ಸಾಗರ | ರಸ್ತೆಯಲ್ಲಿ ನಡೆದುಹೋಗ್ತಿದ್ದ ವೃದ್ಧೆಯ ಬಳಿ ಅಡ್ರೆಸ್‌ ಕೇಳಿ ಮಾಂಗಲ್ಯ ಸರ ಕಿತ್ತ ಬೈಕ್‌ ಸವಾರರು

sagara taluk | Bikers snatch mangalya chain from elderly woman who was walking on the road

ಸಾಗರ |  ರಸ್ತೆಯಲ್ಲಿ ನಡೆದುಹೋಗ್ತಿದ್ದ ವೃದ್ಧೆಯ ಬಳಿ ಅಡ್ರೆಸ್‌ ಕೇಳಿ ಮಾಂಗಲ್ಯ ಸರ ಕಿತ್ತ ಬೈಕ್‌ ಸವಾರರು
mangalya chain

Shivamogga Apr 18, 2024 mangalya chain  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಸರಗಳ್ಳತನದ ಬಗ್ಗೆ ವರದಿಯಾಗಿದೆ. ಸಾಗರ ಪೇಟೆಯಲ್ಲಿ ವೃದ್ಧೆಯೊಬ್ಬರ ಮಾಂಗಲ್ಯ ಸರ ಅಪಹರಿಸಲಾಗಿದೆ. 

ನಗರದ ಅಣಲೆಕೊಪ್ಪ ಬಡಾವಣೆಯ ರಾಬಿಯಾ ಮಸೀದಿ ಬಳಿ ವೃದ್ಧೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬೈಕ್‌ನಲ್ಲಿ ಬಂದ ಅಪರಿಚಿತರು ಮಾಂಗಲ್ಯ ಸರವನ್ನು ಅಪಹರಿಸಿದ್ದಾರೆ. ಮೊದಲು ವಿಳಾಸ ಕೇಳಿದ ಆರೋಪಿಗಳು ಆನಂತರ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 

ಕಳ್ಳರು ಶಿರವಾಳ ಗ್ರಾಮದ ಕಡೆಯಿಂದ ಬೈಕ್‌ನಲ್ಲಿ ಬಂದಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳರಿಗೆ ವೃದ್ಧೆ ಪ್ರತಿರೋಧ ತೋರಿದ್ದರಿಂದ ಮಾಂಗಲ್ಯ ಸರ ಅರ್ಧ ಕಟ್‌ ಆಗಿ ಅದರ ಒಂದು ಭಾಗ ಕಳ್ಳರ ಪಾಲಾಗಿದೆ.   40 ಗ್ರಾಂ ತೂಕದ ಮಾಂಗಲ್ಯ ಸರದ ಪೈಕಿ 23 ಗ್ರಾಂ ಸರದ ತುಂಡನ್ನು ಕಳ್ಳರು ಎಗರಿಸಿದ್ದಾರೆ. ಈ ಸಂಬಂಧ  ಸಾಗರ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