ಮೆಕ್ಕೆಜೋಳದ ಕಳೆಗೆ ಬೆಂಕಿ : ವ್ಯಕ್ತಿ ಸಾವು! ಮಗನನ್ನ ಕರೆದುಕೊಂಡು ಅತಿಥಿ ಶಿಕ್ಷಕಿ ನಾಪತ್ತೆ!
Man dies after maize weed catches fire Guest teacher goes missing with son!
![ಮೆಕ್ಕೆಜೋಳದ ಕಳೆಗೆ ಬೆಂಕಿ : ವ್ಯಕ್ತಿ ಸಾವು! ಮಗನನ್ನ ಕರೆದುಕೊಂಡು ಅತಿಥಿ ಶಿಕ್ಷಕಿ ನಾಪತ್ತೆ!](https://malenadutoday.com/uploads/images/202211/image_750x_6387424e40ebd.jpg)
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಆನವಟ್ಟಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೆಕ್ಕೆಜೋಳದ ಕಳೆಗೆ ಹಾಕಿದ್ದ ಬೆಂಕಿ, ಹೊಲದಲ್ಲಿಯೇ ಹಾಕಿದ್ದ ಜೋಪಡಿಗೆ ಹೊತ್ತಿಕೊಂಡಿದ್ದ ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇಲ್ಲಿನ ಆಯಾ ಗ್ರಾಮದಲ್ಲಿ ಮಲ್ಲಿಕಾರ್ಜುನ್ ಎಂಬವರು ಮೃತಪಟ್ಟಿದ್ದಾರೆ. ಕಳೆಗೆ ಬೆಂಕಿ ಹಾಕಿದ್ದ ಅವರು, ಜೋಪಡಿಯಲ್ಲಿದ್ದ ಟೂಲ್ಸ್ನ್ನ ತರಲು ಒಳಕ್ಕೆ ಹೋಗಿದ್ದಾರೆ.
ಗ್ರಾಮ ಪಂಚಾಯಿತಿ ಉಪಚುನಾವಣೆ! ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದ ಪ್ರಕಟಣೆಯಲ್ಲಿ ಏನಿದೆ! ವಿವರ ಓದಿ
ಈ ವೇಳೆ ಎಡವಿ ಅಲ್ಲಿಯೇ ಜೋಪಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ವೇಳೇ ಜೋಪಡಿಗೆ ಬೆಂಕಿ ತಗುಲಿ ಬಹುಪಾಲು ಸುಟ್ಟಗಾಯಗಳಾಗಿದ್ದವು. ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ಧಾರೆ.
SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್ ಕೇಸ್
ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದ ಅತಿಥಿ ಶಿಕ್ಷಕಿಯೊಬ್ಬರು ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಗ್ರಾಮಾಂತರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರಿಗೆ ಅವರ ಪತಿಯು ಅತಿಥಿಶಿಕ್ಷಕಿಯಾಗಿ ಕೆಲಸ ಮಾಡುವುದು ಬೇಡ ಎಂದು ಹೇಳಿದ್ದರಂತೆ. ಈ ಮಧ್ಯೆ ಶಾಲೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಮಗನೊಂದಿಗೆ ಆಕೆ ನಾಪತ್ತೆಯಾಗಿದ್ದಾರೆ. ಸದ್ಯ ಈ ಸಂಬಂಧ ಶಿವಮೊಗ್ಗದ ಸ್ಟೇಷನ್ವೊಂದರಲ್ಲಿ ಕಂಪ್ಲೇಂಟ್ ದಾಖಲಾಗಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com