ಮೆಕ್ಕೆಜೋಳದ ಕಳೆಗೆ ಬೆಂಕಿ : ವ್ಯಕ್ತಿ ಸಾವು! ಮಗನನ್ನ ಕರೆದುಕೊಂಡು ಅತಿಥಿ ಶಿಕ್ಷಕಿ ನಾಪತ್ತೆ!

Man dies after maize weed catches fire Guest teacher goes missing with son!

ಮೆಕ್ಕೆಜೋಳದ ಕಳೆಗೆ ಬೆಂಕಿ : ವ್ಯಕ್ತಿ ಸಾವು! ಮಗನನ್ನ ಕರೆದುಕೊಂಡು ಅತಿಥಿ ಶಿಕ್ಷಕಿ ನಾಪತ್ತೆ!
ಮೆಕ್ಕೆಜೋಳದ ಕಳೆಗೆ ಬೆಂಕಿ : ವ್ಯಕ್ತಿ ಸಾವು! ಮಗನನ್ನ ಕರೆದುಕೊಂಡು ಅತಿಥಿ ಶಿಕ್ಷಕಿ ನಾಪತ್ತೆ!

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಆನವಟ್ಟಿ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮೆಕ್ಕೆಜೋಳದ ಕಳೆಗೆ ಹಾಕಿದ್ದ ಬೆಂಕಿ, ಹೊಲದಲ್ಲಿಯೇ ಹಾಕಿದ್ದ ಜೋಪಡಿಗೆ ಹೊತ್ತಿಕೊಂಡಿದ್ದ ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇಲ್ಲಿನ ಆಯಾ ಗ್ರಾಮದಲ್ಲಿ ಮಲ್ಲಿಕಾರ್ಜುನ್​ ಎಂಬವರು ಮೃತಪಟ್ಟಿದ್ದಾರೆ. ಕಳೆಗೆ ಬೆಂಕಿ ಹಾಕಿದ್ದ ಅವರು, ಜೋಪಡಿಯಲ್ಲಿದ್ದ ಟೂಲ್ಸ್​ನ್ನ ತರಲು ಒಳಕ್ಕೆ ಹೋಗಿದ್ದಾರೆ.

ಗ್ರಾಮ ಪಂಚಾಯಿತಿ ಉಪಚುನಾವಣೆ! ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದ ಪ್ರಕಟಣೆಯಲ್ಲಿ ಏನಿದೆ! ವಿವರ ಓದಿ

ಈ ವೇಳೆ ಎಡವಿ ಅಲ್ಲಿಯೇ ಜೋಪಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ವೇಳೇ ಜೋಪಡಿಗೆ ಬೆಂಕಿ ತಗುಲಿ ಬಹುಪಾಲು ಸುಟ್ಟಗಾಯಗಳಾಗಿದ್ದವು. ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ಧಾರೆ. 

SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​

ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದ ಅತಿಥಿ ಶಿಕ್ಷಕಿಯೊಬ್ಬರು ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಗ್ರಾಮಾಂತರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರಿಗೆ ಅವರ  ಪತಿಯು ಅತಿಥಿಶಿಕ್ಷಕಿಯಾಗಿ ಕೆಲಸ ಮಾಡುವುದು ಬೇಡ ಎಂದು ಹೇಳಿದ್ದರಂತೆ. ಈ ಮಧ್ಯೆ ಶಾಲೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಮಗನೊಂದಿಗೆ ಆಕೆ ನಾಪತ್ತೆಯಾಗಿದ್ದಾರೆ. ಸದ್ಯ ಈ ಸಂಬಂಧ ಶಿವಮೊಗ್ಗದ ಸ್ಟೇಷನ್​ವೊಂದರಲ್ಲಿ ಕಂಪ್ಲೇಂಟ್ ದಾಖಲಾಗಿದೆ. 

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com