ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಖಾಸಗಿ ಬಸ್​ ಧಗಧಗ! ಕಾರಣವೇನು?

ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಖಾಸಗಿ ಬಸ್​ ವೊಂದು ಅಗ್ನಿ ಆಕಸ್ಮಿಕದಿಂದ ಹೊತ್ತಿ ಉರಿದಿದೆ. Private bus catches fire on Shivamogga-Sagar road What is the reason?

ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಖಾಸಗಿ ಬಸ್​ ಧಗಧಗ! ಕಾರಣವೇನು?

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ  ಬಳಿ ಇರುವ ರೈಲ್ವೆ ಗೇಟ್ ಬಳಿ  ಕೆಟ್ಟು ನಿಂತಿದ್ದ ಬಸ್ ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದ್ದು, ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. 

ಏನಿದು ಘಟನೆ ?

ರಿಪೇರಿ ನಡೆಯುತ್ತಿದ್ದ ಖಾಸಗಿ ಸಂಸ್ಥೆಗೆ ಸೇರಿದ ಬಸ್ ನಲ್ಲಿ  ನಿನ್ನೆ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಬಸ್ ಹೊತ್ತಿ ಉರಿದಿದೆ..ರಸ್ತೆ ಬದಿಯಲ್ಲಿ ನಿಂತಿದ್ದ ಬಸ್ ನಲ್ಲಿ ಕಳೆದ ಎರಡು ದಿನಗಳಿಂದ ರಿಪೇರಿ ಕಾರ್ಯ ನಡೆಯುತ್ತಿತ್ತು. 

ಬಸ್ಸಿನಲ್ಲಿ ಚಾಲಕ,ನಿರ್ವಾಹಕರು ರಾತ್ರಿ ವೇಳೆ ಮಲಗಿ ರಿಪೇರಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಇವತ್ತು ಬೆಳಗಿನ ಜಾವ ಡ್ರೈವರ್ ಹಾಗು ಕಂಡಕ್ಟರ್  ಚಾ ಕುಡಿಯಲು ಹೋಗಿದ್ದಾಗ ಈ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಈ ಕುರಿತು ಆನಂದಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದ್ದು ಬಸ್  ಗಜಾನನ ಸಾರಿಗೆ ಸಂಸ್ಥೆಗೆ ಸೇರಿದ್ದು ಎಂದು ತಿಳಿದು ಬಂದಿದೆ ..


ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ನಡೆದಿದ್ದ ಕಿಡ್ನ್ಯಾಪ್​ ಕೇಸ್​ಗೆ ಟ್ವಿಸ್ಟ್! ಅಸಲಿಗೆ ಇಡೀ ದಿನ ನಡೆದಿದ್ದೇನು?

ಶಿವಮೊಗ್ಗ ನಗರದಲ್ಲಿ ನಿನ್ನೆ ಬಸ್​ಸ್ಟ್ಯಾಂಡ್ ಬಳಿಯಲ್ಲಿ ನಡೆಯಿತು ಎನ್ನಲಾದ ಕಿಡ್ನ್ಯಾಪ್​ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್​ ಸ್ಟೇಷನ್​ನಿಂದ ಆರಂಭವಾದ ಕೇಸ್ ಕೊಪ್ಪ ಪೊಲೀಸ್ ಸ್ಟೇಷನ್​ನಲ್ಲಿ ಅಂತ್ಯ ಕಂಡಿದೆ. 

ಏನಿದು ಕೇಸ್?

ನಿನ್ನೆ ಶಿವಮೊಗ್ಗದ ಬಸ್ ಸ್ಟ್ಯಾಂಡ್ ಬಳಿಯಿಂದ ಯುವತಿಯೊಬ್ಬಳನ್ನ ಅಪಹರಿಸಲಾಗಿದೆ ಎಂಬ ಮಾತು ಸಖತ್ ಸುದ್ದಿಯಾಗಿ ಹರಿದಾಡಿತ್ತು. ಪೊಲೀಸರಿಗಿಂತಲೂ ಬೇಗ ಜನರ ನಡುವೆ ಹರಿದಾಡಿದ Kidnap case ಸುದ್ದಿ ಕುತೂಹಲ ಮೂಡಿಸಿತ್ತು. ವಿಚಾರ ತಿಳಿದು ದೊಡ್ಡಪೇಟೆ ಪೊಲೀಸರು ಸಿಸಿ ಕ್ಯಾಮರಾಗಳನ್ನು ಚೆಕ್​ ಮಾಡಿ, ಅನುಮಾನಸ್ಪದವಾಗಿ ಕಂಡು ಬಂದ ಕಾರಿನ ಬೆನ್ನಟ್ಟಿ ಹೊರಟಿದ್ದರು. 

ಬಸ್​ಸ್ಟ್ಯಾಂಡ್ ಬಳಿ ನಡೆದಿದ್ದು?

ಹೀಗೊಂದು ಕಿಡ್ನ್ಯಾಪ್ ನಡೆಯುವಾಗ, ಯುವತಿಯ ತಾಯಿಯು ಅಲ್ಲಿಯೇ ಇದ್ದರು, ಯುವತಿ ಹಾಗೂ ಅವರ ತಾಯಿ ಯಾವುದೋ ಪೂಜೆಗೆಂದು ಪರಊರಿಗೆ ಹೊರಟಿದ್ದಾಗ, ಯುವತಿಯನ್ನ ಕಾರಿನಲ್ಲಿ ಅಪಹರಿಸಲಾಗಿತ್ತು. ಮತ್ತೆ ಕೆಲವರು ಇದು ಕಿಡ್ನ್ಯಾಪ್ ಕೇಸ್ ಇದ್ಧಾಗೆ ಇರಲಿಲ್ಲ. ಯುವತಿಯೇ ಕಾರನ್ನ ಹತ್ತಿ ಹೋದಾಗೆ ಇತ್ತು ಎಂದಿದ್ದರು. 

ದೊಡ್ಡಪೇಟೆಯಲ್ಲಿ ಆಗುತ್ತಿತ್ತು ಕೇಸ್?

ಈ ಮಧ್ಯೆ ಯುವತಿಯ ಪೋಷಕರು ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಕದ ತಟ್ಟಿದ್ದರು. ಆಷ್ಟೊತ್ತಿಗೆ ದೊಡ್ಡಪೇಟೆಯ ಚೇಸಿಂಗ್ ಟೀಂ ಅನುಮಾನಸ್ಪದ ಕಾರನ್ನ ಬೆನ್ನಟ್ಟಿಕೊಂಡು ಚಿಕ್ಕಮಗಳೂರು ಗಡಿ ದಾಟಿತ್ತು. ಅಲ್ಲದೆ ಶಂಕಿತ ಕಾರು ಕೊಪ್ಪ ಪೊಲೀಸ್ ಸ್ಟೇಷನ್​ ಕಚೇರಿಗೆ ತಲುಪಿತ್ತು. ಅಲ್ಲಿ ಅಸಲಿ ವಿಚಾರ ಬಹಿರಂಗವಾಗಿದೆ. 

ಕೊಪ್ಪ ಪೊಲೀಸ್ ಸ್ಟೇಷನ್​ ನಲ್ಲಿ?

ಅಸಲಿಗೆ ಗಾಜನೂರಿನ ಯುವಕ ಹಾಗೂ ಹೊಸಮನೆ ಯುವತಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಅಲ್ಲದೆ ರಿಜಿಸ್ಟರ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯು ಇದೆ. ಈ ಮಧ್ಯೆ ಯುವತಿ ಕುಟುಂಬಸ್ಥರು ಇದಕ್ಕೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಿನ್ನೆ ಈ ಕಿಡ್ನ್ಯಾಪ್ ಪ್ರಹಸನಕ್ಕೆ ಮುಂದಾಗಿದ್ದಾರೆ. ಅದು ದೊಡ್ಡ ವಿಷಯವಾಗುತ್ತಲೇ ಕೊಪ್ಪ ಸ್ಟೇಷನ್​ನಲ್ಲಿ ಎಲ್ಲವನ್ನು ಹೇಳಿಕೊಂಡು, ಪರಿಸ್ಥಿತಿಯನ್ನು ಸರಿಪಡಿಸಲು ಮುಂದಾಗಿದ್ಧಾರೆ. ಅಲ್ಲದೆ ಯುವತಿ ತಾನು ಆತನೊಂದಿಗೆ ಹೋಗುವುದಾಗಿ ಹೇಳಿದ್ದರಿಂದ, ಪೊಲೀಸರು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. 

ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್​ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!

  

ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!