ಹಣದ ವಿಚಾರಕ್ಕೆ ಗಂಡನಿಂದ ದೊಣ್ಣೆಪೆಟ್ಟು! ಚಿಕಿತ್ಸೆಯಲ್ಲಿದ್ದ ಪತ್ನಿ ಸಾವು!

shivamogga Mar 15, 2024 Soraba taluk ಗಂಡ ಹೆಂಡತಿಯ ನಡುವೆ ಜಗಳ ನಡೆದು ಪತಿಯು ಹಲ್ಲೆ ಮಾಡಿದ ಪರಿಣಾಮ ಪತ್ನಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಸಂಭವಿಸಿದೆ. 

ಹಣದ ವಿಚಾರಕ್ಕೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ಮಳಲಿಕೊಪ್ಪದಲ್ಲಿ ಈ  ಘಟನೆ ಸಂಭವಿಸಿದ್ದು, ಚಂದ್ರನಾಯಕ್ ಹಾಗೂ ಕವಿತಾ, ಬಾಯಿ ದಂಪತಿ ನಡುವೆ ಮಾರ್ಚ್ 9 ರಂದು ಹಣದ ವಿಚಾರಕ್ಕೆ ಗಲಾಟೆಯಾಗಿತ್ತು. ಈ ವೇಳೆ  ಚಂದ್ರನಾಯಕ್ ಪತ್ನಿ ಕವಿತಾ ಬಾಯಿ  ಕುತ್ತಿಗೆಗೆ ದೊಣ್ಣೆಯಿಂದ ಹೊಡೆದಿದ್ದರು. ಪರಿಣಾಮ ಅವರ ಪತ್ನಿ  ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನ ಸ್ತಳೀಯ ಆಸ್ಪತ್ರೆಗೆ ಅಲ್ಲಿಂದ  ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಇವತ್ತು ಅವರು ಸಾವನ್ನಪ್ಪಿದ್ದಾರೆ.  ಘಟನೆ ಸಂಬಂಧ ಪತಿ ಚಂದ್ರನಾಯಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

Leave a Comment