ಟಾರ್ಗೆಟ್​ ಕೆ.ಎಸ್​.ಈಶ್ವರಪ್ಪ : ಶಿವಮೊಗ್ಗ ಎಂ. ಶ್ರೀಕಾಂತ್​ರನ್ನು ಸೆಳೆಯಲು ಮುಂದಾಯ್ತ ಕಾಂಗ್ರೆಸ್​ / ಸಿದ್ದರಾಮಯ್ಯರಿಂದಲೇ ಸಿದ್ಧವಾಯ್ತಾ ಪ್ಲಾನ್​?

ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಅನುಯಾಯಿಗಳ ಮೂಲಕ ಶ್ರೀಕಾಂತ್‌ ಅವರನ್ನು ಸಂಪರ್ಕಿಸಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಅಂತಿಮವಾಗಿ ಚುನಾವಣೆಯ ಹೊತ್ತಿಗೆ ಲೆಕ್ಕಾಚಾರಗಳು ಸಾಕಷ್ಟು ಬದಲಾಗುವ ಸಾಧ್ಯತೆಗಳಿವೆ.

ಟಾರ್ಗೆಟ್​ ಕೆ.ಎಸ್​.ಈಶ್ವರಪ್ಪ : ಶಿವಮೊಗ್ಗ ಎಂ. ಶ್ರೀಕಾಂತ್​ರನ್ನು ಸೆಳೆಯಲು ಮುಂದಾಯ್ತ ಕಾಂಗ್ರೆಸ್​ / ಸಿದ್ದರಾಮಯ್ಯರಿಂದಲೇ ಸಿದ್ಧವಾಯ್ತಾ ಪ್ಲಾನ್​?

ಶಿವಮೊಗ್ಗ: ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾಗಿರುವ ಬಿಜೆಪಿ ಹಾಗೂ 1989 ರಿಂದ ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾ ಬಂದಿರುವ, ಐದು ಬಾರಿ ಶಾಸಕರಾಗಿ ಆಯ್ಕೆಯಾದ ಕೆ.ಎಸ್.ಈಶ್ವರಪ್ಪ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಮಣಿಸಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್‌ ವರಿಷ್ಠರು, ಅವರದೇ ಕೋಮಿನ ಮುಖಂಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ಶ್ರೀಕಾಂತ್ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕೆ ಇಳಿಸಲು ಒಲವು ತೋರಿದ್ದಾರೆ.

ಇದನ್ನು ಸಹ ಓದಿ : ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ ವಿಶೇಷತೆ ಏನು ಗೊತ್ತಾ? ಏಕೆ ಆಚರಿಸ್ತಾರೆ ತಿಳಿಯಿರಿ

ಕುರುಬ ಸಮುದಾಯದ ಪ್ರಶ್ನಾತೀತ ನಾಯಕ, ದೇವರಾಜ ಅರಸು ನಂತರದ ಹಿಂದುಳಿದ, ದಲಿತ ಸಮುದಾಯದ ನೇತಾರ ಎಂದೇ ಜನರು ಗುರುತಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ  ಸದಾ ವಾಗ್ದಾಳಿ ನಡೆಸುವ, ತೇಜೋವಧೆ ಮಾಡುವ ಈಶ್ವರಪ್ಪ ಅವರನ್ನು ಈ ಬಾರಿ ವಿಧಾನಸಭೆ ಪ್ರವೇಶಿಸದಂತೆ ತಡೆಯಲು ಯೋಜನೆ ರೂಪಿಸಿದೆ. ಅವರನ್ನು ಮಣಿಸುವ ಸಮರ್ಥ ನಾಯಕರ ಹುಡುಕಾಟದಲ್ಲಿ ತೊಡಗಿದೆ.

ಇದನ್ನು ಸಹ ಓದಿ : ಸಾಗರ ತಾಲ್ಲೂಕು | ಬಲ್ಪ್​ ಹಾಕಲು ಹೋದಾಗ ಕರೆಂಟ್ ಶಾಕ್​, ಮನೆ ಯಜಮಾನ ಸಾವು, ದುಡ್ಡು ತೆಗೆದುಕೊಳ್ತಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್​

2018ರ ವಿಧಾನಸಭಾ ಚುನಾವಣೆ  ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಅಂದು ಹಾಲಿ ಶಾಸಕರಾಗಿದ್ದ ಕೆ.ಬಿ.ಪ್ರಸನ್ನಕುಮಾರ್ ಭಾರಿ ಅಂತರರಿಂದ ಸೋಲುಕಂಡದ್ದು ಕಾಂಗ್ರೆಸ್‌ಗೆ ಮರ್ಮಾಘಾತ ತಂದಿತ್ತು. ಕ್ಷೇತ್ರದಲ್ಲಿ ಸರಿಸುಮಾರು 60 ಸಾವಿರ ಮುಸ್ಲಿಂ ಸಮುದಾಯದ ಮತಗಳಿವೆ. ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಅವರ ಸಾಂಪ್ರದಾಯಿಕ ಮತಗಳಾದ ಪರಿಶಿಷ್ಟರು, ಹಿಂದುಳಿದ ವರ್ಗಗಳ ಮತಗಳನ್ನು ಲೆಕ್ಕಹಾಕಿದರೆ ಕಾಂಗ್ರೆಸ್‌ ಅಭ್ಯರ್ಥಿಯ ಮತಗಳ ಗಳಿಕೆ 80 ಸಾವಿರದಿಂದ ಆರಂಭವಾಗುತ್ತದೆ. ಇಂತಹ ಗಟ್ಟಿ ಬುನಾದಿ ಕ್ಷೇತ್ರದಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಕನಿಷ್ಠ 60 ಸಾವಿರ ಮತಗಳನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಈ ಎಲ್ಲ ಬೆಳವಣಿಗೆಳಿಂದ ಪಾಠ ಕಲಿತಿರುವ ಕಾಂಗ್ರೆಸ್‌ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಈ ಬಾರಿ ಕಣಕ್ಕೆ ಇಳಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಇದನ್ನು ಸಹ ಓದಿ : ಸ್ಕೂಲ್​​ನಿಂದ ಮನೆಗೆ ಹೋಗ್ತಿದ್ದವನಿಗೆ ದಾರೀಲಿ ಸಿಕ್ಕಿತು 25 ಸಾವಿರ ಮೌಲ್ಯದ ವಸ್ತು! ಅದರಿಂದಲೇ ವಿದ್ಯಾರ್ಥಿಗೆ ಲಭಿಸಿತು ಗೌರವ

ಕೈಗೊಲಿಯದ ಬ್ರಾಹ್ಮಣರ ಮತ :  2013 ರ ಚುನಾವಣೆಯಲ್ಲಿ ಬಿಜೆಪಿ ಸಂಪ್ರದಾಯಿಕ ಮತಗಳಾದ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ನಗರಸಭೆ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಕಣಕ್ಕೆ ಇಳಿಸಿತ್ತು. ಅಂದು ಪ್ರಸನ್ನಕುಮಾರ್ ಗೆಲುವು ಪಡೆದರೂ, ಬ್ರಾಹ್ಮಣರ ಮತಗಳು ಸಿಕ್ಕಿದ್ದು ಅಷ್ಟಕಷ್ಟೆ. ಅಂದು ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ವಿರುದ್ಧ ಸಿಡಿದೆದ್ದು ಕೆಜೆಪಿ ಕಟ್ಟಿ, ಪಕ್ಷದ ಅಭ್ಯರ್ಥಿಯಾಗಿ ಉದ್ಯಮಿ ಎಸ್‌.ರುದ್ರೇಗೌಡ ಅವರನ್ನು ಕಣಕ್ಕೆ ಇಳಿಸಿದ್ದರು. ಬಿಜೆಪಿ ಮತಗಳು ವಿಭಜನೆಗೊಂಡು ಕಾಂಗ್ರೆಸ್‌ ಗೆಲುವು ಪಡೆದಿತ್ತು. 2018ರ ಚುನಾವಣೆಯಲ್ಲಿ ಬ್ರಾಹ್ಮಣರಿರಲಿ, ಹಿಂದುಳಿದ, ದಲಿತ ಮತಗಳೂ ಪಕ್ಷದ ಕೈಹಿಡಿಯಲಿಲ್ಲ. 

ಇದನ್ನು ನೋಡಿ : ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗ ಹೇಗೆ ಕಾಣುತ್ತಿತ್ತು ಗೊತ್ತಾ/ ಇಲ್ಲಿದೆ ಪ್ಲಾಶ್​ ಬ್ಯಾಕ್​ ವಿಡಿಯೋ

ಯಡಿಯೂರಪ್ಪರವರ ಬೆನ್ನಿಗೆ ಲಿಂಗಾಯತರು:  ಕ್ಷೇತ್ರದಲ್ಲಿ 30 ಸಾವಿರದಷ್ಟಿರುವ ವೀರಶೈವ ಲಿಂಗಾಯತ ಮತಗಳು ಯಡಿಯೂರಪ್ಪ ಅವರ ಜತೆಗಿವೆ. ಹಿಂದೆ 1999ರಲ್ಲಿ ಲಿಂಗಾಯತ ಅಭ್ಯರ್ಥಿ ಎಚ್‌.ಎಂ.ಚಂದ್ರಶೇಖರಪ್ಪ ಈಶ್ವರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, 2004ರ ಚುನಾವಣೆಯಲ್ಲಿ ಸೋಲುಕಂಡಿದ್ದರು. ಅಲ್ಲಿಂದ ಮತ್ತೆ ಲಿಂಗಯತರಿಗೆ ಅವಕಾಶ ದೊರೆತಿಲ್ಲ. ಈ ಬಾರಿ ಸಮರ್ಥ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಆರಂಭದಲ್ಲಿ ಯೋಚಿಸಿತ್ತು.

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಸರ್ಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಅವರು ಶಾಂತಿಯ ನಡಿಗೆ ಮೂಲಕ ಆರ್‌ಎಸ್‌ಎಸ್‌ ಅಂಗಳದಿಂದ ಜಿಗಿದು ಜಾತ್ಯಾತೀತ ಅಂಗಿ ತೊಡಲು ಸಿದ್ಧರಾಗಿದ್ದರು. ಪಕ್ಷವೂ ಒಲವು ತೋರಿತ್ತು. ದಿಢೀರ್ ಬೆಳವಣಿಗೆಯಲ್ಲಿ ಸರ್ಜಿ ಮರಳಿ ಬಿಜೆಪಿ ಗೂಡು ಸೇರಿದ್ದಾರೆ. ಕಾಂಗ್ರೆಸ್ಸಿನಲ್ಲೇ ಇರುವ ಎಚ್‌.ಎಂ.ಚಂದ್ರಶೇಖರಪ್ಪ ಪುತ್ರ ಯೋಗೀಶ್‌ . ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಸ್‌.ಪಿ.ದಿನೇಶ್ ರವರು ಕೈಪಡೆಯ ಲಿಸ್ಟ್​ನಲ್ಲಿರುವ ಪ್ರಮುಖ ಹೆಸರು .ಈ ನಡುವೆ  ಬಿ.ಎಸ್​. ಯಡಿಯೂರಪ್ಪ ಹಾಗೂ ಅವರ ಮಕ್ಕಳ ಮುಂದೆ ಲಿಂಗಯತ ಮತಗಳನ್ನು ಸೆಳೆಯಲು ಸಾದ್ಯವಾ ಎಂಬುದು ಪ್ರಶ್ನೆ

ಇದನ್ನು ಸಹ ಓದಿ : ಮೂರು ಮಕ್ಕಳ ತಾಯಿ, ಹುಟ್ಟಿದ ಕೂಸನ್ನ ಕಾಲಿಂದ ಒದ್ದಳು! 3ನೇ ಮಗುವನ್ನು ಬದುಕಿಸಿಕೊಳ್ಳಲು ನಡೆಯುತ್ತಿದೆ ಹರಸಾಹಸ! ಸಕ್ರೆಬೈಲ್​ನ ಕಥೆಗಳು!

ಶ್ರೀಕಾಂತ್‌ ವೈಯಕ್ತಿಕ ಮತಗಳೇ ನಿರ್ಣಾಯಕ: ಕಾಂಗ್ರೆಸ್‌ ಚಿತ್ತ ಹರಿಸಿರುವ ಎಂ.ಶ್ರೀಕಾಂತ್‌ ಅವರು ಈಶ್ವರಪ್ಪ ಸಮುದಾಯದ ನಾಯಕರರಾದರೂ, ಶಿವಮೊಗ್ಗದ ಜನರಿಗೆ ನಿಜವಾದ ಜಾತ್ಯಾತೀತ ನಾಯಕ. ಆಪಾದ್ಭಾಂದವ. ಎಲ್ಲರ ಕಷ್ಟಕ್ಕೂ ಸದಾ ಮಿಡಿಯುವ, ಸ್ಪಂದಿಸುವ ಹೃದಯದ ವ್ಯಕ್ತಿ. 2013ರ ಚುನಾವಣೆಯಲ್ಲಿ ಅವರು ಬಿಜೆಪಿ, ಕೆಜೆಪಿ ಸೇರಿದ್ದರೆ ಆ ಪಕ್ಷದ ಅಭ್ಯರ್ಥಿಗಲೇ ಶಾಸಕರಾಗುತ್ತಿದ್ದರು. ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳೇ ಇಲ್ಲಿದ್ದಿದ್ದರೂ, ಮೂರು ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿ, ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಮತಗಳನ್ನು ಪಡೆದಿದ್ದು ಅವರ ವೈಯಕ್ತಿಕ ಸಾಮರ್ಥ್ಯದ ಧ್ಯೇತಕ.

ಇದನ್ನು ಸಹ ಓದಿ : ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive

ಬಡವರು, ಕಾರ್ಮಿಕರು, ಅಲ್ಪ ಸಂಖ್ಯಾತರು, ಪರಿಶಿಷ್ಟರು, ಲಿಂಗಾಯತರೂ ಸೇರಿದಂತೆ ಎಲ್ಲ ಸಮುದಾಯಗಳ ಒಡನಾಡಿಯಾದ ಅವರಿಗೆ 80 ಸಾವಿರಕ್ಕೂ ಹೆಚ್ಚಿರುವ ಪಕ್ಷದ ಸಾಂಪ್ರದಾಯಿಕ ಮತಗಳು ದೊರೆತರೆ ಈಶ್ವರಪ್ಪ ಅವರನ್ನು ಸುಲಭವಾಗಿ ಮಣಿಸಬಹುದು ಎನ್ನುವ ಲೆಕ್ಕಾಚಾರ ನಡೆದಿದೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಅನುಯಾಯಿಗಳ ಮೂಲಕ ಶ್ರೀಕಾಂತ್‌ ಅವರನ್ನು ಸಂಪರ್ಕಿಸಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಅಂತಿಮವಾಗಿ ಚುನಾವಣೆಯ ಹೊತ್ತಿಗೆ ಲೆಕ್ಕಾಚಾರಗಳು ಸಾಕಷ್ಟು ಬದಲಾಗುವ ಸಾಧ್ಯತೆಗಳಿವೆ. 

JP EXCLUSIVE : ಪುಷ್ಪಾ ಸಿನಿಮಾದ ರಕ್ತಚಂದನ ಸ್ಮಗ್ಲಿಂಗ್​ ಸ್ಟೈಲ್​ನಲ್ಲಿ ಮಲೆನಾಡ ಜಿಲ್ಲೆಗಳಲ್ಲಿ ನಡೆಯುತ್ತಿದೆ ಕಾಡು ಮಾಂಸ ಮಾರಾಟ! ಕಾಡಿನ ಬೇಟೆಗಾಗಿ ಹುಟ್ಟಿಕೊಂಡಿದೆ ಮಹಾ ಸಿಂಡಿಕೇಟ್​! ಎಲ್ಲಿಗೆ ಹೋಗುತ್ತಿದೆ ನೂರಾರು ಕೋಟಿಯ ಬೇಟೆ? ಹೊಸ ವೀರಪ್ಪನ್​ಗಳ ಕಾಟಕ್ಕೆ ನಾಶವಾಗ್ತಿವೆ ಕಾಡುಪ್ರಾಣಿಗಳು! ಹೇಗೆ ನಡೆಯುತ್ತೆ ಗೊತ್ತಾ ಆಟ ಪಾರ್ಟ್​-1

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link