ಬಿಜೆಪಿಯವರಿಗ ದಮ್ಮು-ತಾಕತ್ತಿನ ಪ್ರಶ್ನೆ ! ಶಿವಮೊಗ್ಗದಲ್ಲಿ ಮಧು ಬಂಗಾರಪ್ಪರವರು ಹೇಳಿದ್ದೇನು?

What did Madhu Bangarappa say in Shivamogga? ಶಿವಮೊಗ್ಗದಲ್ಲಿ ಮಧು ಬಂಗಾರಪ್ಪರವರು ಹೇಳಿದ್ದೇನು?

ಬಿಜೆಪಿಯವರಿಗ ದಮ್ಮು-ತಾಕತ್ತಿನ ಪ್ರಶ್ನೆ ! ಶಿವಮೊಗ್ಗದಲ್ಲಿ  ಮಧು ಬಂಗಾರಪ್ಪರವರು ಹೇಳಿದ್ದೇನು?

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS 

ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಇವತ್ತು  ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಈ ವೇಳೆ ಮಾತನಾಡಿದ ಅವರು,  ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು  ಕೇವಲ  ಪ್ರಚಾರಕ್ಕೆ ಎಂದು ವ್ಯಂಗ್ಯವಾಡಿದ್ರು. ಮಣಿಪುರದಲ್ಲಿ ಅಷ್ಟೊಂದು ಇನ ಸಾಯಬೇಕಾದರೆ ಪ್ರಧಾನಿಯವರು ಅಲ್ಲಿಗೆ ಹೋಗಿಲ್ಲ, ರಾಕೆಟ್ ಬಿಟ್ಟ ತಕ್ಷಣ ಹೋಗ್ತಾರೆ, ಆದರೆ ಅದು ತಪ್ಪು ಅಂತ ಹೇಳೊಲ್ಲ. ಆದರೆ, ಅವರು ಮಣಿಪುರಕ್ಕೂ ಹೋಗಿದ್ದರೂ ಅಲ್ಲಿ ಪರಿಸ್ಥಿತಿ ಸಾವು ನೋಡು ಕಡಿಮೆಯಾಗುತ್ತಿತ್ತು. ಇಸ್ರೋ ಸಂಸ್ಥೆಗೆ ಭೇಟಿಕೊಟ್ಟಿದ್ದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ಪ್ರಧಾನಿಯವರು ಮಣಿಪುರಕ್ಕೆ ಹೋಗಲೇ ಬೇಕಿತ್ತು ಎಂದು ನಾನು ಹೇಳುತ್ತೇನೆ ಎಂದಿದ್ದಾರೆ. 

ಇನ್ನೂ ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ ಅವರು,  ಎನ್ ಇ ಪಿ ಮೂಲಕ‌ ಕೆಟ್ಟ ಆಲೋಚನೆ ಮಕ್ಕಳಲ್ಲಿ ತುಂಬಿಸ್ತಾರೆ ಎಂದ ಶಿಕ್ಷಣ ಸಚಿವ,  ಪ್ರತಿ ರಾಜ್ಯದ ಸಂಸ್ಕೃತಿ, ಸಂಪ್ರದಾಯ ಭಿನ್ನ, ಉತ್ತರದ ವಿಚಾರ ನಮ್ಮ ರಾಜ್ಯದಲ್ಲಿ ಸೇರಿಸುವುದು ಸರಿಯಲ್ಲ, ಹಿಂದಿ ಹೇರಿಕೆಗೆ ನಮ್ಮ ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿದೆ ಎಂದಿದ್ಧಾರೆ. 

ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ, ಎನ್​ಇಪಿಯನ್ನು ನಾವು ತರೋದಿಲ್ಲ ಎಂದು ಹೇಳಿದ್ದೇವೆ. ಈ ನಿಟ್ಟಿನಲ್ಲಿ ನಾವು ಎನ್​ಇಪಿಯನ್ನು ಅನುಷ್ಟಾನಕ್ಕೆ ತರುವುದಿಲ್ಲ ಎಂದಿದ್ದಾರೆ. ಅಲ್ಲದೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿಯೇ ಎನ್ಇಪಿ ಅನುಷ್ಟಾನವಾಗಿಲ್ಲ ಧಮ್ಮು ತಾಕತ್ತು ಎನ್ನುವ ಬಿಜೆಪಿಯವರು ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಸ್ಕೀಮ್ ಏಕೆ ಜಾರಿಗೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.  


ಕುಂದಾಪುರದಿಂದ ಬರುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ! ಭೀಕರ ಅಪಘಾತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ಮತ್ತೊಂದು ಅದಿರು ಲಾರಿ ಆಕ್ಸಿಡೆಂಟ್ ಆಗಿದೆ. ಈ ವಾರದಲ್ಲಿಯೇ ಸೂಡೂರು ಸಮೀಪ ಲಾರಿಯೊಂದು ರಸ್ತೆ ಪಕ್ಕ ಉರುಳಿಬಿದ್ದಿತ್ತು. 

ಇದರ ಬೆನ್ನಲ್ಲೆ  ಅದಿರು ಸಾಗಿಸುತ್ತಿದ್ದ ಲಾರಿಯೊದು ಮರಕ್ಕೆ ಡಿಕ್ಕಿ ಹೊಡೆದಿದೆ.  ಹೊಸನಗರ ತಾಲ್ಲೂಕಿನ  ಸಿಡಿಹಳ್ಳ ಸೇತುವೆ ಬಳಿಯಲ್ಲಿ ಘಟನೆ ಸಂಭವಿಸಿದೆ. ಕುಂದಾಪುರ ಕಡೆಯಿಂದ ಬರುತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಿಡಿಹಳ್ಳ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಗೆ ಕಾರಣವೇನು ಎಂದು ಸ್ಪಷ್ಟವಾಗಿಲ್ಲ ಇನ್ನೂ ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.   

ಕೊಪ್ಪಳಕ್ಕೆ ಹೋಗ್ತಿದ್ದ ಲಾರಿ ಶಿವಮೊಗ್ಗದಲ್ಲಿ ಪಲ್ಟಿ! ಚಂದ್ರಗುತ್ತಿ ದೇವಸ್ಥಾನದ ನೌಕರ ಆತ್ಮಹತ್ಯೆ! ಸ್ಕೂಲ್​ ಬಂದ್ ಮಾಡಿ ಪ್ರತಿಭಟನೆ! TODAY@NEWS


ಇನ್ನಷ್ಟು ಸುದ್ದಿಗಳು