ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಕೇಸ್‌ | ಶಿವಮೊಗ್ಗದಲ್ಲಿ 22 ಕ್ಕೆ ರಾಷ್ಟ್ರಭಕ್ತರ ಪ್ರತಿಭಟನೆ | ಈಶ್ವರಪ್ಪರ ಮಾತು ಇಲ್ಲಿದೆ

Hubli Neha Hiremath murder case Nationalist protest in Shimoga at 22 | Here is KS Eshwarappa's speech

ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಕೇಸ್‌  | ಶಿವಮೊಗ್ಗದಲ್ಲಿ  22 ಕ್ಕೆ ರಾಷ್ಟ್ರಭಕ್ತರ ಪ್ರತಿಭಟನೆ | ಈಶ್ವರಪ್ಪರ ಮಾತು ಇಲ್ಲಿದೆ
Hubli Neha Hiremath murder case

SHIVAMOGGA | MALENADUTODAY NEWS |  Apr 20, 2024  

ಹುಬ್ಬಳ್ಳಿ ನಿವಾಸಿ ನೇಹಾರ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿಯು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ತಮ್ಮ ಸಿಟ್ಟನ್ನ ವ್ಯಕ್ತಪಡಿಸಿದ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ನಾವೇನೇ ಕೊಲೆ ಮಾಡಿದರೂ, ಯಾರಿಗೆ ಚಾಕು

ಹಾಕಿದರೂ ಕಾಂಗ್ರೆಸ್ ಸರ್ಕಾರ ನಮಗೆ ರಕ್ಷಣೆ  ಕೊಡುತ್ತದೆ ಎಂಬ ಧೈರ್ಯ ಮುಸ್ಲಿಂ ಗೂಂಡಾಗಳಿಗೆ ಬಂದಿದೆ ಅಂತಾ ಆರೋಪಿಸಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ಅಟ್ಟಹಾಸ ಮೆರೆಯುತ್ತಿದ್ದಾರೆ ಅಂತಾ ದೂರಿದ್ದಾರೆ. 

ಹುಬ್ಬಳ್ಳಿಯ ನೇಹಾರ ಕೊಲೆ ಪ್ರಕರಣ  (Hubli Neha Hiremath murder case ) ಸಂಬಂಧ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ÷್ಯದ ಉತ್ತರ ನೀಡುತ್ತಿದೆ.  ಕಾಲೇಜು ಆವರಣಕ್ಕೆ ಹೋಗಿ ಯುವತಿಯನ್ನು ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದ ಕೆಎಸ್‌ಇ ಹಿಂದು ಸಮಾಜ ಜಾಗೃತಿ ಆದರೆ ಈ ಸರ್ಕಾರ ಉಳಿಯಲ್ಲ  ಎಂದಿದ್ದಾರೆ. 

ಏ.22ಕ್ಕೆ ರಾಷ್ಟ್ರಭಕ್ತರ ಪ್ರತಿಭಟನೆ 

ಇನ್ನೂ ನಿನ್ನೆ ನಡೆದ ಘಟನೆಯನ್ನ ಖಂಡಿಸಿ ರಾಷ್ಟ್ರಭಕ್ತರ ಬಳಗದಿಂದ ಏಪ್ರಿಲ್‌.22ರಂದು ಬೆಳಗ್ಗೆ 10ಕ್ಕೆ ನಗರದ ದೈವಜ್ಞ ಕಲ್ಯಾಣ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ಎಂದು ಈಶ್ವರಪ್ಪನವರು ಮಾಹಿತಿ ನೀಡಿದ್ದಾರೆ.  ಮೆರವಣಿಗೆಯು ದುರ್ಗಿಗುಡಿ, ಸೀನಪ್ಪ ಶೆಟ್ಟಿ (ಗೋಪಿ ವೃತ್ತ)  ವೃತ್ತ, ಬಾಲರಾಜ್ ಅರಸ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ ಎಂದು ತಿಳಿಸಿದ ಅವರು ಈ ಪ್ರತಿಭಟನೆಗೆ ಅನುಮತಿ ನೀಡಿದ್ದರೂ ತಮ್ಮ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು. ಹಿಂದುಗಳಿಗೆ ಅನ್ಯಾಯ ಆದಾಗ ನೋಡಿಕೊಂಡು ಸುಮ್ಮನೆ ಕೂರುವ ಮನುಷ್ಯನಾನಲ್ಲ. ನಾವು ಪ್ರತಿಭಟನೆ ಮಾಡೇ ಮಾಡುತ್ತೇವೆ ಎಂದು ಗುಡುಗಿದ್ದಾರೆ.