ನೆಮ್ಮದಿಯಿಂದ ಟೀ ಕುಡಿಯುವುದಕ್ಕೂ ಆಗುತ್ತಿಲ್ಲ । ಎಸ್‌ಎನ್‌ ಚನ್ನಬಸಪ್ಪ

It is not possible to drink tea comfortably. SN Channabasappa

ನೆಮ್ಮದಿಯಿಂದ ಟೀ ಕುಡಿಯುವುದಕ್ಕೂ ಆಗುತ್ತಿಲ್ಲ । ಎಸ್‌ಎನ್‌ ಚನ್ನಬಸಪ್ಪ
SN Channabasappa

SHIVAMOGGA | MALENADUTODAY NEWS |  Apr 20, 2024  

ಹುಬ್ಬಳ್ಳಿ ನೇಹಾ ಹಿರೇಮಠ್‌ ಕೊಲೆ ಪ್ರಕರಣದ ಕುರಿತಾಗಿ ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಚನ್ನಬಸಪ್ಪ  (SN Channabasappa)ಸಹ ಆಕ್ರೋಶ ಹೊರಹಾಕಿದ್ದಾರೆ. ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ. ಹಿಂದೂಗಳಿಗೆ ಉಳಿಗಾಲ ಇಲ್ಲ ಎನ್ನುವ ರೀತಿಯಲ್ಲಿ ನಡೆಯುತ್ತಿದೆ. ಹಿಂದೂಗಳ ಹತ್ಯೆ ಮಾಡಲೇಬೇಕು ಎನ್ನುವ ರೀತಿಯ ವರ್ತನೆಗಳು ಆಗುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ಕೃತ್ಯಗಳಿಗೆ ರಕ್ಷಣೆ ಸಿಗುತ್ತಿದೆ. ರಾಜ್ಯದಲ್ಲಿ ಹಂತಕರಿಗೆ ರಕ್ಷಣೆ ನೀಡುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು. 

ಕಾಂಗ್ರೆಸ್ ಆಡಳಿತದಲ್ಲಿ ನೆಮ್ಮದಿಯಿಂದ ಟೀ ಕುಡಿಯಲು ಸಹ ಆಗುವುದಿಲ್ಲ, ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗ ಮಾಡಲು ಕಾಂಗ್ರೆಸ್ ಹೊರಟಿದೆ. ನಾವು ಮಾತನಾಡಿದರೇ ಕೋಮುವಾದಿಗಳು ಎನ್ನುತ್ತೀರಾ. ಭಯೋತ್ಪಾದಕರು ಮುಸ್ಲಿಮರಲ್ಲಿ ಹೆಚ್ಚಿದ್ದಾರೆ ಎಂದರೆ ಕೋಮುವಾದಿ ಅನ್ನುತ್ತಾರೆ .ಪಾಕಿಸ್ತಾನಕ್ಕೆ ಜಯವಾಗಲಿ ಎನ್ನುವ ಘೋಷಣೆ ಕೂಗಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ನಿರ್ಜೀವ ಸರ್ಕಾರವಾಗಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರ ಬದುಕಿದೇಯೋ ಸತ್ತೋಗಿದೆಯೋ ಅಂತ ಗೊತ್ತಾಗುತ್ತಿಲ್ಲ. ಹಿಂದೂಗಳಿಗೆ ರಕ್ಷಣೆ ಕೊಡದೆ ಇರುವ ಥರ ಈ ಸರ್ಕಾರ ನಡೆದುಕೊಳ್ಳುತ್ತಿದೆ .ಕಾಂಗ್ರೆಸ್ ಹೆಡೆಮುರಿ ಕಟ್ಟುವ ಸಮಯ ಬಂದಿದೆ ಎಂದು ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್ ಈ ಚುನಾವಣೆಯಲ್ಲಿ ದೂಳಿಪಟ ಆಗಲಿದೆ, ಹಿಂದೂತ್ವಕ್ಕೆ ಶಕ್ತಿ ಕೊಡುವ ಪಕ್ಷಕ್ಕೆ ಜನ ಬೆಂಬಲ ನೀಡ್ತಾರೆ .ನೇಹಾ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ .ಗೃಹಸಚಿವ ಪರಮೇಶ್ವರ್ ಅವರನ್ನು ಗೃಹ ಸಚಿವರು ಅಂತ ಹೇಳಬೇಕಾ ಎಂದು ಪ್ರಶ್ನಿಸಿದ ಚನ್ನಸಬಸಪ್ಪ.. ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಸಿದ್ರು. ಅಲ್ಲದೆ  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ದೇಶದ್ರೋಹಿ ಕಾಂಗ್ರೆಸ್ ಗೆ ಆಡಳಿತ ನಡೆಸುವ ನೈತಿಕತೆ ಇಲ್ಲ  ದೇಶದ್ರೋಹಿ ಹಿಂದೂ ವಿರೋಧಿ ಕಾಂಗ್ರೆಸ್ ಇದು ಕಾನೂನು ಕೈಗೆ ತಗೆದುಕೊಳ್ಳುವ ಸ್ಥಿತಿ ನಿರ್ಮಾಣ ಆದ್ರೆ ಏನ್ ಮಾಡ್ತೀರಾ ಎಂದು ಪ್ರಶ್ನಿಸಿದ್ರು.