ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಕೆರೆಗೆ ಕಾಲುಜಾರಿ ಬಿದ್ದು ಯುವಕ ದುರ್ಮರಣ!

Youth dies after falling into lake in Thirthahalli

ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಕೆರೆಗೆ ಕಾಲುಜಾರಿ ಬಿದ್ದು ಯುವಕ ದುರ್ಮರಣ!

SHIVAMOGGA  |  Dec 22, 2023  | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಯುವಕನೊಬ್ಬ ಕಾಲು ಜಾರಿಗೆ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. 

ಪಂಪ್​ ಸೆಟ್ ಹಾಕಲು ಕೆರೆ ಬಳಿಗೆ ತೆರಳಿದ್ದ ಯುವಕ ಮೋಟಾರ್​ಗೆ ನೀರು ಹಾಕಲು ಮುಂದಾಗಿದ್ದ. ಈ ವೇಳೆ ದುರ್ಘಟನೆ ಸಂಭವಿಸಿದೆ. ಮೃತನನ್ನ 19 ವರ್ಷದ ಪೃತ್ವಿನ್ ಎಂದು ಗುರುತಿಸಲಾಗಿದದು ಇಲ್ಲಿನ ಉಬ್ಬೂರು ಹತ್ತಿರ ಹಾರ್ಕೋಡದಲ್ಲಿ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. 

READ : ಶಿವಮೊಗ್ಗ ಭದ್ರಾವತಿ-ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ರೈಲಿಗೆ ಸಿಲುಕಿ ವೃದ್ಧ ಸಾವು!

ಪಂಪ್​ ಸೆಟ್ ಆನ್ ಮಾಡುವ ಸಲುವಾಗಿ ಕೆರೆ ಹತ್ತಿರ ತೆರಳಿದ್ದ ಯುವಕ ಅಲ್ಲಿ ಮೋಟಾರ್​ಗೆ ನೀರು ಹಾಕಲು ಕೆರೆಗೆ ಇಳಿದಿದ್ದಾನೆ. ಈ ವೇಳೆ ಕಾಲು ಜಾರಿ ಆತ ಸಾವನ್ನಪ್ಪಿದ್ದಾನೆ. ಇನ್ನೂ ಯುವಕನ ಸಾವು ಕುಟುಂಬಸ್ಥರದಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ.