ಎತ್ತಿನ ಗಾಡಿಯನ್ನ ಓಡಿಸ್ತಾ ಮೆರವಣಿಗೆಯಲ್ಲಿ ಸಾಗಿದ ಶಾಸಕ ಎಸ್​.ಎನ್​ ಚನ್ನಬಸಪ್ಪ | ಶಿವಮೊಗ್ಗ ದಸರಾ!

Raitha Dussehra was specially celebrated today in Shimoga Dussehra. ಶಿವಮೊಗ್ಗ ದಸರಾದಲ್ಲಿ ಇವತ್ತು ರೈತ ದಸರಾವನ್ನು ವಿಶೇಷವಾಗಿ ಆಚರಿಸಲಾಯ್ತು,

ಎತ್ತಿನ ಗಾಡಿಯನ್ನ ಓಡಿಸ್ತಾ ಮೆರವಣಿಗೆಯಲ್ಲಿ ಸಾಗಿದ ಶಾಸಕ ಎಸ್​.ಎನ್​ ಚನ್ನಬಸಪ್ಪ | ಶಿವಮೊಗ್ಗ ದಸರಾ!



KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’

 -

ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಶಿವಮೊಗ್ಗದಸರಾ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಇಂದು ರೈತ ದಸರಾ ಅಂಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸ್ಟೆನ್ಸ್‌ ಮೈದಾನದಲ್ಲಿ ರೈತ ಜಾಥಾಕ್ಕೆ ರೈತ ದಸರಾ ಸಮಿತಿ ಅಧ್ಯಕ್ಷ ಮೆಹಬ್‌ ಶರೀಫ್ ಚಾಲನೆ ನೀಡಿದ್ರು

ರೈತ ಮುಖಂಡರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಶೃಂಗಾರಗೊಂಡ ಟ್ರ್ಯಾಕ್ಟರ್, ಎತ್ತಿನಗಾಡಿಗಳು ಮರವಣಿಗೆಯ ಕೇಂದ್ರಬಿಂದುವಾಗಿದ್ದು, ಆಕರ್ಷಣೀಯವಾಗಿತ್ತು. ಎತ್ತಿನಗಾಡಿಗಳಲ್ಲಿ ರೈತ ನಾಯಕರಾದ ಹೆಚ್​ ಆರ್​ ಬಸವರಾಜಪ್ಪ, ಕೆ.ಟಿ. ಗಂಗಾಧರ್ ಸ್ವತಃ ಎತ್ತಿನ ಗಾಡಿಯನ್ನು ಚಲಾಯಿಸಿದರು.ಶಾಸಕ ಎಸ್.ಎನ್​. ಚನ್ನಬಸಪ್ಪ ಕೂಡ ಎತ್ತಿನಗಾಡಿಯಲ್ಲಿ  ಕುಳಿತಿದ್ದರು. ಆನಂತರ ಅವರು ಕೂಡ ಎತ್ತಿನ ಗಾಡಿ ಚಲಾಯಿಸಿ ಮೆರವಣಿಗೆಯಲ್ಲಿ ಸಾಗಿದ್ರು 

ಈ ಸಂದರ್ಭದಲ್ಲಿ ಮಾತನಾಡಿದ ರೈತ ದಸರಾ ಸಮಿತಿಯ ಮೇಹಖ್‌ ಶರೀಫ್, ರೈತರು ಮಳೆ ಇಲ್ಲದೆ ಸಂಕಟದಲ್ಲಿದ್ದಾರೆ. ಆದರೂ ಕೂಡ ದಸರಾ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಅವರ ಸಂಕಷ್ಟಗಳು ಬೇಗನ ದೂರವಾಗಬೇಕು. ರೈತರು ಸಂತೋಷವಾಗಿದ್ದಾಗ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಎಂದರು.

 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