SHIVAMOGGA | Jan 26, 2024 | ಇತ್ತೀಚೆಗೆ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆಯೊಬ್ಬಳು ಘೋಷಣೆ ಕೂಗಿದ ವಿಚಾರದಲ್ಲಿ ಸೋಶಿಯಲ್ ಮಿಡಿಯಾಲದಲ್ಲಿ ಅಪಪ್ರಚಾರದ ಪ್ರಚೋಧನಾತ್ಮಕ ಪೋಸ್ಟ್ಗಳು ಹರಿದಾಡುತ್ತಿವೆ ಎಂಬುದನ್ನ ಮಲೆನಾಡು ಟುಡೆ ವರದಿ ಮೂಲಕ ಎಚ್ಚರಿಸಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ ಇಂತಹ ಸಾಮಾಜಿಕ ಜಾಲತಾಣ ಗಳ ಪೋಸ್ಟ್ ಗಳ ಮೇಲೆ ಸೈಬರ್ ಕಣ್ಣನ್ನ ಇಟ್ಟಿದೆ. ಸಾಕ್ಷಿ ಎಂಬಂತೆ ಇನ್ಸ್ಟಾಗ್ರಾಮ್ Post ವೊಂದರ ಮೇಲೆ ಸೈಬರ್ ಕ್ರೈಂ ಆಕ್ಟ್ ಅಡಿಯಲ್ಲಿ ಕೇಸ್ ವೊಂದು ದಾಖಲಾಗಿದೆ.
ದೊಡ್ಡಪೇಟೆ ಪೊಲೀಸ್ ಸ್ಟೇಷನ್
ಶ್ರೀರಾಮಮಂದಿರ ಸಂಭ್ರಮೋತ್ಸವದ ನಡುವೆ ಮಹಿಳೆಯೊಬ್ಬರು ಘೋಷಣೆ ಕೂಗಿದ್ದರು. ಅದು ಆಕ್ಷೇಪಾರ್ಹವಾಗಿತ್ತು. ಆನಂತರ ಆ ಬಗ್ಗೆ ಪೊಲೀಸ್ ಇಲಾಖೆ ವಿಚಾರಣೆ ನಡೆಸಿ ಸ್ಪಷ್ಟನೆಯನ್ನು ಸಹ ನೀಡಿತ್ತು. ಇದರ ಬಳಿಕ ಮಹಿಳೆಯ ವಿಡಿಯೋ ವೈರಲ್ ಆಗಿತ್ತು ಹಾಗೆ ಟ್ರೋಲ್ಗೆ ಗುರಿಯಾಗಿತ್ತು. ಅದೇ ರೀತಿಯಲ್ಲಿ ಕಿಲಾಡಿ ಕೃಷ್ಣ ಎಂಬವರ ಇನ್ಸ್ಟಾ ಗ್ರಾಮ್ ಪೋಸ್ಟ್ನಲ್ಲಿ ವಿಡಿಯೋದಲ್ಲಿರುವ ವ್ಯಕ್ತಿಗಳಿಗೆ ಮಾತಿನ ಆಡಿಯೋ ನೀಡಿ ನಿಂದನಾತ್ಮಕವಾಗಿ ಎಡಿಟ್ ಮಾಡಲಾಗಿದೆ. ಉತ್ತರ ಕರ್ನಾಟಕ ಸ್ಟೈಲ್ನಲ್ಲಿ ಎಂಬ ಟೈಟಲ್ ಅಡಿಯಲ್ಲಿ ವಿಡಿಯೋವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.
ರೌಡಿ ನಿಗ್ರಹ ದಳ
ಶಿವಮೊಗ್ಗ ರೌಡಿ ನಿಗ್ರಹ ದಳದ ಸಿಬ್ಬಂದಿ ತಮ್ಮಣ್ಣ ಜಂಬರಗಿಯವರು ಸಹ ಮಹಿಳೆಯ ವಿಡಿಯೋದಲ್ಲಿ ಕಾಣಿಸಿದ್ದು, ಅವರಿಗೆ ಲಿಪ್ ಸಿಂಕಿಂಗ್ ಮಾಡಿ ವಲ್ಗರ್ ಭಾಷೆಯಲ್ಲಿ ಮಾತುಗಳನ್ನ ಅಳವಡಿಸಲಾಗಿದೆ ಎಡಿಟ್ ವಿಡಿಯೋದಲ್ಲಿ. ಅದೇ ಕಾರಣಕ್ಕೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಸಮಾಜದ ಶಾಂತಿಗೆ ಭಂಗ ತರುವಂತಹ ಉದ್ದೇಶದ ಕೃತ್ಯ ಇದೆಂದು ಆರೋಪಿಸಿ ಕೇಸ್ ದಾಖಲಿಸಲಾಗಿದೆ.
ಕೇವಲ ಲೈಕ್ಸು, ಕಾಮೆಂಟ್ಸ್, ಹಿಟ್ಸು, ಬೇಕು ಎನ್ನುತ್ತಾ ಸೋಶಿಯಲ್ ಮೀಡಿಯಾದಲ್ಲಿ ದುಡ್ಡಿನ ಜೊತೆಗೆ ಟೆಂಪವರಿ ಟ್ರೆಂಡ್ ಆಗುವ ಮನಸ್ಸುಗಳಿಗೆ ತಮ್ಮ ಪೋಸ್ಟ್ಗಳು ಯಾರನ್ನು ನಿಂದಿಸಬಾರದು ಎಂಬ ವಿಚಾರ ತಿಳಿದಿರಬೇಕು. ಇಲ್ಲವಾದರೆ ಸುಮ್ಮನೆ ತಮಾಷೆ ಎಂದು ಸಮಜಾಯಿಷಿ ಕೊಟ್ಟರೂ ಸಹ ಕಾನೂನು ಕೇಸ್ನ್ನು ಸೀರಿಯಸ್ ಆಗಿ ಹಾಕುತ್ತದೆ. ಇದಕ್ಕೆ ಇವತ್ತಿನ ಪ್ರಕರಣವೇ ಸಾಕ್ಷಿ
