ಮಂಡಗದ್ದೆಯಲ್ಲಿ ಊಟ ಮುಗಿಸಿ ಶಿವಮೊಗ್ಗಕ್ಕೆ ಬರುವಾಗ ಅಡ್ಡ ಬಂದ ನಾಯಿ | ಉರುಳಿ ಬಿದ್ದ ಕಾರು | ಯುವಕ ಸಾವು, ಐವರಿಗೆ ಗಾಯ
One person was killed when car overturned while he was on his way to Shivamogga after having lunch at Mandagadade
![ಮಂಡಗದ್ದೆಯಲ್ಲಿ ಊಟ ಮುಗಿಸಿ ಶಿವಮೊಗ್ಗಕ್ಕೆ ಬರುವಾಗ ಅಡ್ಡ ಬಂದ ನಾಯಿ | ಉರುಳಿ ಬಿದ್ದ ಕಾರು | ಯುವಕ ಸಾವು, ಐವರಿಗೆ ಗಾಯ](https://malenadutoday.com/uploads/images/202304/image_750x_642ce5f5d1420.jpg)
SHIVAMOGGA | MALENADUTODAY NEWS | May 20, 2024 ಮಲೆನಾಡು ಟುಡೆ
ಶಿವಮೊಗ್ಗದ ಗಾಜನೂರು ಸಮೀಪ ನಿನ್ನೆ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಕಾರೊಂದು ಉರುಳಿ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.
ಭಾನುವಾರ ರಾತ್ರಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದು, ಆ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.ಮೃತರನ್ನ 22 ವರ್ಷದ ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಮಂಡಗದ್ದೆಗೆ ಎರಡು ವಾಹನಗಳಲ್ಲಿ ತೆರಳಿದ್ದ ಸ್ನೇಹಿತರು ವಾಪಸ್ ಬರುವಾಗ ಈ ಘಟನೆ ಸಂಭವಿಸಿದೆ. ತಮ್ಮ ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ಎದುರಿಗೆ ನಾಯಿಯೊಂದು ಅಡ್ಡ ಬಂದಿದೆ. ಈ ವೇಳೆ ಕಾರು ನಾಯಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಡ್ರೈವರ್ ಕಾರನ್ನ ಇನ್ನೊಂದು ಬದಿಗೆ ಎಳೆದಿದ್ದಾರೆ. ಅಷ್ಟೊತ್ತಿಗೆ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಉರುಳಿ ಬಿದ್ದಿದೆ. ಇನ್ನೂ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.