ಹೇಗಿತ್ತು ಪ್ರಧಾನಿ ನರೇಂದ್ರ ಮೋದಿ ಸಮಾವೇಶ! ಯಾರೆಲ್ಲಾ ಬಂದಿದ್ದರು? ಏನೆಲ್ಲಾ ನಡೆಯಿತು! ಇಲ್ಲಿದೆ ಫೋಟೋ ಸ್ಟೋರಿ! ಮಿಸ್‌ ಮಾಡಬೇಡಿ

How was Prime Minister Narendra Modi's rally? Who all came? What happened! Here's the photo story! Don't Miss | Prime Minister Narendra Modirally in shivamogga

ಹೇಗಿತ್ತು  ಪ್ರಧಾನಿ ನರೇಂದ್ರ ಮೋದಿ ಸಮಾವೇಶ! ಯಾರೆಲ್ಲಾ ಬಂದಿದ್ದರು? ಏನೆಲ್ಲಾ ನಡೆಯಿತು! ಇಲ್ಲಿದೆ ಫೋಟೋ ಸ್ಟೋರಿ! ಮಿಸ್‌ ಮಾಡಬೇಡಿ
Prime Minister Narendra Modirally in shivamogga

Shivamogga Mar 18, 2024 Prime Minister Narendra Modirally in shivamogga  ಶಿವಮೊಗ್ಗ ನಗರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ಹೇಗಿತ್ತು ಎನ್ನುವುದನ್ನ ನೋಡುವುದಾದರೆ, ಶಿವಮೊಗ್ಗದ ಅಲ್ಲಮಪ್ರಭು ಫ್ರೀಡಂಪಾರ್ಕ್‌ ಮೈದಾನದಲ್ಲಿ ಕಿಕ್ಕಿರಿದ ಜನಸ್ತೋಮದ ಮಧ್ಯೆ ಕಾರ್ಯಕ್ರಮ ನಡೆಯಿತು

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

 

ಇವತ್ತು ಮಧ್ಯಾಹ್ನ ಮೂರು ಗಂಟೆಯ ನಂತರ  ಇಂಡಿಯನ್‌ ಏರ್‌ ಫೋರ್ಸ್‌ ನ ವಿಶೇಷ ವಿಮಾನದಲ್ಲಿ ತೆಲಂಗಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನ ಎಸ್‌ಪಿಜಿ ವಿಶೇಷ ಭದ್ರತೆಯೊಂದಿಗೆ ಅಲ್ಲಮಪ್ರಭು ಫ್ರೀಡಂಪಾರ್ಕ್‌ ಮೈದಾನಕ್ಕೆ ಕರೆತಂದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

 

ಇನ್ನೂ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಅವರು, ಶಿವಮೊಗ್ಗದ ಜನತೆ ನನ್ನ ನಮಸ್ಕಾರಗಳು, ಮಾತೆ ಸಿಗಂದೂರು ಚೌಡಶ್ವೇರಿ ದೇವಿಗೆ ನನ್ನ ಭಕ್ತಿ ಪೂರ್ವ ನಮಸ್ಕಾರ ಎಂದು ಕನ್ನಡದಲ್ಲಿಯೇ ತಿಳಿಸಿದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ರಾಷ್ಟ್ರಕವಿ ಕುವೆಂಪುರರವರ ಸಾಲುಗಳನ್ನ ಬಳಸಿಕೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಾ, ಶಿವಮೊಗ್ಗ ಯಡಿಯೂರಪ್ಪನವರ ತಪೋಭೂಮಿ ಎಂದ ಪ್ರಧಾನಿ

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಹಿಂದೂ ಸಮಾಜದ ಶಕ್ತಿ ನಾರಿಶಕ್ತಿ ಅದೇ ನನ್ನ ಸುರಕ್ಷಾ ಕವಚ ಎಂದ ಪ್ರಧಾನಿ ನರೇಂದ್ರ ಮೋದಿ ನಾರಿಶಕ್ತಿಯನ್ನು ಅಳಿಸಲು ಸಾಧ್ಯವಿಲ್ಲ ಎಂದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಶಿವಮೊಗ್ಗಕ್ಕೆ ನಾನು ಗ್ಯಾರಂಟಿ ನೀಡಿಯಾಗಿದೆ. ಇನ್ನೂ ನೀವು ಗ್ಯಾರಂಟಿ ನೀಡಬೇಕು ಎಂದು ಮನವಿ ಮಾಡಿಕೊಂಡರು 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಸಮರ್ಥ ಭಾರತ ನಿರ್ಮಾಣ ಬಿಜೆಪಿಯ ಗುರಿ, ಆದರೆ ಕಾಂಗ್ರೆಸ್‌ ಬಳಿ ವಿಕಾಸದ ಅಜೆಂಡಾ ಇಲ್ಲ. ಹಾಗಾಗಿ ಅದು ಹಲವು ರೀತಿಯ ಆಮೀಷಗಳೊಂದಿಗೆ ಬರುತ್ತಿದೆ ಎಂದು ಟೀಕಿಸಿದರು ಮೋದಿ

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನೆರೆದವರ ಮುಂದೆ ಅಭಿವೃದ್ಧಿಯ ಪಟ್ಟಿಯನ್ನು ಮುಂದಿಟ್ಟ ಸಂಸದ ಬಿವೈ ರಾಘವೇಂದ್ರ 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

 

 ಕೆಎಸ್‌ ಈ‍ಶ್ವರಪ್ಪನವರ ಜೊತೆಗೆ ಸಂಧಾನಕ್ಕೆ ಬಂದು ಬೆನ್ನಲ್ಲೆ ಇವತ್ತು ಸಮಾವೇಶದಲ್ಲಿ ಪಾಲ್ಗೊಂಡರು ರಾಧಾ ಮೋಹನ್‌ ದಾಸ್‌ ಅಗರ್‌ ವಾಲ್‌ ಇವರು ಯೋಗಿ ಆಧಿತ್ಯನಾಥ್‌ಗೆ ತಮ್ಮ ಕ್ಷೇತ್ರ ಬಿಟ್ಟುಕೊಟ್ಟು ಪಕ್ಷದ ಆಂತರಿಕ ವಲಯದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಬಿಜೆಪಿ ಅಸಮಾಧಾನಿತರ ಗುಂಪಿನಲ್ಲಿದ್ದ ಸಿಟಿ ರವಿಯವರು ಸಮಾವೇಶದಲ್ಲಿ ಪಾಲ್ಗೊಂಡರು, ಭಾಷಣವನ್ನು ಮಾಡಿದರು, ಅಭಿವೃದ್ಧಿಯಷ್ಟೆ ಅಲ್ಲದೆ ಹಿಂದುತ್ವಕ್ಕಾಗಿ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದ್ರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಸಮಾರಂಭದಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಕುಮಾರ್‌ ಬಂಗಾರಪ್ಪರವರ ಎಂಟ್ರಿ! ಶಾರದಾ ಪೂರ್ಯನಾಯ್ಕ್‌ರವರ ಭಾಷಣದ ವೇಳೆ ಕುಮಾರ್‌ ಬಂಗಾರಪ್ಪರವರು ವೇದಿಕೆಗೆ ಆಗಮಿಸಿದರು. . 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಕಾಂಗ್ರೆಸ್‌ ಪಕ್ಷದಿಂದ ಕುಮಾರ್‌ ಬಂಗಾರಪ್ಪರವರ ಸಹೋದರಿ ಕಣಕ್ಕಿಳಿದಿದ್ದಾರೆ, ಅವರ ಇನ್ನೊಬ್ಬ ಸಹೋದರ ಶಿವಮೊಗ್ಗದ ಉಸ್ತುವಾರಿ ಸಚಿವರಾಗಿದ್ದಾರೆ. ಈ ನಡುವೆ ಕುಮಾರ್‌ ಬಂಗಾರಪ್ಪರವರ ಎಂಟ್ರಿ ಶಿವಮೊಗ್ಗದಲ್ಲಿ ಬಿಜೆಪಿ ಬಲಕ್ಕೆ ಇನ್ನಷ್ಟು ಬಲ ಸೇರಿಸಿದೆ. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

 

ಕುಮಾರ್‌ ಬಂಗಾರಪ್ಪನವರು ವೇದಿಕೆಗೆ ಬರುತ್ತಲೇ ಅವರನ್ನ ಸ್ವಾಗತಿಸಿದ ಬಿಎಸ್‌ ಯಡಿಯೂರಪ್ಪ, ವಿಜಯೇಂದ್ರ  

