ಮಾಡಾಳ್ ವಿರುದ್ಧ ಲೋಕಾ ರೇಡ್ ಪ್ರಕರಣ! ಗೃಹಸಚಿವರು ಮತ್ತು ಸರ್ಕಾರದ ಮೇಲೆ ತೀರ್ಥಹಳ್ಳಿ ಕಾಂಗ್ರೆಸ್ನ ಐದು ಡೌಟ್ಸ್!
Loka raid case against Madal! Five doubts of Theerthahalli Congress on home minister and government!
![ಮಾಡಾಳ್ ವಿರುದ್ಧ ಲೋಕಾ ರೇಡ್ ಪ್ರಕರಣ! ಗೃಹಸಚಿವರು ಮತ್ತು ಸರ್ಕಾರದ ಮೇಲೆ ತೀರ್ಥಹಳ್ಳಿ ಕಾಂಗ್ರೆಸ್ನ ಐದು ಡೌಟ್ಸ್!](https://malenadutoday.com/uploads/images/202303/image_750x_64094b183b03f.jpg)
MALENADUTODAY.COM |SHIVAMOGGA| #KANNADANEWSWEB
ಮಾಡಾಳ್ ವಿರೂಪಾಕ್ಷ ಮತ್ತು ಮತ್ತವರ ಮಗನ ವಿರುದ್ಧದ ಲೋಕಾಯುಕ್ತ ರೇಡ್ ವಿಚಾರ ಮತ್ತಷ್ಟು ರಾಜಕೀಯ ಪ್ರಹಸನಕ್ಕೆ ಸಾಕ್ಷಿಯಾಗಿದೆ. ಇದ್ದಕ್ಕಿದ್ದ ಹಾಗೆ ಬೇಲ್ ಪಡೆದು ಪ್ರತ್ಯಕ್ಷವಾದ ಮಾಡಾಳ್ ವಿರೂಪಾಕ್ಷಪ್ಪ, ಮನೆಯಲ್ಲಿ ಸಿಕ್ಕಿದ್ದು ಅಡಿಕೆಯ ಹಣ ಎಂದಿದ್ದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಈ ಸಂಬಂಧ ಅಡಿಕೆ ಮರದಲ್ಲಿ ವಿಮಲ್ ಚೀಲಗಳೊಂದಿಗೆ ಹಣ ಹುಟ್ಟುತ್ತದೆ ಎಂಬಂತಹ ವ್ಯಂಗ್ಯಚಿತ್ರಗಳು ಎಲ್ಲೆಡೆ ಹರಿದಾಡುತ್ತಿದ್ದು, ಬಿಜೆಪಿ ವಿರುದ್ಧದ ಟೀಕೆಗೆ ಬಳಕೆಯಾಗುತ್ತಿದೆ.
ಇನ್ನೂ ಮಾಡಾಳ್ ವಿರೂಪಾಕ್ಷಪ್ಪರಿಗೆ ಸಿಕ್ಕ ಬೇಲ್ನ ಬಗ್ಗೆಯೇ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇಲ್ ಪಡೆಯುವ ವಿಚಾರದಲ್ಲಿ ಸರ್ಕಾರ ಹಾಗೂ ಸಚಿವ ಆರಗ ಜ್ಞಾನೇಂದ್ರ ಮತ್ತು ಪೊಲೀಸ್ ಇಲಾಖೆ ಮಾಡಾಳ್ ವಿರೂಪಾಕ್ಷಪ್ಪರ ಪರವಾಗಿ ಪರೋಕ್ಷವಾಗಿ ಕೆಲಸ ಮಾಡಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಆರ್ಎಂ ಮಂಜುನಾಥ್ ಗೌಡರ ಜೊತೆ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಿಮ್ಮನೆ ರತ್ನಾಕರ್, ಮಾಡಾಳ್ ವಿರೂಪಾಕ್ಷಪ್ಪರ ಬೇಲ್ ವಿಚಾರದ ಬಗ್ಗೆ ಅನುಮಾನಗಳನ್ನ ವ್ಯಕ್ತಪಡಿಸಿ ಲಾ ಪಾಯಿಂಟ್ ಹಾಕಿದ್ಧಾರೆ.
ಎನದು ಕಿಮ್ಮನೆ ಸಂಶಯ!?
- ಲೋಕಾಯುಕ್ತ ರೇಡ್ ಕೇಸ್ನಲ್ಲಿ ಮಾಡಾಳು ವಿರೂಪಾಕ್ಷಪ್ಪರವರ ವಿರುದ್ಧದ ಕಂಪ್ಲೆಂಟ್ನಲ್ಲಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಆದರೆ ಅವರ ಮೇಲೆ ನೇರವಾದ ಆರೋಪವೇ ಪ್ರಕರಣದಲ್ಲಿ ಮಾಡಿಲ್ಲ
- ನ್ಯಾಯಾದೀಶರು ತಮ್ಮ ಟೇಬಲ್ ಮೇಲೆ ಇರುವ ದಾಖಲೆಗಳ ಆಧಾರದ ಮೇಲೆ ಆದೇಶ ನೀಡುತ್ತಾರೆ. ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷರನವರ ಮೇಲೆ ಅವರ ಮೇಲೆ ಪೊಲೀಸರು ಆಪಾದನೆಯನ್ನೆ ಮಾಡಿಲ್ಲ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರನ್ನು ಬಚಾವ್ ಮಾಡುವ ಪ್ರಯತ್ನ ಪೊಲೀಸರಿಂದಲೇ ನಡೆದಿದೆ ಎಂಬ ಅನುಮಾನವಿದೆ.
- ಮಾಡಾಳು ವಿರೂಪಾಕ್ಷಪ್ಪನವರು ಮನೆಯಲ್ಲಿ ಸಿಕ್ಕ ಹಣ ನಂದೆ ಎಂದು ನೇರವಾಗಿ ಹೇಳಿದ್ದಾರೆ. ಆದರೆ ಅವರು ಮತ್ತವರ ಮಗ ಪೊಲೀಸರ ಎದುರು ಈ ವಿಷಯ ಏಕೆ ಹೇಳಿಲ್ಲ. ಆ ಸಂದರ್ಭದಲ್ಲಿ ಹೇಳಿದ್ದರೇ, ಅವರು ರಿಲೀಸ್ ಆಗುತ್ತಿರಲಿಲ್ಲ.
- ಬೇಲ್ ಪಡೆದು ಅರ್ಧಗಂಟೆಯಲ್ಲಿಯೇ ಮಾಡಾಳ್ರವರು ಹೊರಕ್ಕೆ ಬರುತ್ತಾರೆ. ಆದರೆ 15 ತಂಡಗಳನ್ನ ಸಿದ್ದಪಡಿಸಿದ ಪೊಲೀಸ್ ಇಲಾಖೆ ಆರು ದಿನ ಎಲ್ಲಿ ಹುಡುಕಿತ್ತು! ಪೊಲೀಸರಿಗೆ ಅವರನ್ನು ಹುಡುಕುವುದು ಅಸಾಧ್ಯವಾಗಿದ್ದೇಕೆ?
- ಸರ್ಕಾರ ಹಾಗೂ ಆಎರಗ ಜ್ಞಾನೇಂದ್ರರವರು ವಿರೂಪಾಕ್ಷಪ್ಪನವರ ರಕ್ಷಣೆಗೆ ನಿಂತಿದ್ದಾರೆ. ಇಲ್ಲವಾದಲ್ಲಿ ಸ್ಯಾಂಟ್ರೋ ರವಿ , ಆರ್.ಡಿ ಪಾಟೀಲ್ ಕೇಸ್ನಲ್ಲಿ ಜ್ಞಾನೇಂದ್ರವರು ರಾಜೀನಾಮೆ ನಡಬೇಕಿತ್ತು.
ಬಂದ್ ಇಲ್ಲ!
ವಿದ್ಯಾರ್ಥಿಗಳಿಗೆ ರಾಜ್ಯದ ಎಲ್ಲಾ ಕಡೆ ಪರೀಕ್ಷೆ ಇರುವುದರಿಂದ ಇವತ್ತು ಆಯೋಜಿಸಿದ್ದ ಕಾಂಗ್ರೆಸ್ ಬಂದ್ ಅನ್ನು ಕಾಂಗ್ರೆಸ್ ಹೈಕಮಾಂಡ್ ಆದೇಶದ ಮೇರೆಗೆ ಕೈಬಿಡಲಾಗಿದೆ ಎಂದು ತಿಳಿಸಲು ಸಲುವಾಗಿ ಕರೆದಿದ್ದ ಈ ಸುದ್ದಿಗೋಷ್ಟಿಯಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಆರ್ಎಂ ಮಂಜುನಾಥ್ ಗೌಡರು ಆರಗ ಜ್ಞಾನೇಂದ್ರರವರ ವಿರುದ್ಧ ಹರಿಹಾಯ್ದರು. ನಂದಿತಾ ಪ್ರಕರಣವನ್ನು ಸಹ ಕೆದಕಿದ ಕಿಮ್ಮನೆ ರತ್ನಾಕರ್, ನಮಗೆ ಅಧಿಕಾರ ಬಂದು ಮೂರು ತಿಂಗಳಿನಲ್ಲಿ ಅವರನ್ನಸೆರೆ ಹಿಡಿಯುತ್ತೆವೆ ಎಂದಿದ್ದರು. ಆದರೆ ಈ ಜ್ಞಾನೇಂದ್ರ ಮತ್ತು ಅಣ್ಣ ಅಮಿತ್ ಶಾ ಏನು ಮಾಡಿದ್ರು ಎಂದು ಪ್ರಶ್ನಿಸಿದ ಮಾಜಿ ಸಚಿವ ಈ ಪ್ರಕರಣದಲ್ಲಿ ಜ್ಞಾನೇಂದ್ರವರೇ ಆರೋಪಿ ಎಂದು ದೂರಿದರು.
ಆರ್ಎಂ ಮಂಜುನಾಥ್ ಗೌಡರ ವಾಗ್ದಾಳಿ
ಇನ್ನೂ ಆರ್ಎಂ ಮಂಜುನಾಥ್ ಗೌಡರು, ಮಾಡಾಳ್ ವಿರೂಪಾಕ್ಷಪ್ಪನವರು ಅಷ್ಟು ದುಡ್ಡು ನಂದೆ ಎಂದು ಒಪ್ಪಿಕೊಳ್ಳುತ್ತಾರೆ. ಹಾಗಾಗಿದ್ದರೇ ಅವರಿಗೆ ಬೇಲ್ ಸಿಗಬಾರದಿತ್ತು. ಅಲ್ಲದೆ ಅವರದ್ದು ಮೋದಿ ಯೋಜನೆ ಕ್ಯಾಶ್ಲೆಸ್ ಮನಿ ಕಾರ್ಯಕ್ರಮಕ್ಕೆ ವಿರುದ್ಧವಾಗಿದೆ. ಅಷ್ಟೊಂದು ದುಡ್ಡನ್ನ ಕ್ಯಾಶ್ಲೆಸ್ ಆಗಿ ಬ್ಯಾಂಕ್ ಮೂಲಕ ಏಕೆ ವರ್ಗಾವಣೆ ಮಾಡಿಲ್ಲ ಎಂದ ಅವರು, ಕೇವಲ 20 ಲಕ್ಷ ಹಣಕ್ಕೆ ಡಿಕೆಶಿಯವರನ್ನು ಮೂರು ತಿಂಗಳು ಜೈಲಿಗೆ ಹಾಕಿದ್ದರು, ಈಗ 8 ಕೋಟಿ ನಂದೆ ಎನ್ನುತ್ತಿದ್ದಾರೆ ಮಾಡಾಳ್ರವರನ್ನು ಎಷ್ಟು ದಿವಸ ಜೈಲಿಗೆ ಹಾಕ್ತೀರಾ ಎಂದು ಪ್ರಶ್ನಿಸಿದ್ರು.
READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #