ನಟ ದರ್ಶನ್ ವಾಹನಕ್ಕೆ ತಾಗಿದ ಕರೆಂಟ್ ಲೈನ್ | ಆಮೇಲೆ ನಡೆದಿದ್ದೇನು?
Actor Darshan's vehicle hit by a current line | What happened after that?
SHIVAMOGGA | MALENADUTODAY NEWS | Apr 20, 2024
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಪ್ರಚಾರ ನಡೆಸ್ತಿದ್ದ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅಪಾಯವೊಂದರಿಂದ ಪಾರಾದ ಬಗ್ಗೆ ವರದಿಯಾಗಿದೆ.
ನಿನ್ನೆ ಶುಕ್ರವಾರ ನಟ ದರ್ಶನ್ ಪ್ರಚಾರ ನಡೆಸ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರು ತೆರಳುತ್ತಿದ್ದ ಪ್ರಚಾರ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿತ್ತು. ಇದರಿಂದ ಆತಂಕ ಮನೆ ಮಾಡಿತ್ತು. ಅದೃಷ್ಟಕ್ಕೆ ಲೈನ್ನಲ್ಲಿ ವಿದ್ಯುತ್ ಸರಬರಾಜು ಇರಲಿಲ್ಲ. ಹೀಗಾಗಿ ಅಲ್ಲಿದ್ದವರು ನಿಟ್ಟುಸಿರು ಬಿಟ್ಟರು.
ಅಗ್ರಹಾರಬಾಚಹಳ್ಳಿ ಯಲ್ಲಿ ಪ್ರಚಾರ ನಡೆಸುವ ವೇಳೆ ಮನೆಯೊಂದರ ಸಮೀಪ ನೇತಾಡುತ್ತಿದ್ದ ತಂತಿ ವಾಹನಕ್ಕೆ ತಾಗಿತ್ತು. ವಯರ್ ತಾಗುವುದನ್ನ ಗಮನಿಸಿದ ದರ್ಶನ್ ಹಾಗೂ ವಾಹನದಲ್ಲಿದ್ದವರು ಆತಂಕಗೊಂಡರು. ಅಲ್ಲದೆ ಭಯದಿಂದ ವಾಹನದಿಂದ ಕೆಳಕ್ಕೆ ಇಳಿದರು. ಬಳಿಕ ಕರೆಂಟ್ ಹರಿಯದಿರುವುದು ಕಂಡು ನಿರಾಳಗೊಂಡರು. ಆದರೆ ದರ್ಶನ್ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ತೆರಳಿದರು.