ಕಾಡಾನೆ ದಾಳಿ! ಆನೆ ನಿಗ್ರಹ ಪಡೆಯ ಸದಸ್ಯ ಸಾವು! ಇನ್ನಿಬ್ಬರಿಗೆ ಗಂಭೀರ ಗಾಯ!

A member of the anti-elephant squad was killed in a wild elephant attack at Sattiganahalli in Mudigere in Chikkamagaluru district

ಕಾಡಾನೆ ದಾಳಿ! ಆನೆ ನಿಗ್ರಹ ಪಡೆಯ ಸದಸ್ಯ ಸಾವು! ಇನ್ನಿಬ್ಬರಿಗೆ ಗಂಭೀರ ಗಾಯ!

SHIVAMOGGA NEWS / ONLINE / Malenadu today/ Nov 23, 2023 NEWS KANNADA

Chikkamagaluru |  Malnenadutoday.com | ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ಹಾವಳಿಗೆ ಇದೀಗ ಮೂರನೆ ವ್ಯಕ್ತಿ ಬಲಿಯಾಗಿದ್ದಾರೆ. ಇಲ್ಲಿನ ಮೂಡಿಗೆರೆ ತಾಲ್ಲೂಕು ಬೈರಾಪುರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಇಲ್ಲಿನ ಕಾರ್ತಿಕ್ ಗೌಡ ಎಂಬವರು ಮೃತಪಟ್ಟಿದ್ದಾರೆ. 

READ :10 ರ ಹರೆಯದ ಬಾಲಕಿ ಮೇಲೆ ವೃದ್ಧನ ಅತ್ಯಾಚಾರ! ಹೊಳೆಹೊನ್ನೂರು ಪೊಲೀಸರಿಂದ ಆರೋಪಿ ಅರೆಸ್ಟ್!

ಆನೆ ನಿಗ್ರಹ ಪಡೆಯ ಸದಸ್ಯನಾಗಿದ್ದ ಕಾರ್ತಿಕ್​ ಗೌಡ ಆನೆಯನ್ನ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೂಡಿಗೆರೆಯ ಗೌಡಹಳ್ಳಿಯ ನಿವಾಸಿಯಾಗಿರುವ ಇವರು ಆನೆಯನ್ನ ಓಡಿಸುತ್ತಿದ್ದ ವೇಳೆ ಇದ್ದಕ್ಕಿದ್ದ ಹಾಗೆ ಇವರಿರುವ ಜಾಗದ ಕಡೆಯೇ ಆನೆ ನುಗ್ಗಿದೆ. ಅಲ್ಲದೆ ಕಾಡಾನೆಯು ಇವರ ಮೇಲೆ ದಾಳಿ ನಡೆಸಿದೆ. 

26 ವರ್ಷ ಕಾರ್ತಿಕ್​ ಗೌಡರವರು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆಯಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಒಂದುವರೆ ತಿಂಗಳ ಹಿಂದೆ ಚಿನ್ನಿ ಎಂಬವರು ಹಾಗೂ 20 ದಿನಗಳ ಹಿಂದೆ ವೀಣಾ ಎಂಬವರು ಕಾಡಾನೆ ದಾಳಿಗೆ ಬಲಿಯಾಗಿದ್ದರು.