ಸಾಗರ ತಾಲ್ಲೂಕು | ಬಲ್ಪ್ ಹಾಕಲು ಹೋದಾಗ ಕರೆಂಟ್ ಶಾಕ್, ಮನೆ ಯಜಮಾನ ಸಾವು, ದುಡ್ಡು ತೆಗೆದುಕೊಳ್ತಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್
ಸಾಗರ ಟೌನ್ ಪೊಲೀಸರು ಸ್ಥಳ ಮಹಜರ್ ನಡೆಸಿ ಕೇಸ್ ದಾಖಲಿಸಿಕೊಂಡಿದ್ಧಾರೆ.
ಕರೆಂಟ್ ಶಾಕ್ಗೆ ಓರ್ವ ಬಲಿ
ಶಿವಮೊಗ್ಗ ಜಿಲ್ಲೆ ಸಾಗರ ಟೌನ್ನಲ್ಲಿ ವಿದ್ಯುತ್ ಶಾಕ್ನಿಂದ ಓರ್ವರು ಮೃತಪಟ್ಟಿದ್ದಾರೆ. ಮನೆಯಲ್ಲಿ ಬಲ್ಪ್ ಹಾಕಲು ಹೋಗಿ, ಹೋಲ್ಡರ್ಗೆ ಕೈ ಹಾಕಿದ್ದಾರೆ. ಈ ವೇಳೆ ಕರೆಂಟ್ ಹೊಡೆದಿದೆ. ಪರಿಣಾಮ ಅವರು ಮೃತಪಟ್ಟಿದ್ಧಾರೆ.
ಇದನ್ನು ಸಹ ಓದಿ : ಸ್ಕೂಲ್ನಿಂದ ಮನೆಗೆ ಹೋಗ್ತಿದ್ದವನಿಗೆ ದಾರೀಲಿ ಸಿಕ್ಕಿತು 25 ಸಾವಿರ ಮೌಲ್ಯದ ವಸ್ತು! ಅದರಿಂದಲೇ ವಿದ್ಯಾರ್ಥಿಗೆ ಲಭಿಸಿತು ಗೌರವ
ಸಾಗರ ನಗರದ ಶಾಂತಿನಗರ ನಿವಾಸಿ ರೂಪ್ ಸಿಂಗ್ ಎಂಬವರು ದುರಂತದಲ್ಲಿ ಸಾವನ್ನಪ್ಪಿದವರು. ಇನ್ನೂ ಘಟನೆ ಬೆನ್ನಲ್ಲೆ ಅವರನ್ನು ಆಸ್ಪತ್ರೆಗೆ ರವಾನಿಸಲಾಯ್ತಾದರೂ, ಅಷ್ಟರಲ್ಲಿ ಸಾವನ್ನಪ್ಪಿದ್ದರು. ಸಾಗರ ಟೌನ್ ಪೊಲೀಸರು ಸ್ಥಳ ಮಹಜರ್ ನಡೆಸಿ ಕೇಸ್ ದಾಖಲಿಸಿಕೊಂಡಿದ್ಧಾರೆ.
ಇದನ್ನು ಸಹ ಓದಿ : ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ ವಿಶೇಷತೆ ಏನು ಗೊತ್ತಾ? ಏಕೆ ಆಚರಿಸ್ತಾರೆ ತಿಳಿಯಿರಿ
ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೆಯರ್
ಇನ್ನೊಂದೆಡೆ ಸಾಗರ ತಾಲ್ಲೂಕಿನ ಡಿಎಲ್ಆರ್ ನ ಸರ್ವೆಯರ್ ಒಬ್ಬರು ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ಧಾರೆ. ತ್ಯಾಗರ್ತಿಯ ಉಮೇಶ್ ಎಂಬವರ ಜಮೀನು ಸರ್ವೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೇ ಅವರಿಂದ 3 ಸಾವಿರ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ, ಅಲ್ಲದೆ ಅಡ್ವಾನ್ಸ್ ಆಗಿ ಒಂದುವರೆ ಸಾವಿರ ರೂಪಾಯಿ ಪಡೆದಿದ್ದಾರೆ. ಉಳಿದ ಹಣವನ್ನು ಪಡೆಯುತ್ತಿರುವ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.