ಶಿವಮೊಗ್ಗದ ಡಬಲ್ ಮರ್ಡರ್ ನ್ನು ಪೊಲೀಸರು ತಪ್ಪಿಸಬಹುದಿತ್ತಲ್ಲವೇ/ ರೌಡಿ ನಿಗ್ರಹ ದಳ ಏನ್ ಮಾಡ್ತಿದೆ- ಜೆಪಿ ಬರೆಯುತ್ತಾರೆ
ಶಿವಮೊಗ್ಗದ ಡಬಲ್ ಮರ್ಡರ್ ನ್ನು ಪೊಲೀಸರು ತಪ್ಪಿಸಬಹುದಿತ್ತಲ್ಲವೇ/ ರೌಡಿ ನಿಗ್ರಹ ದಳ ಏನ್ ಮಾಡ್ತಿದೆ
ಬಹಳ ದಿನಗಳಿಂದ ಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ಚುನಾವಣೆ ಸಂದರ್ಭದಲ್ಲಿ ರೌಡಿಗಳು ಫುಲ್ ಅಲರ್ಟ್ ಆಗಿ, ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ದ್ವೇಷ ಪ್ರತಿಕಾರಕ್ಕೆ ಹೆಣಗಳು ಉರುಳುತ್ತವೆ.ಚುನಾವಣೆ ಸಂದರ್ಭದಲ್ಲಿ ಕೊಲೆಗಳಾಗುವ ಸಾಧ್ಯತೆಗಳ ಬಗ್ಗೆ ಮಲೆನಾಡು ಟುಡೆ ಗ್ರೌಂಡ್ ರಿಪೋರ್ಟ್ ಮಾಡಿತ್ತು.
ಶಿವಮೊಗ್ಗದಲ್ಲಿ ನೆಲಕ್ಕುರುಳುವ ಜೀವಗಳಿಗೆಗೆ ಜಾತಿ ಧರ್ಮದ ಲೆಕ್ಕವಿಲ್ಲ. ಕತ್ತಿಯಂಚಿಗೆ ರಕ್ತದ ಕಮಟು ವಾಸನೆ ತಾಕಿದ್ರೆ ಸಾಕು. ಹೆಣಗಳು ಬೀಳುತ್ತವೆ. 08-05-2024 ರ ಸಂಜೆ 5.30 ರಿಂದ 6 ಗಂಟೆ ಸುಮಾರಿಗೆ ಲಷ್ಕರ್ ಮೊಹಲ್ಲದ ಮೀನು ಮಾರುಕಟ್ಟೆ ಸರ್ಕಲ್ ಬಳಿ ಇಬ್ಬರು ರೌಡಿ ಶೀಟರ್ ಗಳ ಕೊಲೆಯಾಗುತ್ತದೆ. ಮತ್ತೋರ್ವನಿಗೆ ಚಾಕು ಇರಿದ ಪರಿಣಾಮ ಆತ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದಾನೆ
ಈ ಕೊಲೆಯಾಗುವ ಮೂರು ದಿನದ ಹಿಂದಷ್ಟೆ..ಇದೇ ಇಬ್ಬರು ರೌಡಿಗಳ ನಡುವೆ ಕೆ.ಆರ್ ಪುರಂ ರಸ್ತೆಯಲ್ಲಿ ಗಲಾಟೆಯಾಗಿದ್ದನ್ನು ಸಾರ್ವಜನಿಕರು ನೋಡಿದ್ದಾರೆ. ನೆನ್ನೆಯ ಘಟನೆ ಹೇಗಾಯ್ತು ಎಂದು ಕೆ.ಆರ್ ಪುರಂ ನಿಂದ ಲಷ್ಕರ್ ಮೊಹಲ್ಲಾದವರಿಗೆ ನಡೆಸಿದ ತನಿಖಾ ವರದಿಗಾರಿಕೆಯಲ್ಲಿ ಪೊಲೀಸರ ಸಾಕಷ್ಟು ಲೋಪವಾಗಿರುವುದು ಕಂಡು ಬಂದಿದೆ.
