್ದಿರೋ ವಿಡಿಯೋಗಳಲ್ಲಿ ಯೂನಿಫಾರಮ್ ಇಲ್ಲದೇ ಇರುವ ವ್ಯಕ್ತಿಯೊಬ್ಬರು ಲಾಠಿಯಿಂದ ಬೀಸುತ್ತಿದ್ದಾರೆ.
ಸೆಲ್ನಲ್ಲಿ ಯೂನಿಫಾರಮ್ ಇಲ್ಲದೇ ಇರುವವರು ಎಂದರೇ ಅವರು ವಿಚಾರಣಾಧೀನ ಕೈದಿಗಳು ಅನ್ನುವುದರಲ್ಲಿ ಯಾವುದೆ ಅನುಮಾನ ಇಲ್ಲ.
ಜೈಲಿನಲ್ಲಿ ಇರುವ ಸಿಸಿ ಕ್ಯಾಮರಾಗಳು ಪೊಲೀಸರು ಹಾಗೂ ಕಾರಾಗೃಹ ಸಿಬ್ಬಂದಿ ಚಲನವಲನಗಳನ್ನ ರೆಕಾರ್ಡ್ ಮಾಡಿರುತ್ತವೆ.
ಅಧಿಕೃತವಾಗಿ ನಡೆಯುವ ಈ ರೆಕಾರ್ಡಿಂಗ್ಗಳನ್ನು ಕಣ್ತಪ್ಪಿಸಿ ಪೊಲೀಸರು ಬಚ್ಚನಾ ಮೇಲೆ ವರ್ಕ್ಔಟ್ ಮಾಡಲು ಸಾಧ್ಯವಿದೆಯಾ ಅನ್ನೋದು ಡೌಟ್
ಇನ್ನೂ ವಿಡಿಯೋದಲ್ಲಿ ವರ್ಕ್ ಮಾಡಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಗಳು ಕಾರಾಗೃಹಕ್ಕೆ ದಾಳಿ ಮಾಡಿದ್ದು ಒಂದೇ ದಿನ, ಮತ್ತೆ ಅಲ್ಲಿಗೆ ಹೋಗಿಲ್ಲ. ಇದನ್ನ ಅದೀಕ್ಷಕರೇ ಸ್ಪಷ್ಟಪಡಿಸಿದ್ದಾರೆ.
ಹಾಗೆ, ರೇಡ್ ನಡೆಸಿದ್ದ ದಿನವೂ ಸಹ ಬಚ್ಚಾನ ಸೆಲ್ಗೆ ಹೋಗುವಾಗ ಇನ್ಸ್ಪೆಕ್ಟರ್ ಗುರುರಾಜ್ ಹಾಗೂ ತಂಡದ ಜೊತೆಯಲ್ಲಿ ಕಾರಾಗೃಹ ಸಿಬ್ಬಂದಿಯು ಇದ್ದರು. ಅದು ಸಹ ಡ್ಯೂಟಿ ಸಮವಸ್ತ್ರದೊಂದಿಗೆ.
ಈ ಸಂದರ್ಭದಲ್ಲಿಯೇ ಬಚ್ಚಾನ ಮೇಲೆ ಪೊಲೀಸರು ವರ್ಕ್ ಮಾಡಿದ್ದರೇ, ಅದಕ್ಕೆ ಕಾರಾಗೃಹ ಸಿಬ್ಬಂದಿ ಅವಕಾಶ ನೇ ನೀಡುತ್ತಿರಲಿಲ್ಲ.
ಇನ್ನೂ ರೌಡಿಶೀಟರ್ ಬಚ್ಚಾ , ಒಬ್ಬ ಮಾಸ್ಟರ್ ಪ್ಲಾನಿಂಗ್ ಮೈಂಡ್, ಆತನದ್ದು ಬರೀ ಬೆದರಿಕೆ ಹಾಗೂ ಕುತಂತ್ರದ ಆಟ.
ಈ ಸಲ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಗುರುರಾಜ್ರನ್ನ ಟಾರ್ಗೆಟ್ ಮಾಡುವ ಕಾರಣಕ್ಕೆ ತನ್ನ ಸಹಚರರ ಜೊತೆ ಸೇರಿ ವಿಡಿಯೋ ಮಾಡಿದ್ದಾನೆ.
ಇಂತಹ ಹಲವು ವಿಡಿಯೋಗಳ ಸಂಗ್ರಹವೇ ಬಚ್ಚಾನ ಬಳಿ ಇದೆ ಎನ್ನಲಾಗುತ್ತಿದೆ. ಒಂದೊಂದೆ ವಿಡಿಯೋಗಳು ಬೇರೆ ಬೇರೆ ರೂಪದಲ್ಲಿ ಬಿಡುಗಡೆಯಾಗುತ್ತಿದೆ.
ಸದ್ಯ ರಿಲೀಸ್ ಆಗಿರೋ ವಿಡಿಯೋ ಆತನದ್ದೆ ಸೃಷ್ಟಿ ಅನ್ನೋದು ಬಹುತೇಕ ಗೊತ್ತಾಗುತ್ತಿದೆ.
ಪರಪ್ಪನ ಅಗ್ರಹಾರದಲ್ಲೂ ಇದನ್ನೆ ಮಾಡಿಕೊಂಡು ಅಧಿಕಾರಿಗಳನ್ನು ಭೀತಿಯಲ್ಲಿ ಇರಿಸಿದ್ದ.
ಅದೇ ಆಟವನ್ನು ಶಿವಮೊಗ್ಗ ಜೈಲಿನಲ್ಲಿಯು ಆಡುತ್ತಿದ್ದಾನೆ. ಆದರೆ ಶಿವಮೊಗ್ಗ ಪೊಲೀಸರು ಇದಕ್ಕೆ ಸೊಪ್ಪು ಹಾಕುವ ಲಕ್ಷಣ ತೋರುತ್ತಿಲ್ಲ.
ಈ ಕಾರಣಕ್ಕೆ ಸಾಲು ಸಾಲು ವಿಡಿಯೋ ಸ್ಟೋರಿಗಳು ಸೃಷ್ಟಿಯಾಗುತ್ತಿವೆ. ಇಲ್ಲಿ ದಡ್ಡರು ಯಾರು ಆಗುತ್ತಿರೋದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ
ಆದರೆ, ಬಚ್ಚಾನ ಕೈಗೆ ಪೊಲೀಸರ ಲಾಠಿ ಹಾಗೂ ಮತ್ತೆ ಮೊಬೈಲ್ ಹೇಗೆ ಸಿಕ್ಕಿತ್ತು ಅನ್ನೋದಷ್ಟೆ ಸದ್ಯದ ಪ್ರಶ್ನೆ. ಈ ಬಗ್ಗೆ ಕಾರಾಗೃಹ ಅಧೀಕ್ಷಕರೇ ಗಮನ ಹರಿಸಬೇಕು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹೇಶ್ ಎ ಜಿಗಣಿ ತುಸು ಜಾಸ್ತಿಯೇ ಗಮನ ಕೇಂದ್ರಿಕರಿಸಬೇಕಿದೆ.
ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ರವರು ವಿಡಿಯೋ ಸ್ಟೋರಿಯನ್ನು ಗಂಭೀರವಾಗಿ ಪರಿಗಣಿಸಿ, ಕಾರಣೀಕರ್ತರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.
ವರದಿ : ಬಾಬು