ಕೆಎಸ್‌ ಈಶ್ವರಪ್ಪರ ಆಶೀರ್ವಾದ | ಮೋದಿ ಫೋಟೋ | ಬಿವೈಆರ್‌ ಹೇಳಿದ್ದೇನು? | ಲಾಸ್ಟ್‌ ಮಾತು

Blessings of KS Eshwarappa Modi photo What did BYR say? | Last word. BY Raghavendra, KS Eshwarappa, Congress Candidate, Election News,

ಕೆಎಸ್‌ ಈಶ್ವರಪ್ಪರ ಆಶೀರ್ವಾದ | ಮೋದಿ ಫೋಟೋ | ಬಿವೈಆರ್‌ ಹೇಳಿದ್ದೇನು? | ಲಾಸ್ಟ್‌ ಮಾತು
BY Raghavendra, KS Eshwarappa, Congress Candidate, Election News,

SHIVAMOGGA | MALENADUTODAY NEWS | May 5, 2024  

ಶಿವಮೊಗ್ಗ ಲೋಕಸಭಾ ಚುನಾಚಣಾ ಪ್ರಚಾರ ಅಂತಿಮಘಟ್ಟಕ್ಕೆ ಬಂದು ತಲುಪಿದೆ. ಈ ನಡುವೆ ಅಭ್ಯರ್ಥಿಗಳು ತಮ್ಮ ಕೊನೆಯ ಸ್ಟೇಟ್ಮೆಂಟ್‌ ಕೊಟ್ಟು ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಮಾದ್ಯಮಕ್ಕೆ ತಮ್ಮ ಸಂದರ್ಶನ ನೀಡಿರುವ ಬಿ.ವೈ ರಾಘವೇಂದ್ರ ಕೆಎಸ್‌ ಈಶ್ವರಪ್ಪನವರ ಸ್ಪರ್ಧೆಯಿಂದ ಏನೂ ಆಗುವುದಿಲ್ಲ ಎಂದಿದ್ದಾರೆ. ಅವರ ಮಾತುಗಳನ್ನ ಗಮನಿಸುವುದಾದರೆ. 

ಕಳೆದ ಮೂರು ಚುನಾವಣೆಗಳಲ್ಲಿ ಈಶ್ವರಪ್ಪನವರ ಆಶೀರ್ವಾದ ನನಗೆ ಸಿಕ್ಕಿತ್ತು. ಈ ವರ್ಷ ಸಿಕ್ಕಿಲ್ಲ ಎನ್ನುವುದಕ್ಕೆ ಬೇಸರ ಇದೆ. ಆದರೆ ಅವರ ಸ್ಪರ್ಧೆ  ಫಲಿತಾಂಶದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದಿದ್ದಾರೆ. ಅಲ್ಲದೆ  ನಾನು ಮತ್ತು ವಿಜಯೇಂದ್ರ ವಿದ್ಯಾಭ್ಯಾಸ ಮಾಡಿದ್ದು ಆರೆಸ್ಸೆಸ್ ಶಾಲೆಯಲ್ಲಿಯೇ ಎಂದಿರುವ ಬಿವೈಆರ್‌ ತಮ್ಮ ಗೆಲವಿನ ಅಂತರವನ್ನು ಮೂರು ಲಕ್ಷಕ್ಕೆ ಏರಿಸಬೇಕು ಎಂದು ಹೇಳಿ ಹಾರೈಸಿದ್ದ ಈಶ್ವರಪ್ಪನವರ ಮಾತು ಏಕೆ ಬದಲಾಯ್ತು ಪ್ರಶ್ನಿಸಿದ್ದಾರೆ. 

ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನೆ ಮಾಡುತ್ತಿರುವವರು ತಮ್ಮ ಮಗನಿಗೆ ಟಿಕೆಟ್‌ ಕೇಳಿದ್ದು ಅಲ್ಲವೇ ಎಂದ ರಾಘವೇಂದ್ರರವರ ಬಿಜೆಪಿಗೆ ಮತ ಹಾಕುವವರು ಬಿಜೆಪಿ ಅಭ್ಯರ್ಥಿಗೆ ಹಾಕುತ್ತಾರೆ. ಮೋದಿ ಫೋಟೋವನ್ನು ಬೇರೆಯವರು ಹಾಕಿಕೊಂಡರೇ ಅವರಿಗೆ ಪ್ರಯೋಜನವಾಗಲ್ಲ ಎಂದರು.