ಸಾಗರ ತಾಲ್ಲೂಕು | ವಿವಿದೆಡೆ ಇವತ್ತು ಕರೆಂಟ್‌ ಇರಲ್ಲ | ಮೆಸ್ಕಾಂ ಪ್ರಕಟಣೆ

Sagar Taluk | There will be no electricity in many places today | Mescom Announcement

ಸಾಗರ ತಾಲ್ಲೂಕು | ವಿವಿದೆಡೆ ಇವತ್ತು ಕರೆಂಟ್‌ ಇರಲ್ಲ | ಮೆಸ್ಕಾಂ ಪ್ರಕಟಣೆ
Mescom Announcement

SHIVAMOGGA | MALENADUTODAY NEWS |  Apr 20, 2024   

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲುಕಿನ ವಿವಿದೆಡೆ ಇವತ್ತು ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ  ತಿಳಿಸಿದೆ. 



ಸಾಗರ ತಾಲೂಕು ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾಮಗಾರಿ ಇರುವುದರಿಂದ ಏ.20ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ. 

ನಗರ ವ್ಯಾಪ್ತಿಯ ಮಂಗಳಬೀಸು ಕೈಗಾರಿಕಾ ವಸಹಾತು ಪ್ರದೇಶ, ಆರ್.ಎಂ.ಸಿ.ರಸ್ತೆ, ಎಸ್.ಎನ್.ನಗರ, ಗ್ರಾಮೀಣ ಪ್ರದೇಶವಾದ ಮಾಲ್ವೆ, ಹೆಗ್ಗೋಡು, ಆವಿನಹಳ್ಳಿ, ವರದಹಳ್ಳಿ, ಭೀಮನಕೋಣೆ, ಯಡಜಿಗಳಮನೆ, ಕಲ್ಮನೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.