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಕುಮಾರ್‌ ಬಂಗಾರಪ್ಪರವರನ್ನು ತಬ್ಬಿಕೊಂಡು ಅವರ ಜೊತೆಗೆ ನೆರೆದವರ ಮುಂದ ಕೈ ಬೀಸಿದ ರಾಘವೇಂದ್ರ  

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಕುಮಾರ್‌ ಬಂಗಾರಪ್ಪರವರು ಬಂದರು ಆದರೆ ಕೆಎಸ್‌ ಈಶ್ವರಪ್ಪನವರು ಬರಲಿಲ್ಲ 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೂ ಮೊದಲು ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್‌ಎನ್‌ ಚನ್ನಬಸಪ್ಪರವರು ಹಿಂದುತ್ವದ ಪ್ರತಿಪ್ರಾಧನೆಗಾಗಿ ಮತ್ತೆ ಮೋದಿ ಸರ್ಕಾರ ಬರಬೇಕು ಎಂದರು

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ವಿಶೇಷ ವಿಮಾನದಲ್ಲಿ ಆಗಮನಿಸಿದ ಪ್ರಧಾನಿ ಮೋದಿಯವರನ್ನ ತೆರೆದ ವಾಹನದಲ್ಲಿ ಜನರ ನಡುವೆ ಕರೆತರಲಾಯ್ತು. ದೇಶದ ಪ್ರಧಾನಿಯನ್ನು ಹತ್ತಿರದಿಂದ ನೋಡಿದ ಜನರು ಖುಷಿಪಟ್ಟರು. ಇನ್ನೂ ಇದಕ್ಕಾಗಿ ಎಲ್‌ ಶೇಪ್‌ನಲ್ಲಿ ಜನಸ್ತೋಮದ ನಡುವೆ ರೂಟ್‌ ವೇ ನಿರ್ಮಿಸಲಾಗಿತ್ತು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

 

ಡ್ರೋನ್‌ ಕ್ಯಾಮರಾಗಳು, ಮಾಧ್ಯಮ ಕ್ಯಾಮರಾಗಳು, ಪಕ್ಷಗಳ ಆತಂರಿಕ ಮೀಡಿಯಾಗಳು ಪ್ರಧಾನಿ ಆಗಮನದ ಕ್ಷಣವನ್ನು ಸೆರೆಹಿಡಿದವು. ಎಸ್‌ಪಿಜಿ ಕಮಾಂಡ್ಯೋಗಳ ನಗದ ಮುಖದೊಂದಿಗೆ ಅವರ ಕಪ್ಪು ಕನ್ನಡಕ ಜನಸ್ತೋಮವನ್ನ ಸ್ಕ್ಯಾನ್‌ ಮಾಡುತ್ತಿತ್ತು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಜನರ ನಡುವೆ ಬಂದ ಪ್ರಧಾನಿಯವರ ಜೊತೆಗೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಹಾಗೂ ಸಂಸದ ರಾಘವೇಂದ್ರ ಕೈಮುಗಿದುಕೊಂಡು ಜನರನ್ನ ಮೋದಿಯವರನ್ನ ಸ್ವಾಗತಿಸಿದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗಪ್ರಧಾನಿ ನರೇಂದ್ರ ಮೋದಿಯವರನ್ನ ವೇದಿಕೆಗೆ ಕರೆತರಲೆಂದೇ ವಿಶೇಷ ವಾಹನವೊಂದನ್ನ ಹೂವುಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗಿತ್ತು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನರೇಂದ್ರ ಮೋದಿಯವರು ಜನರ ಬಳಿಯೇ ಬಂದರೂ ಅವರು ಸಾಗಿ ಬಂದ ಪಥದ ಎರಡು ಬದಿಗಳಲ್ಲಿ ಎರಡು ಲೈನ್‌ನಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಒಂದು ಬ್ಯಾರಿಕೇಡ್‌ನೊಳಗೆ ನಿಂತಿದ್ದ ಪೊಲೀಸರು ಇನ್ನೊಂದು ಬ್ಯಾರಿಕೇಡ್‌ಗಳಿಂದ ಜನರು ಹೊರಕ್ಕೆ ಬರದಂತೆ ಕಾವಲಿದ್ದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಮೋದಿಯವರಿದ್ದ ವಾಹನವನ್ನು ವಿಶೇಷ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿದ್ದ ವಾಹನವೂ ಅವರನ್ನ ಹಿಂಬಾಲಿಸಿತು. ಮೋದಿಯವರು ಭಾಷಣ ಮುಗಿಸಿ ಹೊರಟ ಬಳಿಕವಷ್ಟೆ ಜನರಿಗೆ ತೆರಳಲು ಅವಕಾಶ ನೀಡಲಾಗಿತ್ತು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ತಮ್ಮನ್ನ ಸ್ವಾಗತಿಸಿದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕೈಮುಗಿದು ವಂದಿಸಿದ್ದು ವಿಶೇಷವಾಗಿತ್ತು. . 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿಯವರನ್ನ ತಮ್ಮ ಮೊಬೈಲ್ ಕ್ಯಾಮರಾಗಳಿಗೆ ಸೆರೆ ಹಿಡಿಯಲು ಜನರು ಮುಗಿಬಿದ್ದ ದೃಶ್ಯವೇ ವಿಶೇಷವಾಗಿತ್ತು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಕೆಲವರು ಸೆಲ್ಫಿ ತೆಗೆದುಕೊಂಡರೇ, ಕೆಲವರು ದೃಶ್ಯವನ್ನು ವಿಡಿಯೋ ಮಾಡಿದರು. ಮತ್ತೆ ಕೆಲವರು ಮೊಬೈಲ್‌ಗಳನ್ನು ಹಿಡಿದು ಏನೂ ಮಾಡಲಾಗದೇ ಒದ್ದಾಡಿದರು. . 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಪ್ರಧಾನಿಯವರು ಜನರಿಗೆ ಕೈ ಬೀಸುತ್ತಾ ಮುಂದೆ ಸಾಗಿದರೇ ಅವರ ಹಿಂದೇ ವಿತ್‌ ವೆಪನ್‌ ಭದ್ರತಾ ಸಿಬ್ಬಂದಿ ಸಣ್ಣ ವ್ಯತ್ಯಾಸಕ್ಕೂ ಅವಕಾಶ ನೀಡದೆ ದಿಟ್ಟ ಕಣ್ಣಿನಿಂದ ನೋಡುತ್ತಿದ್ದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ವಿಶೇಷ ವಾಹನದಲ್ಲಿ ವೇದಿಕೆಯ ಹಿಂಭಾಗಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ವಿಶೇಷ ದ್ವಾರದ ಮೂಲಕ ವೇದಿಕೆಗೆ ಕೈ ಮುಗಿಯುತ್ತಾ ಬಂದರು

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕಾಗಿಯೇ ಟೆಲಿಫ್ರಾಂಪ್ಟರ್‌ ಒಳಗೊಂಡ ಡಯಾಜ್‌ ಸಿದ್ದಗೊಂಡಿತ್ತು. ಪ್ರಧಾನಿಯವರು ವೇದಿಕೆ ಮೇಲೆ ಬರುತ್ತಲೇ ಭದ್ರತಾ ಸಿಬ್ಬಂದಿ ಇಡೀ ವೇದಿಕೆಯ ಮೇಲೆ ಹದ್ದಿನ ಕಣ್ಣಿಟ್ಟು ಕಾವಲು ಕಾದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಜನರತ್ತ ಕೈ ಬೀಸುತ್ತಾ ಬಂದ ನರೇಂದ್ರ ಮೋದಿಯವರು ವೇದಿಕೆಯ ಮೇಲಿದ್ದ ಮುಖಂಡರ ಸ್ವಾಗತ ಸ್ವೀಕರಿಸಿದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಜನರಿಗೆ ಅಭಿವಂದನೆ ಮುಗಿದ ಬಳಿಕ ಆಸೀನರಾಗಲು ತೆರಳಿದ ನರೇಂದ್ರ ಮೋದಿ ಬಿಎಸ್‌ ಯಡಿಯೂರಪ್ಪನವರ ಕೈ ಹಿಡಿದು ಕುಶಲೋಪಚರಿ ವಿಚಾರಿಸಿದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನರೇಂದ್ರ ಮೋದಿಯವರು ತಮ್ಮನ್ನು ಮಾತನಾಡಿಸುತ್ತಲೇ ಸಂತಸಗೊಂಡ ಬಿಎಸ್‌ ಯಡಿಯೂರಪ್ಪ ಅವರನ್ನು ಕುಳಿತುಕೊಳ್ಳುವಂತೆ ತಿಳಿಸಿ ವಿಚಾರಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿಯವರನ್ನ ಮಾತನಾಡಿಸಿದ ನರೇಂದ್ರ ಮೋದಿಯವರು ಮಾತುಕತೆ ನಡೆಸಿದರು. 

