ಹಲವು ಮಾತು ಬಂದು ಹೋಗಿದೆ | ಮುಂದೆ ಮಾತುಗಳನ್ನ ಬದಲಾಯಿಸಬೇಕು | ಕುಮಾರ್ ಬಂಗಾರಪ್ಪ
Many words have come and gone Next words should be changed Kumar Bangarappa. S Bangarappa, Madhu Bangarappa, Shimoga Lok Sabha Election
SHIVAMOGGA | MALENADUTODAY NEWS | May 8, 2024
ಸಂಗ್ರಾಮದ ದಿನಗಳು ಮುಗಿಯಿತು. ಇನ್ನು ಮೇಲೆ ಅಭಿವೃದ್ಧಿಯ ದಿನಗಳು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿದ ಹಿನ್ನೆಲೆ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ಬಿ.ವೈ ರಾಘವೇಂದ್ರ ಅತಿ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಎಂದಿದ್ದಾರೆ.
ಚುನಾವಣಾ ಸಂಗ್ರಾಮಕ್ಕೆ ಜಿಲ್ಲಾ ಬಿಜೆಪಿ, ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಎಲ್ಲಾ ಮಹಾಶಕ್ತಿ ಕೇಂದ್ರಗಳ ಪ್ರಮುಖರು ಕಾರ್ಯಕರ್ತರು ಶ್ರಮಿಸಿದ್ದಾರೆ.ಬಿ.ಎಸ್. ಯಡಿಯೂರಪ್ಪ ತನ್ನ ಮಗ ಎಂದು ಭಾವಿಸದೇ ಒಬ್ಬ ಅಭಿವೃದ್ಧಿಯ ಹರಿಕಾರ ಎಂದು
ಪರಿಗಣಿಸಿ ಮಗನ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಅಲ್ಲದೆ, ರಾಷ್ಟ ಮತ್ತು ರಾಜ್ಯ ನಾಯಕರು ಕೂಡ ಸೊರಬದಲ್ಲಿ ಅನೇಕ ಸಭೆಗಳನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರರಿಗೆ ದೊಡ್ಡ ಲೀಡ್ ಸಿಗಲಿದೆ ಎಂದರು.
ಜೊತೆಯಲ್ಲಿ ಕಾನೂನು ಮೀರಿ ಯಾರೂ ಕೂಡ ಚುನಾವಣೆ ನಡೆಸಲಾಗುವುದಿಲ್ಲ. ಈ ಚುನಾವಣೆಯಲ್ಲಿ ಹಲವಾರು ಮಾತುಗಳು ಬಂದು ಹೋಗಿವೆ. ಮುಂದಿನ ದಿನಗಳಲ್ಲಿ ಮಾತುಗಳನ್ನು ಬದಲಾಯಿಸಬೇಕಾಗುತ್ತದೆ ಎಂದಿದ್ದಾರೆ.