ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?
Two men who went into the burrow hunting for porcupine, died there! After all, what happened at Mudigere in Chikkamagaluru district?
MALENADUTODAY.COM | SHIVAMOGGA | #KANNADANEWSWEB
ಚಿಕ್ಕಮಗಳೂರು : ಗುಹೆಯೊಳಗೆ ಸಿಲುಕಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆ ಸಂಬಂಧ ಬಾಳೂರು ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಗುಹೆಯೊಳಗೆ ಸಾವನ್ನಪ್ಪಲು ಹೇಗೆ ಸಾಧ್ಯ!?
ಮುಳ್ಳಂದಿ ಹಿಡಿಯಲು ಗುಹೆಯೊಳಗೆ (ಬಿಲ ಎನ್ನಬಹುದು) ತೆರಳಿದ್ದ ಇಬ್ಬರು, ಅಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ಮೂಲದ ಗೊವಿಂದರಾಜು (೩೦) ವಿಜಯ್ ಕುಮಾರ್ (೨೯) ಇಬ್ಬರು ಮುಳ್ಳುಹಂದಿಯನ್ನು ಹಿಡಿಯಲು ಕಾಡಿಗೆ ಹೋಗಿದ್ಧಾರೆ. ಇವರ ಜೊತೆಗೆ ಇನ್ನಿಬ್ಬರು ಸಹ ತೆರಳಿದ್ದರು, ಮುಳ್ಳುಹಂದಿಯ ಇರುವಿಕೆಯನ್ನು ಕಂಡು ಅದು ಅಡಗಿರುವ ಸ್ಥಳವೊಂದನ್ನ ಸುತ್ತುವರಿದಿದ್ದಾರೆ. ಅಲ್ಲದೆ ಅದಕ್ಕೆ ಹೊರಗಡೆಯಿಂದ ಬೆಂಕಿ ಕೊಟ್ಟು, ಹೊಗೆ ಬಿಲದೊಳಗೆ ಹೋಗುವಂತೆ ಮಾಡಿದ್ದಾರೆ. ನಂತರ ಇಬ್ಬರು ಅದರೊಳಗೆ ಇಳಿದಿದ್ದಾರೆ. ಈ ವೇಳೇ ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಕಾಫಿ ತೋಟಕ್ಕೆ ಕೆಲಸಕ್ಕೆ ಬಂದವರು ಶಿಕಾರಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಇನ್ನೂ ಇಬ್ಬರು ಅಲ್ಲಿಂದ ಬಂದು ವಿಷಯತಿಳಿಸಿದ್ದರಿಂದ ಎಲ್ಲರಿಗೂ ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಇಬ್ಬರ ಮೃತದೇಹವನ್ನು ಸಹ ಆಚೆ ತೆಗೆದಿದ್ದಾರೆ.
ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು!Two men who went into the burrow hunting for porcupine, incident happened at Mudigere in Chikkamagaluru district? #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ pic.twitter.com/hzo7zzSlPa
— malenadutoday.com (@CMalenadutoday) March 1, 2023
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #