MALENADUTODAY.COM |SHIVAMOGGA| #KANNADANEWSWEB
thirthahalli | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕುಡಿಯಲು ಹಣ ಕೊಡದಿದ್ದರೇ , ಕೊಲೆ ಮಾಡುವುದಾಗಿ ಹೆದರಿಸಿ ಹಲ್ಲೆ ಮಾಡಿದ ಘಟನೆಯೊಂಧು ನಡೆದಿದೆ. ಈ ಸಂಬಂಧ ಕಳೆದ ಏಳನೇ ತಾರೀಖು ದೂರು ದಾಖಲಾಗಿದ್ದು, ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯು ದೂರು ನೀಡಿದ್ದಾರೆ.

ನಡೆದಿದ್ದೇನು?
ಬೆಜ್ಜವಳ್ಳಿಯಿಂದ ಟಿ.ವಿ.ಎಸ್.ಸಿ.ಟಿ. 100 ಬೈಕಿನಲ್ಲಿ ಮನೆಗೆ ಹೋಗುತ್ತಿದ್ದಾಗ ಹರಡವಳ್ಳಿಯ ಕೇಶವರವರ ತೋಟದ ಸಮೀಪ ಮುಖ್ಯ ರಸ್ತೆಯಲ್ಲಿ ಆದಿತ್ಯ ಎಂಬವನು, ಸಂತ್ರಸ್ತರನ್ನ ಅಡ್ಡಗಟ್ಟಿದ್ದಾನೆ. ಬಳಿಕ ಮಗನೆ ಕುಡಿಯಲು ಹಣ ಕೊಡು ಅಂತ ಕೇಳಿ ಬೈಕನ್ನು ಕಾಲಿನಿಂದ ಒದ್ದು, ಚರಂಡಿಗೆ ತಳ್ಳಿದ್ದಾನೆ. ಬಳಿಕ ಕಲ್ಲಿನಿಂದ ಹೊಡೆದು ಮುಂದೆ ನನಗೆ ಕುಡಿಯುಲು ಹಣ ಕೊಡಲಿಲ್ಲವೆಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು ಎಫ್ಐಆರ್ ಕೂಡ ದಾಖಲಾಗಿದೆ.
READ | *ಮೆಸ್ಕಾಂ ಪ್ರಕಟಣೆ | ಹೊಳಲೂರು, ಹೊಳೆಹೊನ್ನೂರು, ಪಿಳ್ಳಂಗಿರಿ, ಎಂಆರ್ಎಸ್ ನ ಈ ಪ್ರದೇಶಗಳಲ್ಲಿ ಮಾರ್ಚ್ 10 ರಂದು ವಿದ್ಯುತ್ ಇರೋದಿಲ್ಲ!*
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
