ಹಳೆಯ ಕಿರಿಕ್‌ | ಶಿವಮೊಗ್ಗ ಬುದ್ದಾನಗರದಲ್ಲಿ ಯುವಕನಿಗೆ ಚಾಕುವಿನಿಂದ ಹಲ್ಲೆ | ದೊಡ್ಡಪೇಟೆಯಲ್ಲಿ ಕೇಸ್‌

Old kirik | A young man was attacked with a knife in Buddhanagar, Shimoga Case in Doddpete, Doddpete Police Station, FIR, Shimoga Crime News, Malenadu Report, Buddhanagar,

ಹಳೆಯ ಕಿರಿಕ್‌ | ಶಿವಮೊಗ್ಗ  ಬುದ್ದಾನಗರದಲ್ಲಿ ಯುವಕನಿಗೆ ಚಾಕುವಿನಿಂದ ಹಲ್ಲೆ  | ದೊಡ್ಡಪೇಟೆಯಲ್ಲಿ ಕೇಸ್‌
Doddpete Police Station, FIR, Shimoga Crime News, Malenadu Report, Buddhanagar,

SHIVAMOGGA | MALENADUTODAY NEWS | Apr 27, 2024      

ಶಿವಮೊಗ್ಗದ ಬುದ್ದಾನಗರದಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್‌ಐಆರ್‌ ಸಹ ದರ್ಜ್‌ ಆಗಿದೆ. 

ದಿನಾಂಕ:25/04/2024 ರ ಸಂಜೆ  ಈ ಘಟನೆ ನಡೆದಿದ್ದು, ಇದೀಗ ಕೇಸ್‌ ದಾಖಲಾಗಿದೆ. ಇಲ್ಲಿನ ಮೂರನೇ ಕ್ರಾಸ್‌ನಲ್ಲಿ ನಿಂತಿದ್ದ ಅಜಯ್‌ ಕುಮಾರ್‌ ಎಂಬಾತನಿಗೆ ಹಳೆಯ ವಿಚಾರದಲ್ಲಿ ಕಿರಿಕ್‌ ತೆಗೆದ ಲೋಹಿತ್‌ ಎಂಬಾತ ಜಗಳ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

ಅಲ್ಲದೆ ಹಳೆಯ ಗಲಾಟೆ ಸಂಬಂಧ ಅಜಯ್‌ ಕುಮಾರ್‌ನಿಗೆ ಕೈಯಿಂದ ಮೈಕೈಗೆ ಗುದ್ದಿ ಹಾಗೂ ಚಾಕುವಿನಿಂದ ತಲೆಗೆ ಎಡಕ್ಕೆ ಭುಜಕ್ಕೆ ಚುಚ್ಚಿ ರಕ್ತ ಗಾಯಪಡಿಸಿದ್ದಾನೆ ಎಂದು ಎಫ್‌ಐಆರ್‌ ನಲ್ಲಿದೆ. ಸ್ಥಳೀಯರು ಜಗಳಬಿಡಿಸಿದ್ದು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅಜಯ್‌ ಕುಮಾರ್‌ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಐಪಿಸಿ 323 ಮತ್ತು 324 ಅಡಿಯಲ್ಲಿ  ಉದ್ದೇಶ ಪೂರ್ವಕ ಹಲ್ಲೆ ಹಾಗೂ ಉದ್ದೇಶಪೂರ್ವಕವಾಗಿ ಮಾರಕಾಸ್ತ್ರದಿಂದ ಹಲ್ಲೆ ಆರೋಪದಡಿ ಕೇಸ್‌ ದಾಖಲಿಸಲಾಗಿದೆ.