ಆದಿಲ್ ವರ್ಸಸ್ ಯಾಸಿನ್ ಖುರೇಷಿ
ಆದಿಲ್ ಸುಂದರ ಆಶ್ರಯ ಜೀವನ್ ಮರ್ಡರ್ ಕೇಸಿನ ಪ್ರಮುಖ ಆರೋಪಿಯಾಗಿದ್ದ.. ಯಾಸಿನ್ ಖುರೇಷಿ ಕೂಡ ರೌಡಿ ಶೀಟರ್.. ಇವರಿಬ್ಬರ ನಡುವೆ ಅದ್ಯಾವ ಕೌಟುಂಬಿಕ ವಿಷಯ ತಗಾದೆ ತೆಗೆದಿದೆಯೋ ಗೊತ್ತಿಲ್ಲ..ಲೋಕಸಭೆ ಚುನಾವಣೆ ಹಿಂದಿನ ದಿನ ಮದ್ಯಾಹ್ನ ಆದಿಲ್ ಮತ್ತು ಸಹಚರರು ಯಾಸಿನ್ ಖುರೇಷಿ ಹಾಗು ಮತ್ತೋರ್ವನನ್ನು ಕೆ.ಆರ್ ಪುರಂ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದೆ. ಕೆ.ಆರ್ ಪುರಂ ನಿಂದ ಜೀವ ಉಳಿಸಿಕೊಂಡು ಲಷ್ಕರ್ ಮೊಹಲ್ಲಾಗೆ ಬಂದಿದ್ದ ಯಾಸಿನ್ ಜೀವಭಯದಿಂದ ತತ್ತರಿಸಿ ಹೋಗಿದ್ದ. ಈ ಘಟನೆಯಾದಾಗಲೇ ಪೊಲೀಸರು ಎಚ್ಚೆತ್ತುಕೊಂಡು, ಇಬ್ಬರನ್ನು ಕರೆಸಿ ಎಚ್ಚರಿಕೆ ನೀಡಿದ್ರೆ. ಇಲ್ಲ ಅಂದ್ರೆ ಕೇಸ್ ಹಾಕಿದ್ರೆ. ಮುಂದೆ ನಡೆಯಬಹುದಾಗಿದ್ದ ಕೊಲೆಯನ್ನು ತಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಮಲೆನಾಡು ಟುಡೆಗೆ ಹೇಳಿದ್ದಾರೆ. ಕೆ.ಆರ್ ಪುರಂ ನಲ್ಲಿ ಆದಿಲ್ ಹಾಗು ಸಹಚರರು ಯಾಸಿನನ್ನು ಓಡಾಡಿಸಿಕೊಂಡು ಹಲ್ಲೆ ಮಾಡಿದ್ದನ್ನ ಕೆಲವರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜನತಾ ಮಟಲ್ ಸ್ಟಾಲ್ ಪೆಪ್ಸಿ ಚಿಪ್ಸು ತಿಂತಿದ್ದ ಯಾಸಿನ್
ಶಿವಮೊಗ್ಗದಲ್ಲಿ ರೌಡಿಸಂ ಆಕ್ಟಿವ್ ಆಗಿದೆ. ಕೆಲವರು ಮುಸ್ಲಿಂ ಅಂಡರ್ ವರ್ಲ್ಡ್ ನ್ನು ರೂಲ್ ಮಾಡಬೇಕೆದು ಆ ಸಮುದಾಯದವರನ್ನೇ ಟಾರ್ಗೇಟ್ ಮಾಡಿಕೊಂಡು ವ್ಯಾಪಾರಸ್ಥರಿಂದ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಕೆಲವರು ಗಾಂಜಾ ದಂಧೆಯ ಮೇಲೆ ನಿಯಂತ್ರಣ ಸಾಧಿಸೋಕೆ ಹೋಗಿ ಕೊಲೆಯಾಗಿದ್ದಾರೆ. ಈ ಕೊಲೆಗಳು ಪ್ರತಿಕಾರದ ಭಾಗವಾಗಿ ಮತ್ತೆ ಕೊಲೆಗಳಾಗುತ್ತಿವೆ. ಪ್ರತಿ ರೌಡಿಗಳ ಮೇಲೆ ಷ್ಯಾಡೋ ಪೋಲಿಸಿಂಗ್ ಮಾಡಬೇಕಾದ ಪೊಲೀಸರು ಮೌನಕ್ಕೆ ಶರಣಾದಂತಿದೆ. ಚುನಾವಣೆಯ ಹಿಂದಿನ ದಿನ ಆರ್ ಪುರಂ ನಲ್ಲಿ ಚುನಾವಣೆ ನಡೆದ ಸಂಜೆ ಲಷ್ಕರ್ ಮೊಹಲ್ಲದ ಯಲ್ಲಮ್ಮನ ದೇವಸ್ಥಾನದ ಬಳಿ ಮಚ್ಚುಗಳೊಂದಿಗೆ ಜಮಾಯಿದ್ದ ರೌಡಿಗಳನ್ನು ಪೊಲೀಸರು ಚದುರಿಸಿದ್ದು ಬಿಟ್ರೆ ಅವರನ್ನ ಯಾಕೆ ರೌಡಿ ನಿಗ್ರಹ ದಳ ಅರೆಸ್ಟ್ ಮಾಡಲಿಲ್ಲ.