ಬ್ರಾಂತೇಶನಿಗೆ ಜೈಕಾರ | ಶಿಕಾರಿಪುರದ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿಗೆ ನಡೆದುಕೊಳ್ಳುವ ಬಿಎಸ್ವೈ ಕುಟುಂಬ |
jaikara for Branthesha | A BSY family worshiping the famous Sri HuchchaRayaswamy of Shikaripura
SHIVAMOGGA | MALENADUTODAY NEWS | Apr 23, 2024 | Sri HuchchaRayaswamy
ಇವತ್ತು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಪ್ರಸಿದ್ಧ ಆರಾಧ್ಯ ದೈವ ಹುಚ್ಚರಾಯಸ್ವಾಮಿಯ ರಥೋತ್ಸವ.
ಅದೆಷ್ಟೆ ರಾಜಕಾರಣವಿದ್ದರೂ ಸಹ ಬಿಎಸ್ವೈ ಮತ್ತವರ ಕುಟುಂಬ ಈ ರಥೋತ್ಸವದಲ್ಲಿ ಪಾಲ್ಗೊಂಡು ಹುಚ್ಚರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತದೆ. ಮೊದಲಿನಿಂದಲೂ ನಡೆದುಕೊಂಡು ಬಂದ ಪ್ರತೀತಿಯಂತೆ ಈ ಸಲವೂ ಬಿಎಸ್ವೈರವರ ಕುಟುಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದೆ.
ಚುನಾವಣೆ ಓಡಾಟದ ನಡುವೆಯು ರಾಜಕಾರಣಕವನ್ನು ಬದಿಗೊತ್ತಿ ಬಿಎಸ್ ಯಡಿಯೂರಪ್ಪರವರು ಹಾಗೂ ಅವರ ಕುಟುಂಬಸ್ಥರು ದೇವಾಲಯಕ್ಕೆ ಬೆಳಗ್ಗೆಯೇ ಬಂದು ಪೂಜೆ, ಪುನಸ್ಕಾರ ಸಲ್ಲಿಸಿದರು. ಇಡೀ ಕುಟುಂಬದವರು ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ನಡೆದುಕೊಳ್ಳುತ್ತದೆ. ಇನ್ನೂ ಬಿಎಸ್ವೈ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿಯೇ ತಮ್ಮ ರಾಜಕಾರಣದ ಪ್ರತಿ ಹೆಜ್ಜೆ ಹಾಗೂ ಹೋರಾಟಗಳನ್ನ ಆರಂಭಿಸಿದಿದೆ.
ಅದೇ ರಿವಾಜನ್ನ ಬಿಎಸ್ವೈ ತಮ್ಮ ಮಕ್ಕಳಿಗೂ ಸಹ ಕಲಿಸಿದ್ದಾರೆ. ಬಿವೈ ರಾಘವೇಂದ್ರ ಹಾಗೂ ಬಿವೈ ವಿಜಯೇಂದ್ರ ಕುಟುಂಬಸ್ಥರು ಸಹ ಹುಚ್ಚರಾಯಸ್ವಾಮಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇನ್ನೂ ಪ್ರತಿಸಲದ ಜಾತ್ರೆಯಲ್ಲಿ ಇಲ್ಲಿ ಬಿಎಸ್ವೈ ಕುಟುಂಬದ ಪಾಲ್ಗೊಳ್ಳುವಿಕೆ ವಿಶೇಷವಾಗಿರುತ್ತದೆ.