ಶಿವಮೊಗ್ಗಕ್ಕೆ ಇಂದು ರಾಹುಲ್‌ ಗಾಂಧಿ | ಸಿದ್ದರಾಮಯ್ಯ | ಡಿಕೆ ಶಿವಕುಮಾರ್‌ | ಹೇಗಿದೆ ಸಿದ್ಧತೆ

Rahul Gandhi to Shimoga today Siddaramaiah DK Sivakumar How is the preparation?

ಶಿವಮೊಗ್ಗಕ್ಕೆ ಇಂದು ರಾಹುಲ್‌ ಗಾಂಧಿ | ಸಿದ್ದರಾಮಯ್ಯ | ಡಿಕೆ ಶಿವಕುಮಾರ್‌ | ಹೇಗಿದೆ ಸಿದ್ಧತೆ
Rahul Gandhi, Shimoga today ,Siddaramaiah, DK Sivakumar , madhu bangarappa

SHIVAMOGGA | MALENADUTODAY NEWS | May 2, 2024  

 

ಶಿವಮೊಗ್ಗಕ್ಕೆ ಇಂದು ಕಾಂಗ್ರೆಸ್‌ ವರಿಷ್ಟ ರಾಹುಲ್‌ ಗಾಂಧಿ ಆಗಮಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಎಐಸಿಸಿ ನಾಯಕ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಇಂದು  ಮಧ್ಯಾಹ್ನ 12ಕ್ಕೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಬಹಿರಂಗ ಸಭೆ  ನಡೆಯಲಿದೆ.  ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. 

 

ಇನ್ನೂ ಈ ಬಗ್ಗೆ ಸ್ಥಳಪರಿಶೀಲನೆ ಹಾಗೂ ಸಿದ್ದತೆಗಳನ್ನ ವೀಕ್ಷಿಸಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ‘ರಾಹುಲ್‌ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕಾರ್ಯದರ್ಶಿ ಮಯೂರ್‌ ಜಯಕುಮಾರ್ ಭಾಗವಹಿಸಲಿದ್ದಾರೆ ಎಂದರು.

 

ಸಭೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಬೈಂದೂರು ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದಲೂ ಕಾರ್ಯಕರ್ತರು ಬರಲಿದ್ದಾರೆ ಎಂದ ಮಧು ಬಂಗಾರಪ್ಪ ನಮ್ಮ ಬೂತ್ ನಮ್ಮ ಜವಾಬ್ದಾರಿ ಎಂಬ ಟ್ಯಾಗ್‌ ಲೈನ್‌ನೊಂದಿ ಮತಯಾಚನೆ ಮಾಡುತ್ತಿದ್ದೇವೆ. ಗೀತಾ ಶಿವರಾಜಕುಮಾರ್ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.