 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನರೇಂದ್ರ ಮೋದಿ ಆಸೀನರಾದ ಬೆನ್ನಲ್ಲೆ ವೇದಿಕೆ ಮೇಲೆ ನಡೆಯುತ್ತಿದ್ದ ಚಟುವಟಿಕೆಯನ್ನ ಗಮನಿಸಿದ ಬಿಎಸ್‌ ಯಡಿಯೂಪ್ಪ ಹೆಚ್ಚು ಕಾಲಹರಣ ಮಾಡದೇ ಪ್ರಧಾನಿಯವರನ್ನ ಸ್ವಾಗತಿಸಲು ಡಯಾಜ್‌ ಬಳಿ ಹೋಗಲು ಸಿದ್ದರಾದರು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಕೃಷ್ಣನ ವಿಗ್ರಹವನ್ನು ನೀಡಿ ಗೌರವಿಸಲಾಯಿತು. 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಅತ್ತ ನರೇಂದ್ರ ಮೋದಿ ಇತ್ತ ಬಿಎಸ್‌ ಯಡಿಯೂರಪ್ಪ 

 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ 

ನರೇಂದ್ರ ಮೋದಿಯವರ ಕನ್ನಡ ಪ್ರೇಮದ ಬಗ್ಗೆ ತಿಳಿಸಿದ ಬಿಎಸ್‌ ಯಡಿಯೂರಪ್ಪನವರು

 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೋಟಾ ಶ್ರೀನಿವಾಸ್‌ ಪೂಜಾರಿಯವರು ಒಂದೇ ಪ್ರೇಮ್‌ನಲ್ಲಿ

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನರೇಂದ್ರ ಮೋದಿಯವರ ಭಾಷಣವನ್ನು ಕತೂಹಲದಿಂದ ಆಲಿಸುತ್ತಿದ್ದ ಜನಸ್ತೋಮ

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಬಿಎಸ್‌ ಯಡಿಯೂರಪ್ಪನವರ ಜೊತೆಯಲ್ಲಿ ಶಿವಮೊಗ್ಗ ಬಿಜೆಪಿಯ ನಾಯಕರು

 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಜನರನ್ನ ಉದ್ದೇಶಿಸಿ ಭಾಷಣ ಮಾಡಿದ ನರೇಂದ್ರ ಮೋದಿ ಈ ಭಾರೀ ನಾನ್ನೂರಕ್ಕೂ ಮೀರಿ ಎಂದು ಕನ್ನಡದಲ್ಲಿ ಘೋಷಣೆ ಕೂಗಿದರು

 

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನರೇಂದ್ರ ಮೋದಿಯವರನ್ನ ಬಿಳ್ಕೊಡುವ ಸಂದರ್ಭದಲ್ಲಿ ಬಿಜೆಪಿ ಮುಖಂಡರು

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ ಬಿಎಸ್‌ ಯಡಿಯೂರಪ್ಪನವರು

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಎಲ್ಲರಿಗೂ ವಂದಿಸಿ ತೆರಳಿದ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಡಾ ಮಂಜುನಾಥ್‌ರನ್ನ ಮಾತನಾಡಿಸಿ ಆಪ್ತವಾಗಿ ವಿಚಾರಿಸಿದ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ನೆರದ ಜನಸ್ತೋಮವನ್ನು ತಮ್ಮ ಮೊಬೈಲ್‌ ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿದ ಸಿಟಿ ರವಿ ಮತ್ತು ರುದ್ರೇಗೌಡರು

ನರೇಂದ್ರ ಮೋದಿ ಸಮಾವೇಶ ಶಿವಮೊಗ್ಗ

ಇತ್ತೀಚೆಗೆ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪಕ್ಷವೂ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸಿತ್ತು. ಇದೀಗ ಬಿಜೆಪಿ ನರೇಂದ್ರ ಮೋದಿಯವರ ಸಮಾವೇಶ ನಡೆಸಿದೆ. ಎರಡು ಸಹ ಒಂದೇ ಸ್ಥಳದಲ್ಲಿ ನಡೆದಿದ್ದು ವಿಶೇಷವಾಗಿತ್ತು.