ಶಿವಮೊಗ್ಗ ಬಾಪೂಜಿ ನಗರದಲ್ಲಿ ಯುವಕನಿಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಲೆ

Shimoga Bapujinagar incident

ಶಿವಮೊಗ್ಗ  ಬಾಪೂಜಿ ನಗರದಲ್ಲಿ ಯುವಕನಿಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಲೆ

ಶಿವಮೊಗ್ಗದ ಬಾಪೂಜಿನಗರದಲ್ಲಿ ವ್ಯಕ್ತಿಯೊಬ್ಬನನ್ನ ಕ್ರಿಕೆಟ್ ಬ್ಯಾಟು ಹಾಗೂ ಕ್ರಿಕೆಟ್ ಗಳಿಂದ ಹೊಡೆದು ಕೊಲೆ ಮಾಡಲಾಗಿದೆ

 ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ಗಂಗಮ್ಮ ದೇವಸ್ಥಾನ ಬಳಿಯಲ್ಲಿ ಈ ಘಟನೆ ಸಂಭವಿಸಿದೆ

ಇಂದು ಸಂಜೆ ಏಳರಿಂದ ಎಂಟು ಗಂಟೆ ಸುಮಾರಿಗೆ ಗಂಗಮ್ಮ ದೇವಸ್ಥಾನದ ಬಳಿಯಲ್ಲಿ ಹುಡುಗರ ಜೊತೆ ಮಾತನಾಡುತ್ತಾ ನಿಂತಿದ್ದ ಸುರೇಶ್ ಅಲಿಯಾಸ್ ಆರ್ ಏಕ್ಸ್  ಸೂರಿ ಎಂಬಾತನ ಮೇಲೆ ಅಪರಿಚರು ದಾಳಿ ನಡೆಸಿದ್ದಾರೆ.. ಬ್ಯಾಟ್ ಹಾಗು ವಿಕೆಟ್ ನಿಂದ ಹೊಡೆದು ಕೊಲೆ ಮಾಡಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ಇತ್ತೀಚೆಗಷ್ಟೇ ಸೂರಿ ಜೈಲಿನಿಂದ ರಿಲೀಸ್ ಆಗಿ ಬಂದಿದ್ದ ಎನ್ನಲಾಗಿದೆ ಇನ್ನು ಕೊಲೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ಪೊಲೀಸ್ ಕೋಟೆ ಸ್ಟೇಷನ್ ಪೋಲೀಸರು ತೆರಳಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ

ಘಟನೆಗೆ ಕೌಟುಂಬಿಕ ಹಿನ್ನೆಲೆ ಕಾರಣ ಎನ್ನಲಾಗುತ್ತಿದ್ದು ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