ಗೀತಾ ಪರವಾಗಿ ಟ್ರ್ಯಾಕ್ಟರ್‌ ಚಾಲೆಂಜ್‌ | ಬಿವೈ ರಾಘವೇಂದ್ರ ಸಹ ಹಾಕಿದ್ರು ಸವಾಲ್‌ ?| ಏನಿದು?

Tractor Challenge on behalf of Geetha Sivarajkumar BY Raghavendra also challenged ‌

ಗೀತಾ ಪರವಾಗಿ ಟ್ರ್ಯಾಕ್ಟರ್‌ ಚಾಲೆಂಜ್‌ |  ಬಿವೈ ರಾಘವೇಂದ್ರ ಸಹ  ಹಾಕಿದ್ರು ಸವಾಲ್‌ ?|  ಏನಿದು?
Tractor Challenge,Geetha Sivarajkumar ,BY Raghavendra ,

SHIVAMOGGA | MALENADUTODAY NEWS | May 14, 2024  ಮಲೆನಾಡು ಟುಡೆ

ಶಿಕಾರಿಪುರ : ಗೀತಾ ಶಿವರಾಜ್‌ ಕುಮಾರ್‌ ಪರವಾಗಿ ಟ್ರ್ಯಾಕ್ಟರ್‌ ಚಾಲೆಂಜ್‌  ಹಾಕಿದ ರೈತರೊಬ್ಬರ ವಿಡಿಯೋವೊಂದಕ್ಕೆ ಬಿವೈ ರಾಘವೇಂದ್ರರವರು ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮಾತನಾಡಿರುವ ಅವರು ಎಲೆಕ್ಷನ್‌ ರಿಸಲ್ಟ್‌ ಬಗ್ಗೆ ಪ್ರತಿಪಕ್ಷದ ಕಾರ್ಯಕರ್ತರೊಬ್ಬರು ಟ್ರ್ಯಾಕ್ಟರ್ ಬೆಟ್ಟಿಂಗ್ ಕಟ್ಟುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಹೊಸ ಟ್ರ್ಯಾಕ್ಟರ್‌ನ್ನ ಪಣವಾಗಿ ಕಟ್ಟುವ ಮೂಲಕ ಸವಾಲು ಹಾಕೋಣ ಎಂದಿದ್ದಾರೆ. 

ನೈರುತ್ಯ ಪದವೀಧರ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಪ್ರತಿಪಕ್ಷದ ಕಾರ್ಯಕರ್ತನ ಸವಾಲನ್ನು ಸ್ವೀಕರಿಸಿ ಎಂದು ಅಹಂಕಾರದಿಂದ ಹೇಳುತ್ತಿಲ್ಲ ಬದಲಾಗಿ ಕ್ಷೇತ್ರದ ಅಭಿವೃದ್ಧಿಗೆ ಏನೂ ಕೊಡುಗೆ ನೀಡದವರೆ ಸವಾಲು ಹಾಕುವುದಾದರೆ, ಮತದಾರರ ನಾಡಿಮಿಡಿತ ಗೊತ್ತಿರುವ ನಾವು ಸುಮ್ಮನಿರಬೇಕೆ ಎಂದಿದ್ದಾರೆ. 

ಸವಾಲು ಹಾಕಿರುವ ಊರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಅಲ್ಲಿನ ಯೋಗಕ್ಷೇಮವನ್ನು ವಿಚಾರಿಸುತ್ತಾ ಪ್ರತಿಯೊಂದಕ್ಕೂ ನಮ್ಮ ಪಕ್ಷದ ಕಾರ್ಯಕರ್ತರು ಸ್ಪಂದಿಸಿದ್ದಾರೆ. ಹೀಗಿರುವಾಗ ದರ್ಪದ ಮಾತು ಆಡಿದ್ದನ್ನ ಕೇಳಿಸಿಕೊಂಡು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದ್ದಾರೆ. 

ಚುನಾವಣಾ ಸಂದರ್ಭದಲ್ಲಿ ಜನರ ಮನಸ್ಥಿತಿ ಅರ್ಥವಾಗುತ್ತಿಲ್ಲ ಎಂದ ಅವರು ಬಿಜೆಪಿಯವರು ಎಷ್ಟು ಕೊಟ್ರು, ಕಾಂಗ್ರೆಸ್‌ ನವರು ಎಷ್ಟು ಕೊಟ್ರು ಎಂಬ ವಿಚಾರ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದರು.