ವಿದ್ಯುತ್​ ಟ್ರೈನ್​ ಸಂಚಾರಕ್ಕೆ ಅಳವಡಿಸಿದ ತಾಮ್ರದ ತಂತಿ ಕಳ್ಳತನ! ಸಿಕ್ಕಿಬಿದ್ದ ಟೀಂ! ಐವರು ಅರೆಸ್ಟ್ !

Railway police have investigated a case of OHE copper wire theft near Anandpur in Sagar taluk of Shimoga district.ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಬಳಿ ಒಎಚ್‍ಇ ತಾಮ್ರದ ತಂತಿ ಕಳವು ಮಾಡಿದ ಪ್ರಕರಣವನ್ನು ರೈಲ್ವೆ ಪೊಲೀಶರು ಬೇಧಿಸಿದ್ದಾರೆ

ವಿದ್ಯುತ್​ ಟ್ರೈನ್​ ಸಂಚಾರಕ್ಕೆ ಅಳವಡಿಸಿದ ತಾಮ್ರದ ತಂತಿ ಕಳ್ಳತನ! ಸಿಕ್ಕಿಬಿದ್ದ ಟೀಂ! ಐವರು ಅರೆಸ್ಟ್ !

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  



ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಬಳಿ ಸುಮಾರು 2 ಲಕ್ಷ ಮೌಲ್ಯದ ರೈಲ್ವೆ ಒಎಚ್‍ಇ ತಾಮ್ರದ ತಂತಿಯನ್ನು ಕಳವು ಮಾಡಿ ಮಾರಾಟ ಮಾಡಿದ್ದ ಆರೋಪದಡಿಯಲ್ಲಿ ಆರ್​ಪಿಎಫ್​ ಸಿಬ್ಬಂದಿ  3 ಮಂದಿಯನ್ನು ಬಂಧಿಸಿದೆ. ಈ ಸಂಬಂಧ  ತಂತಿ ಖರೀದಿಸಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಸಹ ಅರೆಸ್ಟ್ ಮಾಡಿದೆ. 



ರೈಲ್ವೆ ರಕ್ಷಣಾ ಪಡೆ(RPF)ಯ ವಿಶೇಷ ತಂಡ, ಮೈಸೂರು ಅಪರಾಧ ವಿಭಾಗದ ನಿರೀಕ್ಷಕ ಎಂ.ನಿಶಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳು ಅಂದರ್ ಆಗಿದ್ದಾರೆ. ಅಲ್ಲದೆ ಆರೋಪಿಗಳಿಂದ ಕಳ್ಳತನ ಮಾಡಲು ಬಳಸುತ್ತಿದ್ದ ಒಂದು ನಾಲ್ಕು ಚಕ್ರದ ವಾಹನ (ಟಾಟಾ ಏಸ್) ಮತ್ತು 1 ದ್ವಿಚಕ್ರ ವಾಹನ, ಕಟ್ಟರ್ ಮತ್ತು ಲ್ಯಾಡರ್ ಟ್ರಾಲಿ ಅಥವಾ ರೈಲ್ವೆ ವಿದ್ಯುದ್ದೀಕರಣ ಉಪಕರಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ.



ಕುಂಸಿಗೆ ಮೂಲದ ನೂರುಲ್ಲಾ, ಮಂಜು ಮತ್ತು ಹರೀಶ್ ಬಂಧಿತರು. ಇವರು ಕಳ್ಳತನ ಮಾಡಿದ  ತಾಮ್ರದ ತಂತಿಗಳನ್ನು  ಶಿವಮೊಗ್ಗದ  ಸ್ಟೀಲ್ಸ್ ಮಾಲೀಕ ನಾರಾಯಣ,  ಸ್ಟೀಲ್ಸ್ ಮಾಲೀಕ ಜ್ಞಾನೇಶ್ವರಿಗೆ ಮಾರಾಟ ಮಾಡಿದ್ದರು. ಈ ಸಂಬಂಧ ಒಟ್ಟು 5 ಮಂದಿಯನ್ನು ಬಂಧಿಸಿ ಇವರಿಂದ ಸುಮಾರು 2 ಲಕ್ಷ ಮೌಲ್ಯದ 200 ಕೆ.ಜಿ ತಾಮ್ರದ ತಂತಿಗಳನ್ನು ವಶಪಡಿಸಿಕೊಂಡಿದ್ದಾರೆ. 


ಇನ್ನಷ್ಟು ಸುದ್ದಿಗಳು